ಕಾಶೀನಾಥ್‌ ಪುತ್ರನ ಚಿತ್ರಕ್ಕೆ ಹಾಡು ಹಾಡಿ ಸಾಥ್‌ ನೀಡಿದ ಅಭಿನಯ ಚಕ್ರವರ್ತಿ -ಶೂಟಿಂಗ್‌ ಮುಗಿಸಿ ನಿಂತ ʼಎಲ್ಲಿಗೆ ಪಯಣ ಯಾವುದೋ ದಾರಿ”

ಅಭಿಮನ್ಯು ಕಾಶೀನಾಥ್‌ ಅಭಿನಯದ ಚಿತ್ರʼಎಲ್ಲಿಗೆ ಪಯಣ ಯಾವುದೋ ದಾರಿʼ ಶೂಟಿಂಗ್‌ ಮುಗಿಸಿದೆ. ಥ್ರಿಲ್ಲರ್‌ ಜಾನರ್‌ ನ ಈ ಸಿನಿಮಾ ವಿಭಿನ್ನ ಕಾರಣಕ್ಕೆ ಸದ್ದು ಮಾಡುತ್ತಿದೆ. ಅದರಲ್ಲೂ ಈ ಚಿತ್ರದ ಒಂದು ಹಾಡಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಹಾಡಿದ್ದಾರೆಂದರೆ ಅಲ್ಲೇನೋ ವಿಶೇಷತೆ ಇದೆ ಎಂದೇ ಅರ್ಥ.

………………………………………………

ಕನ್ನಡದ ಹೆಸರಾಂತ ನಟ, ನಿರ್ದೇಶಕ ಕಾಶೀನಾಥ್‌ ಪುತ್ರ ಅಭಿಮನ್ಯು ಕಾಶೀನಾಥ್‌ ಅಭಿನಯದ ʼಎಲ್ಲಿಗೆ ಪಯಣ ಯಾವುದೋ ದಾರಿʼ ಚಿತ್ರಕ್ಕೆ ಶೂಟಿಂಗ್‌ ಮುಗಿದಿದೆ. ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯ ವಿವಿಧೆಡೆಗಳಲ್ಲಿ ಸುಂದರ ತಾಣಗಳಲ್ಲಿ ಚಿತ್ರ ತಂಡ ಒಟ್ಟು 108 ದಿನಗಳ ಕಾಲ ಚಿತ್ರೀಕರಣ ನಡೆಸಿ, ಬೆಂಗಳೂರಿಗೆ ವಾಪಾಸ್‌ ಆಗಿದೆ. ಕಿರಣ್‌ ಸೂರ್ಯ ನಿರ್ದೇಶನ ಈ ಚಿತ್ರವು ವಿಭಿನ್ನ ಕಥಾ ಹಂದರ ಹೊಂದಿದೆ. ಥ್ರಿಲ್ಲರ್‌ ಜಾನರ್‌ ನ ಈ ಕಥೆಗೆ ನಿರ್ದೇಶಕ ಕಿರಣ್‌ ಸೂರ್ಯ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಸುದರ್ಶನ ಆರ್ಟ್ಸ್ ಲಾಂಛನದಲ್ಲಿ ಜತಿನ್ ಜಿ ಪಟೇಲ್ ಹಾಗೂ ಚೇತನ್ ಕೃಷ್ಣ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಾಶೀನಾಥ್‌ ಪುತ್ರ ಅಭಿಮನ್ಯ ಕಾಶೀನಾಥ್‌ ಅವರಿಗೆ ಇಲ್ಲಿ ಸ್ಪೂರ್ತಿ ಉಡಿಮನೆ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ವಿಜಯಶ್ರಿ ಕಲಬುರ್ಗಿ ಕೂಡ ನಾಯಕಿ ಆಗಿ ಅಭಿನಯಿಸಿದ್ದಾರೆ. ಹೆಸರಾಂತ ನಟ ಬಲ ರಾಜವಾಡಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಚಿತ್ರದಲ್ಲಿ ಎರಡು ಹಾಡುಗಳಿದ್ದು, ಅನಂತ್‌ ಕಾಮತ್‌ ಸಂಗೀತ ನೀಡಿದ್ದಾರೆ. ವಿಶೇಷ ಅಂದ್ರೆ ಎರಡು ಹಾಡುಗಳ ಪೈಕಿ ಒಂದು ಹಾಡಿಗೆ ಅಭಿನಯ ಚಕ್ರವರ್ತಿ ಕಿಚ್‌ ಸುದೀಪ್‌ ಧ್ವನಿ ನೀಡಿದ್ದಾರೆ. ಹೊಸಬರ ತಂಡಕ್ಕೆ ನಟ ಸುದೀಪ್‌ ತಮ್ಮದೇ ರೀತಿಯಲ್ಲಿ ಸಾಥ್‌ ನೀಡಿ, ಶುಭ ಹಾರೈಸಿದ್ದಾರೆ. ಚಿತ್ರದ ತಂಡ ಇಷ್ಟರಲ್ಲಿಯೇ ಈ ಸಾಂಗ್‌ ಲಾಂಚ್‌ ಮೂಲಕ ಸದ್ದು ಮಾಡಲು ಸಜ್ಜಾಗುತ್ತಿದೆ. ಚಿತ್ರಕ್ಕೆ ಸತ್ಯ ಛಾಯಾಗ್ರಹಣ, ಗಣೇಶ್ ನಿರ್ಚಲ್ ಸಂಕಲನ ಹಾಗೂ ವಿಶ್ವ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Related Posts

error: Content is protected !!