ಇದು ಅಂತರಂಗ ಶುದ್ಧಿ ಮಾಡುವ ಚಿತ್ರ! ಇದೇ ನಿರ್ದೇಶಕರ ಬಹಿರಂಗ ಸುದ್ದಿ!!


ಕನ್ನಡದಲ್ಲಿ ಈಗಾಗಲೇ ತರಹೇವಾರಿ ಶೀರ್ಷಿಕೆ ಇರುವ ಸಿನಿಮಾಗಳು ಬಂದಿವೆ. ಆ ಸಾಲಿಗೆ ಈಗ “ಇದೇ ಅಂತರಂಗ ಶುದ್ಧಿ” ಸಿನಿಮಾ ಕೂಡ ಸೇರಿದೆ. ಹೌದು, ಈಗಾಗಲೇ ಈ ಚಿತ್ರ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿ, ಇದೀಗ ರಿಲೀಸ್‌ಗೂ ರೆಡಿಯಾಗಿದೆ. ಫೆಬ್ರವರಿ 11ರಂದು ರಾಜ್ಯಾದ್ಯಂತ ಈ ಚಿತ್ರ ರಿಲೀಸ್‌ ಆಗುತ್ತಿದೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ವಿಭಿನ್ನ ಕಥೆ ಹೊಂದಿರುವ ಸಿನಿಮಾ. ಅಭಿನವ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಅಭಿಲಾಷ್ ಚಕ್ಲಾ ಹಾಗೂ ನವಾಜಿತ್ ಬಲ್ಲರ್ ನಿರ್ಮಾಣ ಮಾಡಿರುವ “ಇದೇ ಅಂತರಂಗ ಶುದ್ಧಿ” ಚಿತ್ರ ಹೊಸ ಪ್ರಯೋಗಾತ್ಮಕ ಸಿನಿಮಾ ಅನ್ನಬಹುದು. ಇಡೀ ಕಥೆಯಲ್ಲಿ ವಿಶೇಷವಾದಂತಹ ಸಾರಾಂಶವಿದೆ. ಇಂತಹ ಚಿತ್ರಕ್ಕೆ ಕುಮಾರ್‌ ದತ್ ನಿರ್ದೇಶನ ಮಾಡಿದ್ದಾರೆ. ಇದು ಇವರ ಎರಡನೇ ನಿರ್ದೇಶನದ ಚಿತ್ರ.

ಈ ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಅಂತರಂಗ ಶುದ್ಧಿ ಮಾಡಲು ಹೊರಟ ಸಿನಿಮಾ ಅನ್ನಬಹುದು. ಮನುಷ್ಯನ ಮನಸ್ಸು ಶುದ್ದಿ ಮಾಡುವಂತ ಕೆಲಸ ಅಂತಿಟ್ಟುಕೊಳ್ಳಿ. ಈ ದಿನದ ಜೀವನ ಶೈಲಿ ಹಾಗೂ ಅವಸರದ ಬದುಕಿನ ನಡುವೆ ಪ್ರೀತಿ ಪ್ರೇಮ, ಭಾವನೆಗಳು ಮತ್ತು ಪರಿಸ್ಥಿತಿಗೆ ಕನ್ನಡಿ ಹಿಡಿದಂತೆ ಮಾಡಿರುವ ಸಿನಿಮಾ ಅನ್ನೋದು ನಿರ್ದೇಶಕರ ಮಾತು.

ಎಲ್ಲೋ ಒಂದು ಕಡೆ ಮನುಷ್ಯ ತನ್ನನ್ನು ತಾನು ಕಳೆದುಕೊಂಡು ಸಾಗುತ್ತಿರುವಾಗ, ತಾನೇ ತನ್ನ ಕಣ್ಣೆದುರು ಹಲವು ಸನ್ನಿವೇಶಗಳ ಮೂಲಕ ಅಥವಾ ಕೆಲವು ಬದುಕಿನಲ್ಲಿ ಕಲಿತ ಪಾಠದಂತೆ ಬಂದು ಹೋಗೋ ಘಟನೆಗಳ ಮೂಲಕ ಕಲಿಯುವಂತಹ ಪಾಠ ಈ ಚಿತ್ರದಲ್ಲಿದೆ ಎನ್ನುತ್ತಾರೆ.


ಜೀವನ ಅನ್ನೋದೇ ಒಂದು ಪಯಣ. ಒಬ್ಬೊಬ್ಬರು ಒಂದೊಂದು ರೀತಿ ಕನಸು, ಅನುಭವ, ಆಸೆ, ಗುರಿ, ಕಾಯಕ ಹೊತ್ತು ಸಾಗುತ್ತಾರೆ. ಆ ಜರ್ನಿ ಮಧ್ಯೆ ಅವರು ಯಾರು ಯಾರನ್ನು ಭೇಟಿ ಆಗುತ್ತಾರೆ. ಏನೇನು ಆಗತ್ತೆ. ಏನೆಲ್ಲಾ ನಡೆಯತ್ತೆ ಎಂಬುದು ಕಥಾ ಹಂದರ. ಲವ್ ಪ್ರಾಣ್ ಮೆಹ್ತಾ ಸಂಗೀತ ನೀಡಿದ್ದಾರೆ. ಈಗಾಗಲೇ ಟ್ರೇಲರ್‌ ಮತ್ತು ಸಾಂಗ್‌ ಭರ್ಜರಿ ಸದ್ದು ಮಾಡಿದೆ ಕೂಡ. ವಿನಯ್ ಹೊಸ ಗೌಡರ್ ಛಾಯಾಗ್ರಹಣ ಮಾಡಿದರೆ, ಸುಪ್ರೀತ್ ಅವರ ಸಂಕಲನವಿದೆ. ಚಿತ್ರದಲ್ಲಿ ಆರ್ಯ ವರ್ಧನ್ ನಾಯಕರಾಗಿ ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಪ್ರತಿಭಾ, ಶ್ವೇತ, ರೂಪೇಶ್, ಶ್ರೀಧರ್, ಸೂರಜ್, ರಘು, ಪುನೀತ್, ಮಂಜುಳಾ ರೆಡ್ಡಿ‌ ಸೇರಿದಂತೆ ಇತರರು ಇದ್ದಾರೆ.

Related Posts

error: Content is protected !!