ಮತ್ತೊಂದು ಹೊಸ ಅವತಾರಕ್ಕೆ ನಟ ರಿಷಿ ರೆಡಿ : ರಾಮನ ಅವತಾರ ಶೂಟಿಂಗ್ ಮುಗಿಸಿದ ಖುಷಿಯಲ್ಲಿ ಕವಲುದಾರಿ ಹುಡುಗ…

ನಟ ರಿಷಿ ಇದೀಗ ಖುಷಿಯ ಮೂಡ್ನಲ್ಲಿದ್ದಾರೆ. ಹೌದು, ಈಗಾಗಲೇ ಸದಭಿರುಚಿಯ ಸಿನಿಮಾಗಳ ಮೂಲಕ ತಮ್ಮದೇ ಆದ ಆಡಿಯನ್ಸ್ ಹೊಂದಿರುವ ಅದರಲ್ಲೂ, ಫ್ಯಾಮಿಲಿ ಪ್ರೇಕ್ಷಕ ವೃಂದವನ್ನು ಸಂಪಾದಿಸಿರುವ ರಿಷಿ ಸಿಂಪಲ್ ಸುನಿ ನಿರ್ದೇಶನದ “ಆಪರೇಷನ್ ಅಲಮೇಲಮ್ಮ” ಹಾಗು ಹೇಮಂತ್ ನಿರ್ದೇಶನದ “ಕವಲುದಾರಿ” ಮೂಲಕ ತಾನೊಬ್ಬ ಫ್ಲೆಕ್ಸಿಬಲ್ ನಟ ಅನ್ನುವುದನ್ನು ಸಾಬೀತು ಪಡಿಸಿದ್ದಾರೆ.

ಸದಾ ನಗುಮೊಗದಲ್ಲೇ ಇರುವ ರಿಷಿ, ಹೊಸ ಬಗೆಯ ಅದರಲ್ಲೂ ಕಂಟೆಂಟ್ ಬೇಸ್ಡ್ ಸಿನಿಮಾಗೆ ಒತ್ತುಕೊಟ್ಟವರು. ಕಥೆ ಮತ್ತು ಪಾತ್ರ ಇಷ್ಟವಾದರೆ, ಆ ಚಿತ್ರತಂಡದಲ್ಲಿ ತಾನೂ ಒಬ್ಬ ಅಂತ ಕೈ ಜೋಡಿಸುವ ನಟ ಅವರು. ಅ ಕಾರಣಕ್ಜೆ ಅವರೀಗ ಒಂದಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಅದರ ಮಧ್ಯೆಯೇ ಅವರ ಅಭಿನಯದ “ರಾಮನ ಅವತಾರ” ಚಿತ್ರವನ್ನೂ ಯಶಸ್ವಿಯಾಗಿ ಮುಗಿಸಿದ್ದಾರೆ.

ಈ ಕುರಿತು ತಮ್ಮ ಮುಖಪುಟದಲ್ಲಿ ರಿಷಿ “ರಾಮನ ಅವತಾರ” ಚಿತ್ರ ಮುಕ್ತಾಯ ಬಗ್ಗೆ ಬರೆದುಕೊಂಡಿದ್ದಾರೆ.

‘ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಸದ್ಯದಲ್ಲೇ ಚಿತ್ರದ ಬಗ್ಗೆ ಹೆಚ್ಚು ಮಾತನಾಡುತ್ತೇವೆ ಹಾಗು ಚಿತ್ರಮಂದಿರಗಳಲ್ಲಿ ಸಿಗೋಣ. ನಿಮ್ಮ ಪ್ರೀತಿ ಪ್ರೋತ್ಸಾಹವಿರಲಿ’ ಎಂದಿದ್ದಾರೆ.

ಅದೇನೆ ಇರಲಿ, ಹಿಂದಿನ ಎರಡು ಚಿತ್ರಗಳಲ್ಲೂ ಮೋಡಿ ಮಾಡಿ ಸೈ ಎನಿಸಿಕೊಂಡಿದ್ದ ರಿಷು, ಈಗ ‘ರಾಮನ ಅವತಾರ’ ಸಿನಿಮಾ ಎದುರು ನೋಡುತ್ತಿದ್ದಾರೆ. ಆ ಚಿತ್ರ ಮುಗಿಸಿದ ಖುಷಿಯಲ್ಲಿದ್ದಾರೆ. ಮುಂದೆಯೂ ಹೊಸ ಬಗೆಯ ಚಿತ್ರ ಕೊಡವ ಉತ್ಸಾಹದಲ್ಲಿದ್ದಾರೆ.

Related Posts

error: Content is protected !!