ನನ್ನ ಸಾವಿಗೆ ಬಹದ್ದೂರ್ ಚೇತನ್ ಕಾರಣ!? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಅಪ್ಪು ಫ್ಯಾನ್ ‌ಡೆತ್ ನೋಟ್ !‌

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ ಎಂದು ಹೇಳಿಕೊಂಡಿರುವ ರಾಜು ಹೆಸರಿನ ವ್ಯಕ್ತಿಯೊಬ್ಬ,
ನನ್ನ ಸಾವಿಗೆ ಬಹದ್ದೂರ್ – ಭರ್ಜರಿ ಖ್ಯಾತಿಯ ಚೇತನ್ ಕುಮಾರ್ ಹೊರೆತು ಬೇರಾರು ಅಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ.‌ ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಸೂಸೈಡ್ ಪತ್ರ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಅಷ್ಟಕ್ಕೂ, ರಾಜು ಹೆಸರಿನ ವ್ಯಕ್ತಿ‌ ಅಪ್ಪು‌ಅವರ ಅಪ್ಪಟ ‌ಅಭಿಮಾನಿಯಾ ?‌ ಈತ ಸಾವನ್ನಪ್ಪಿದ್ದು ನಿಜವಾ ? ಈ ವ್ಯಕ್ತಿ ಉಸಿರು ಚೆಲ್ಲೋದಕ್ಕೆ ಚೇತನ್ ಹೇಗೆ ಕಾರಣ ಆಗ್ತಾರೆ ? ಹೀಗೆ ಹಲವು ಪ್ರಶ್ನೆಗಳು ಮೂಡುತ್ತವೆ.
ಈ ಎಲ್ಲಾ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ …

ಜೇಮ್ಸ್ ಪವರ್ ಸ್ಟಾರ್ ಪುನೀತ್ ನಟನೆಯ ಬಹುನಿರೀಕ್ಷೆಯ ಚಿತ್ರ. ಇದೇ ಮೊದಲ ಭಾರಿಗೆ ಅಪ್ಪು ಹಾಗೂ ಚೇತನ್ ಒಂದಾಗಿದ್ದಾರೆ. ಬಹದ್ದೂರ್, ಭರ್ಜರಿ, ಭರಾಟೆಯಂತಹ ಸೂಪರ್ ಡೂಪರ್ ಚಿತ್ರಗಳನ್ನು ಕೊಟ್ಟಂತಹ ನಿರ್ದೇಶಕ ಚೇತನ್ ಕುಮಾರ್, ಜೇಮ್ಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ದೊಡ್ಮನೆ ಬಳಗ ಮಾತ್ರವಲ್ಲ ಇಡೀ‌ ಸಿನಿಮಾ ‌ಸಮೂಹವೇ ಕಾಯುವಂತೆ ಮಾಡಿದ್ದಾರೆ. ಹೀಗಿರುವಾಗ
ಪುನೀತ್ ಅಭಿಮಾನಿ ನಾನು ಎಂದು ಹೇಳಿಕೊಂಡಿರುವ ರಾಜು,
ಜೇಮ್ಸ್ ಟೀಸರ್ ಬಿಡುಗಡೆಯಾಗದಿರುವುದೇ ನಾನು ಸಾಯೋದಕ್ಕೆ ಕಾರಣ ಎಂದಿದ್ದಾರೆ. ಜೊತೆಗೆ ಬಹದ್ದೂರ್ ಚೇತನ್ ಅವರೇ ನಾನು ಉಸಿರು ಚೆಲ್ಲೋದಕ್ಕೆ ಕಾರಣ ಎಂದು ಸೂಸೈಡ್ ಪತ್ರದಲ್ಲಿ ನಮೂದಿಸಿದ್ದಾರೆ.

ಈ ಪತ್ರದ ಮೂಲಕ ಎಲ್ಲರಿಗೂ ತಿಳಿಸುವುದೇನೆಂದರೆ ಕಳೆದ ಎರಡು ವರ್ಷಗಳಿಂದ ಜೇಮ್ಸ್ ಚಿತ್ರದ ಟೀಸರ್‌ಗಾಗಿ ಕಾಯುತ್ತಿದ್ದೇನೆ. ಕಾದು ಕಾದು ತಲೆಯಲ್ಲಿ ಕೂದಲು ಬೆಳ್ಳಗಾಯಿತೆ ಹೊರೆತು ಟೀಸರ್ ಮಾತ್ರ ಬರಲಿಲ್ಲ. ಬಹುಷಃ ನಿರ್ದೇಶಕ ಚೇತನ್ ಕುಮಾರ್ ಅವರು ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ ಅನಿಸುತ್ತೆ.

