ಸಿನಿಮಾ ಮಂದಿಗೆ ಮದ್ವೆ ಮೇಲೆ ನಂಬಿಕೆನೇ ಇಲ್ಲವೇ? ತಮಿಳು ನಟ ಧನುಷ್- ಐಶ್ವರ್ಯ ವಿಚ್ಚೇದನ!

ಸಿನಿಮಾ ಜಗತ್ತಿನಲ್ಲಿ ಮತ್ತೊಂದು ಮದುವೆ ವಿಚ್ಛೇದನಗೊಂಡಿದೆ. ಹೌದು ಇತ್ತೀಚೆಗಷ್ಟೇ ಸಮಂತ, ನಾಗಚೈತನ್ಯ ವಿವಾಹ ವಿಚ್ಚೇದನ ಆಗಿತ್ತು. ಇದರ ಬೆನ್ನಲ್ಲೇ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಐಶ್ವರ್ಯ ಮತ್ತು ಖ್ಯಾತ ನಟ ಧನುಷ್ ಅವರ ವಿವಾಹ ವಿಚ್ಛೇದನವಾಗಿದೆ. ಈ ಸಂಬಂಧ ಐಶ್ವರ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ನಾನು ನಿನ್ನ ಜೀವ ನೀನು ನನ್ನ ಜೀವ. ನಾನು ಪ್ರೌಡ್ ವೈಫ್. ಹೀಗೆ ಹೇಳಿದ ರಜನಿಕಾಂತ್ ಪುತ್ರಿ ಐಶ್ವರ್ಯ ಗಂಡ ಧನುಷ್ ರಿಂದ ದೂರವಾಗಿದ್ದಾರೆ. ನನ್ನ ದಾರಿ ನನಗೆ ನಿನ್ನದಾರಿ ನಿನಗೆ ಅಂತಲೇ ವಿಚ್ಛೇದನ ಪಡೆದಿದ್ದಾರೆ.

ಕಳೆದ 18 ವರ್ಷದ ಆ ಜೀವನ ಎಲ್ಲವೂ ಸುಳ್ಳೆ..? ಗೆಳೆಯರಾಗಿದ್ದೇವು. ಒಳ್ಳೆ ಪೋಷಕರಾಗಿಯೇ ಜೀವನ ಮಾಡಿದ್ದೇವೆ. ಮತ್ತೇನೂ ಬೇಕಿಲ್ಲ. ಆದರೂ ಈಗ ನಮ್ಮನ ನಾವು ಪ್ರತೇಕವಾಗಿ ಅರ್ಥ ಮಾಡಿಕೊಂಡು ಬೆಟರ್ ಆಗಲು ಡಿವೈಡ್ ಆಗಿದ್ದೇವೆ.

ನಾನು ಮತ್ತು ಐಶ್ವರ್ಯ ದೂರ ಆಗಿದ್ದೇವೆ. ನಮ್ಮ ಈ ನಿರ್ಧಾರಕ್ಕೆ ಗೌರವ ಕೊಡಿ. ನಮ್ಮ ಖಾಸಗಿ ಬದುಕಿಗೆ ತೊಂದರೇ ಕೊಡಬೇಡಿ ಅಂತ ಧನುಷ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಬರಹ ಹಂಚಿಕೊಂಡಿದ್ದಾರೆ.

ಇವರಿಬ್ಬರೂ ಚೆನ್ನಾಗಿಯೇ ಇದ್ದರು. ಆದರೆ ಬೇರೆ ಆಗುವಂತಹ ಬಲವಾದ ಕಾರಣ ಗೊತ್ತಿಲ್ಲ. ಎಲ್ಲವೂ ಚೆನ್ನಾಗಿದ್ದ ಮೇಲೆ ಸಪರೇಟ್ ಯಾಕೆ ಆಗಿಬಿಟ್ಟರು ಅನ್ನುವುದಕ್ಕೆ ಸದ್ಯ ಉತ್ತರವಿಲ್ಲ.

ಸೆಲಿಬ್ರಿಟಿಗಳು ಮಾದರಿ. ಆದರೆ ಅವರೇ ಹೀಗೆ ಮಾಡಿದರೆ ಏನರ್ಥ? ಅವರ ಬದುಕು ಅವರಿಷ್ಟ. ಆದರೆ, ನಾಲ್ಕು ಮಂದಿಗೆ ಮಾದರುಯಾದವರು ಹಿಂಗೆ ಮಾಡಿಕೊಂಡರೆ ಏನರ್ಥ ಎಂಬ ಪ್ರಶ್ನೆ ಗಿರಕಿ ಹೊಡೆಯುತ್ತಿದೆ.
ಸಿನಿಮಾ ನಟ, ನಟಿಯರನ್ನ ಜನರು ಫಾಲೋ ಮಾಡ್ತಾರೆ. ಧನುಷ್ ಮತ್ತು ಐಶ್ವರ್ಯರನ್ನ ಸಹ ಅಲ್ಲಿನ ಫ್ಯಾನ್ಸ್ ಅನುಸರಿಸುತ್ತಿದ್ದರು. ಈಗ ಇವರ ಬದುಕು ಬೇರೆಯಾಗಿದೆ.

ಅಷ್ಟಕ್ಕೂ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮಗಳ ಮತ್ತು ಅಳಿಯನ ಜೀವನ ಸರಿ ಮಾಡಬಹುದಿತ್ತು. ಅದು ಅವರಿಗೂ ಸಾಧ್ಯವಾಗಲಿಲ್ಕವೇ ? ಈ ಪ್ರಶ್ನೆ ಎಲ್ಲರ ಮುಂದಿದೆ. ಮೊದಲಿಂದಲೂ ಜನರಿಗೆ ಈ ಸಿನಿಮಾದವರ ದಾಂಪತ್ಯ ಜೀವನ ಇಷ್ಟೆ ಬಿಡಿ ಎಂಬ ಮಾತಿತ್ತು. ಅದಕ್ಕೆ ಈ ಪ್ರಕರಣವೂ ಸಾಕ್ಷಿಯಾದಂತಿದೆ.

Related Posts

error: Content is protected !!