ಮೇಘನಾ ರಾಜ್ ಕೊಟ್ರು ಸಂಥಿಂಗ್ ಎಕ್ಸೈಟಿಂಗ್ ನ್ಯೂಸ್ – ಯುವ ಸಾಮ್ರಾಟನ ಫ್ಯಾನ್ಸ್ ಥ್ರಿಲ್ !

ಇಂತಹದ್ದೊಂದು ಸುದ್ದಿಗೋಸ್ಕರ ಸ್ಯಾಂಡಲ್‌ವುಡ್ ಯುವ ಸಾಮ್ರಾಟನ ಅಪ್ಪಟ ಅಭಿಮಾನಿಗಳು ಮಾತ್ರವಲ್ಲ, ನಟಿ ಮೇಘನಾ ರಾಜ್ ಅಭಿಮಾನಿಗಳು ಕೂಡ ಕಾತುರದಿಂದ ಕಾಯ್ತಿದ್ದರು. ಫೈನಲೀ ಅಭಿಮಾನಿ ದೇವರುಗಳ ಕಾಯುವಿಕೆಯ ಕೌತುಕಕ್ಕೆ ಬ್ರೇಕ್ ಬಿದ್ದಿದೆ. ಫ್ಯಾನ್ಸ್ ಆಸೆ-ಆಕಾಂಕ್ಷೆಯನ್ನು ಈಡೇರಿಸಿದ್ದಾರೆ. ವಿಐಪಿಗಳ ಕನಸಿನ ಕೋರಿಕೆಯಂತೆ, ಅವರ ಅಭಿಲಾಷೆಯಂತೆ ಬಣ್ಣದ ಜಗತ್ತಿಗೆ ಮರಳಿದ್ದಾರೆ. ಮುಖಕ್ಕೆ ಬಣ್ಣ ಹಚ್ಚಿ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ.

ನಟಿ ಮೇಘನಾ ಚಿತ್ರರಂಗಕ್ಕೆ ಮರಳಬೇಕು, ಮಾಯಲೋಕದಲ್ಲಿ ಮಿನುಗಬೇಕು ಎನ್ನುವುದು ಅಭಿಮಾನಿ ದೇವರುಗಳ ಅಭಿಲಾಷೆಯಾಗಿತ್ತು. ಮನೆದೇವರ ಅಗಲಿಕೆಯಿಂದ ಮನನೊಂದಿರುವ ಮೇಘನಾ ಆದಷ್ಟು ಬೇಗ ಚೇತರಿಸಿಕೊಂಡು ಗಂಧದಗುಡಿಗೆ ವಾಪಾಸ್ ಆಗ್ಬೇಕು ಅಂತ ಫ್ಯಾನ್ಸ್ ಬಯಸಿದ್ದರು. ಅಭಿಮಾನಿಗಳ ಮಹದಾಸೆಯಂತೆ ನಟಿ ಮೇಘನಾ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಇವತ್ತು ಬೆಳಗ್ಗೆ ಸಂಥಿಂಗ್ ಎಕ್ಸೈಟಿಂಗ್ ನ್ಯೂಸ್ ಕೊಟ್ಟ ಮೇಘನಾ, ಸರ್ಜಾ ಕುಟುಂಬದ ವಿಐಪಿಗಳು ಹಾಗೂ ಆಟಗಾರನ ಅಭಿಮಾನಿಗಳು ಥ್ರಿಲ್ ಆಗುವಂತೆ ಮಾಡಿದ್ದಾರೆ.