ತುಂಬಾ ಕಷ್ಟಪಟ್ಟು ಚೇತನ್ ಕುಮಾರ್ ಅವರ ಮೊಬೈಲ್ ನಂಬರ್ ಪಡೆದು ಟೀಸರ್ ಯಾವಾಗ ಎಂದು ಕೇಳಿದರೆ ವಿಲ್' ಎಂಬ ಉತ್ತರ ಬಿಟ್ಟು ಬೇರೆ ಏನು ಬರಲಿಲ್ಲ. ಇದರಿಂದ ನನಗೆ ಜೀವನವೇ ಬೇಸರವಾಗಿ ಆತ್ಮಹತ್ಯೆ’ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ಮುಖ್ಯ ವಿಚಾರ ಏನೆಂದರೆ ನನ್ನ ಸಾವಿಗೆ ಕಾರಣ ಚೇತನ್‌ಕುಮಾರ್ ಹೊರೆತು ಬೇರೆ ಯಾರು ಅಲ್ಲ. ಪತ್ರದ ಹಿಂದೆ ಅವರ ನಂಬರ್ ಬರೆದಿದ್ದೇನೆ. ನನಗೆ ಆದ ಅನ್ಯಾಯ ಬೇರೆ ಯಾರಿಗೂ ಆಗದಿರಲಿ ಎನ್ನುವುದೇ ನನ್ನ ಆಸೆ. ಮುಂದಿನ ಜನ್ಮದಲ್ಲಾದರೂ ಜೇಮ್ಸ್ ಟೀಸರ್ ನೋಡುತ್ತೇನೆ ಎಂಬ ನಂಬಿಕೆ ನನಗಿದೆ.


ಐ ಲವ್ ಯೂ ಅಪ್ಪು ಇಂತಿ ನಿಮ್ಮ ರಾಜು

ಈ ರೀತಿಯಾಗಿ ಬರೆದಿರುವ ಲೆಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅಷ್ಟಕ್ಕೂ, ರಾಜು ಹೆಸರಿನ ವ್ಯಕ್ತಿ‌ ಅಪ್ಪು‌ಅವರ ಅಪ್ಪಟ ‌ಅಭಿಮಾನಿಯಾ ?‌ ಈತ ಸಾವನ್ನಪ್ಪಿದ್ದು ನಿಜವಾ ? ಈ ವ್ಯಕ್ತಿ ಉಸಿರು ಚೆಲ್ಲೋದಕ್ಕೆ ಚೇತನ್ ಹೇಗೆ ಕಾರಣ ಆಗ್ತಾರೆ ? ಜೇಮ್ಸ್ ಟೀಸರ್ ರಿಲೀಸ್ ಮಾಡಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದು ಎಷ್ಟು ಸರೀ?

ಕೊರೊನಾ ಲಾಕ್ ಡೌನ್ ಕಾರಣದಿಂದ ಸಂಕಷ್ಟದಲ್ಲಿದ್ದು ಈಗಷ್ಟೇ ಚೇತರಿಸಿಕೊಳ್ತಿರುವ ಚಿತ್ರತಂಡಗಳಿಗೆ ಈ ರೀತಿಯಾಗಿ ಎಮೋಷನಲ್ ಬ್ಲಾಕ್ ಮೇಲ್ ಮಾಡುವುದು ತಪ್ಪಲ್ಲವೇ ? ಅಷ್ಟಕ್ಕೂ, ಅಂದಾಭಿಮಾನ ಮೆರೆಯವುದೇಕೆ ? ಸ್ಟಾರ್ ಗಳನ್ನು ಸಂಕಷ್ಟಕ್ಕೆ ದೂಡುವುದೇಕೆ? ಒಂದ್ವೇಳೆ ರಾಜು ಹೆಸರಿನ ವ್ಯಕ್ತಿ ಸಾವಿಗೀಡಾಗಿದ್ದರೆ ಮುಂದಿನ ದಿನಗಳಲ್ಲಿ ಇಂತಹ ಕೆಲಸ ಮುಂದೆ ಯಾವ ಅಭಿಮಾನಿಯೂ ಮಾಡದಿರಲಿ ಎನ್ನುವುದೇ ಸ್ಟಾರ್ಸ್ ಆಶಯ

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!