ಆಸ್ಕರ್‌ ಕೃಷ್ಣ ಹೊಸ ಕೃತ್ಯ! ರೋರಿಂಗ್ ಸ್ಟಾರ್ ಶ್ರೀಮುರಳಿ ಶೀರ್ಷಿಕೆ ಅನಾವರಣ

ಆಸ್ಕರ್ ಕೃಷ್ಣ ನಟಿಸಿ, ನಿರ್ದೇಶಿಸಿ, ಗೌತಮ್ ರಾಮಚಂದ್ರ ಅವರೊಡನೆ ಸೇರಿ ನಿರ್ಮಿಸುತ್ತಿರುವ ಹೊಸ ಚಿತ್ರ “ಕೃತ್ಯ” ಶೀರ್ಷಿಕೆಯನ್ನು ರೋರಿಂಗ್ ಸ್ಟಾರ್ “ಶ್ರೀಮುರಳಿ” ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಸಂದರ್ಭದಲ್ಲಿ ಚಿತ್ರತಂಡದೊಂದಿಗೆ ಹಿರಿಯ ನಿರ್ಮಾಪಕರಾದ, ಭಾ.ಮ ಹರೀಶ್, ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾದ ಉಮೇಶ್ ಬಣಕಾರ್ ಹಾಗೂ ನಿರ್ಮಾಪಕರುಗಳಾದ ಭಾ.ಮ ಗಿರೀಶ್, ನರಸಿಂಹರಾಜು ಜೊತೆಯಲ್ಲಿದ್ದರು.

ಸುನಿಲ್ ಕುಮಾರ್, ವಿಜಯ ಕುಮಾರ್ ಸಿಂಹ, ಟಿಪ್ಪುವರ್ಧನ್ ಇನ್ನಿತರರು ಉಪಸ್ಥಿತರಿದ್ದರು. ಚಿತ್ರದ ಉಳಿದ ವಿವರಗಳನ್ನು ಹಂತ ಹಂತವಾಗಿ ವಿವರಿಸುವುದಾಗಿ ನಿರ್ದೇಶಕ ಆಸ್ಕರ್ ಕೃಷ್ಣ ತಿಳಿಸಿದ್ದಾರೆ.

Related Posts

error: Content is protected !!