ಕೊಲ್ಲೂರು ದೇವಾಲಯಕ್ಕೆ ಭೇಟಿ ನೀಡಿದ ಕೆಜಿಎಫ್‌ ಟೀಮ್‌ ; ಏಪ್ರಿಲ್‌ 14 ಅದ್ಧೂರಿ ಬಿಡುಗಡೆ…

ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್‌ ಬಹು ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ. ಅಂತೆಯೇ ಆ ಸಿನಿಮಾ ರಿಲೀಸ್‌ ಆದ ನಂತರ ಆ ನಿರೀಕ್ಷೆ ಸುಳ್ಳಾಗಲೇ ಇಲ್ಲ. ಕೆಜಿಎಫ್‌2 ಸಿನಿಮಾ ಕೂಡ ಈಗ ರಿಲೀಸ್‌ಗೆ ರೆಡಿಯಾಗಿದೆ. ಕೊರೊನಾ ಅಬ್ಬರ ಇರದೇ ಹೋಗಿದ್ದರೆ ಇಷ್ಟೊತ್ತಿಗಾಗಲೇ ಸಿನಿಮಾ ರಿಲೀಸ್‌ ಆಗಬೇಕಿತ್ತು. ಬಹುದೊಡ್ಡ ನಿರೀಕ್ಷೆ ಹುಟ್ಟಿಸಿರುವ ಕೆಜಿಎಫ್‌ 2 ಇನ್ನೇನು ಏಪ್ರಿಲ್‌ 14ರಂದು ರಿಲೀಸ್‌ ಆಗೋಕೆ ತಯಾರಿ ನಡೆಸಿದೆ. ಇದರ ಬೆನ್ನಲ್ಲೇ ಕೆಜಿಎಫ್‌ 2 ಚಿತ್ರತಂಡ ಶ್ರೀ ಕೊಲ್ಲೂರು ಮೂಕಾಂಬಿಕಾ ಮತ್ತು ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದೆ.

ಹೌದು, ನಿರ್ದೇಶಕ ಪ್ರಶಾಂತ್‌ ನೀಲ್‌, ನಿರ್ಮಾಪಕರಾದ ವಿಜಯ್‌ ಕಿರಗಂದೂರು, ನಟ ಯಶ್‌ ಹಾಗು ಸಂಗೀತ ನಿರ್ದೇಶಕ ರವಿಬಸ್ರೂರು ಹಾಗು ತಂಡ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ. ಸದ್ಯ ಆ ಫೋಟೋಗಳು ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ.
ಸದ್ಯ ಈ ಬೆಳವಣಿಗೆಗಳನ್ನು ಗಮನಿಸಿದರೆ, ಕೆಜಿಎಫ್‌ 2 ಸಿನಿಮಾ ಏಪ್ರಿಲ್‌ 14ರಂದು ತೆರೆಗೆ ಬರುತ್ತಿದೆ. ದೇವಾಲಯಕ್ಕೆ ಪೂಜೆ ಸಲ್ಲಿಸಿದ್ದೇ ತಡ, ಎಲ್ಲೆಡೆ ಕೆಜಿಎಫ್‌ 2 ಸಿನಿಮಾ ಪ್ರೇಕ್ಷಕರ ಮುಂದೆ ಯಾವಾಗ ಬರುತ್ತೋ ಎಂಬ ಉತ್ಸಾಹದಲ್ಲಿ ಯಶ್‌ ಫ್ಯಾನ್ಸ್‌ ತುದಿಗಾಲ ಮೇಲೆ ನಿಂತಿದ್ದಾರೆ.

ಅಲ್ಲಿಗೆ ಇಡೀ ಜಗತ್ತು ಕೆಜಿಎಫ್‌ 2 ಚಿತ್ರಕ್ಕಾಗಿ ಎದುರು ನೋಡುತ್ತಿತ್ತು. ಈಗ ಚಿತ್ರತಂಡ ದೇವಾಲಯಕ್ಕೆ ಭೇಟಿ ನೀಡಿರುವುದು ತೆರೆಗೆ ಅಪ್ಪಳಿಸಲು ಸಾಕಷ್ಟು ತಯಾರಿ ನಡೆಸುತ್ತಿರುವುದನ್ನು ಹೇಳುತ್ತಿದೆ. ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಕೆಜಿಎಫ್‌ ಮೂಲಕ ದೊಡ್ಡ ಭರವಸೆ ಮೂಡಿಸಿದ್ದು ಸುಳ್ಳಲ್ಲ. ಕೆಜಿಎಫ್‌ ಸಿನಿಮಾ ಬಂದಿದ್ದೇ ತಡ, ಕನ್ನಡ ಚಿತ್ರರಂಗ ಮತ್ತಷ್ಟು ಶೈನ್‌ ಆಗಿದ್ದು ಸುಳ್ಳಲ್ಲ. ಕೆಜಿಎಫ್‌ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಯಶಸ್ಸು ಪಡೆದುಕೊಂಡಿತು.


ಆ ಯಶಸ್ಸಿನ ಬೆನ್ನಲ್ಲೇ ಕೆಜಿಎಫ್‌ 2 ಕೂಡ ಶುರುವಾಗಿ, ಏಪ್ರಿಲ್‌ 14ರಂದು ಪ್ರೇಕ್ಷಕರ ಮುಂದೆ ಬರಲು ಅನೌನ್ಸ್‌ ಕೂಡ ಮಾಡಿತ್ತು. ಕೊರೊನಾ ಹಾವಳಿ ಹೆಚ್ಚಾಗಿದ್ದರಿಂದ ಸಿನಿಮಾ ಮುಂದಕ್ಕೆ ಹೋಯಿತು. ಈಗ ಸದ್ಯ, ಇಡೀ ಚಿತ್ರತಂಡ ಒಂದೊಳ್ಳೆಯ ಕಾರ್ಯಕ್ಕೆ ಮುಂದಾಗಿದೆ. ದೇವಾಲಯಗಳಿಗೆ ಭೇಟಿ ನೀಡುತ್ತಿದೆ. ಆ ಮೂಲಕ ಪ್ರಚಾರ ಕಾರ್ಯವೂ ಶುರುವಾಗುತ್ತಿದೆ.

Related Posts

error: Content is protected !!