ಶಕುನಿ ನಿಂತಿದ್ದು ಯಾಕೆ, ಮಲ್ಲ ಶುರುವಾಗಿದ್ದು ಹೇಗೆ? ಇದು ರವಿಚಂದ್ರನ್‌ ಹೇಳಿದ ಕಥೆ…

ನಿರ್ಮಾಪಕ ರಾಮು ಅವರು ರವಿಚಂದ್ರನ್‌ ಅವರಿಗೆ “ಮಲ್ಲ” ಸಿನಿಮಾ ಮಾಡಿದ್ದು ಯಾಕೆ ಗೊತ್ತಾ? ಆ ಸಿನಿಮಾ ಆಗೋಕೆ ಕಾರಣ ಯಾರು? ಈ ಪ್ರಶ್ನೆಗೆ ರವಿಚಂದ್ರನ್‌ ಉತ್ತರ ಕೊಟ್ಟಿದ್ದಾರೆ. ಹೌದು, “ಮಲ್ಲ” ಸಿನಿಮಾ ಆಗೋಕೆ ಕಾರಣವನ್ನು ಸ್ವತಃ ರವಿಚಂದ್ರನ್‌ ಬಿಡಿಸಿ ಹೇಳಿದ್ದಾರೆ.

ವಿಷಯ ಏನೆಂದರೆ, ಈ ಹಿಂದೆ ರವಿಚಂದ್ರನ್‌ ಅವರಿಗೆ “ಶಕುನಿ” ಸಿನಿಮಾ ಶುರುಮಾಡಿದ್ದರು ರಾಮು. ಆ ಸಿನಿಮಾ ಅದಾಗಲೇ ಶೇ.೪೦ರಷ್ಟು ಚಿತ್ರೀಕರಣ ಕೂಡ ನಡೆದಿತ್ತು. ಒಂದು ಇದ್ದಕ್ಕಿದ್ದಂತೆಯೇ ಏನಾಯ್ತೋ ಏನೋ ರಾಮು ಅವರು ರವಿಚಂದ್ರನ್‌ ಮನೆಗೆ ಹೋಗಿ, ಶಕುನಿ ಗೆಟಪ್‌ ಇಷ್ಟವಿಲ್ಲ ಅಂದಿದ್ದಾರೆ. ಅರೆ, ಈಗಾಗಲೇ ಶೇ.೪೦ರಷ್ಟು ಚಿತ್ರೀಕರಣವಾಗಿದೆ. ಈಗ ನೋಡಿದರೆ, ಗೆಟಪ್‌ ಚೆನ್ನಾಗಿಲ್ಲ ಅಂದರೆ ಹೇಗೆ? ಅಂದಿದ್ದಾರೆ ರವಿಚಂದ್ರನ್.‌

ಆಗ ರಾಮು ಅವರು, ನೀವು ಹೀಗೆ ಉದ್ದ ಕೂದಲು ಬಿಟ್ಟುಕೊಂಡಿರುವುದು ಇಷ್ಟ ಕಾಣುತ್ತಿಲ್ಲ ಅಂದಿದ್ದಾರೆ ರಾಮು. ಸರಿ, ಶಕುನಿನ ಪಕ್ಕಕ್ಕಿಟ್ಟು, ನಾನೊಂದು ಸಿನಿಮಾ ಮಾಡಿಕೊಡ್ತೀನಿ. ನನ್ನ ಇಷ್ಟಕ್ಕೆ ಬಿಟ್ಟು ಬಿಡು ಅಂತ ಹೇಳಿದರಂತೆ ರವಿಚಂದ್ರನ್.‌ ಆಗ ಶುರುವಾಗಿದ್ದೇ, “ಮಲ್ಲ” ಸಿನಿಮಾವಂತೆ. ಶಕುನಿ ನಿಂತು ಹೋಗಿದ್ದಕ್ಕೆ ಕಾರಣ ಕೊಡುತ್ತಲೇ, ಮಲ್ಲ ಶುರುವಾದ ಬಗೆಯನ್ನೂ ರವಿಚಂದ್ರನ್‌ ಹೇಳಿಕೊಂಡಿದ್ದಾರೆ. ಅಂದಹಾಗೆ, ರವಿಚಂದ್ರನ್‌ ಈ ವಿಷಯ ಹಂಚಿಕೊಂಡಿದ್ದು, “ಅರ್ಜುನ್‌ ಗೌಡ” ಸಿನಿಮಾದ ಪ್ರೀ‌ ರಿಲೀಸ್ ಇವೆಂಟ್‌ನಲ್ಲಿ.

Related Posts

error: Content is protected !!