ಅಷ್ಟಕ್ಕೂ, ಯಾವ್ ಸಿನಿಮಾ? ಏನ್ ಕಥೆ? ಅದ್ಯಾವ ಚಿತ್ರತಂಡವನ್ನು ಸೇರಿಕೊಂಡರು? ಅದೆಂತಾ ಪಾತ್ರಕ್ಕೆ ಜೀವ ತುಂಬಿದರು? ಈ ಕೂತೂಹಲವನ್ನು ನಟಿ ಮೇಘನಾ ಹಾಗೇ ಉಳಿಸಿದ್ದಾರೆ. ಮಿಲ್ಟ್ರಿ ಮಾಸ್ಕ್ ಧರಿಸಿ, ಕೂಲಿಂಗ್ ಗ್ಲಾಸ್ ತೊಟ್ಟು ಕಾರು ಏರಿದ ಮೇಘನಾ, `ಶೂಟಿಂಗ್ ಫಾರ್ ಸಂಥಿಂಗ್ ರಿಯಲಿ ಎಕ್ಸೈಟಿಂಗ್ ಟುಡೇ’ ಅಂತ ಬ್ರಿಟಿಷರ ಭಾಷೆಯಲ್ಲಿ ಎರಡು ಲೈನ್ ಟೈಪ್ ಮಾಡಿ ಒಂದ್ ಫೋಟೋ ಸಮೇತ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೇಘನಾ ಪೋಟೋ ಅಂಡ್ ಪೋಸ್ಟ್ ನೋಡಿ ನಿಜಕ್ಕೂ ಫ್ಯಾನ್ಸ್ ಖುಷಿಯಾಗಿದ್ದಾರೆ. ಮೇಘನಾ ಕಮ್‌ಬ್ಯಾಕ್ ಪಯಣ ಭರ್ಜರಿಯಾಗಿ ಶುರುವಾಗಲಿ ಅಂತ ಆಶಿಸುತ್ತಿದ್ದಾರೆ.

ಅಂದ್ಹಾಗೇ, ಮೇಘನಾ ಕೈಯಲ್ಲಿ ಎರಡ್ಮೂರು ಸಿನಿಮಾಗಳಿವೆ. ಸೆಲ್ಫೀ ಮಮ್ಮಿ ಗೂಗಲ್ ಡ್ಯಾಡಿ ಹಾಗೂ ಬುದ್ದಿವಂತ-2 ಚಿತ್ರಗಳು ಚಿರು ಇದ್ದಾಗಲೇ ಒಪ್ಪಿಕೊಂಡಿದ್ದರು. ಚಿತ್ರೀಕರಣ ಕೂಡ ಶುರುವಾಗಿತ್ತು. ಈ ಮಧ್ಯೆ ವಿಧಿಯೆಂಬ ಆಟಗಾರನ ಆಟದಿಂದ ಯುವಸಾಮ್ರಾಟ ಚಿರು ಅರ್ಧಕ್ಕೆ ಜೀವನದ ಆಟ ಮುಗಿಸಬೇಕಾಗಿ ಬಂತು. ಜನ್ಮಕೊಟ್ಟ ಹೆತ್ತವರು, ರಕ್ತಹಂಚಿಕೊಂಡು ಹುಟ್ಟಿದ ಅಣ್ತಮ್ಮ, ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದ ಪತ್ನಿಯನ್ನು ಬಿಟ್ಟು ಬಾರದ ಲೋಕಕ್ಕೆ ಹೊರಟೇ ಹೋದರು. ಚಿರು ಗೋಣು ಚೆಲ್ಲಿದ ಕ್ಷಣದಿಂದ ರಾಯನ್ ರಾಜ್ ಸರ್ಜಾ ಆಗಮನದವರೆಗೆ ಮನೆ-ಮನಸ್ಸು ಬರೀ ಕತ್ತಲೆಯಿಂದ ತುಂಬಿತ್ತು. ಆದ್ರೀಗ, ಎರಡು ಕುಟುಂಬದ ಮನೆ-ಮನಸ್ಸುಗಳಲ್ಲಿ ಪ್ರಕ್ಷುಬ್ಧ ಬೆಳಕಿನ ವಾತಾವರಣ.

ವಾಯುಪುತ್ರನನ್ನೇ ಹೋಲುವ, ಚಿರುನಾ ಕಣ್ಮುಂದೆ ತಂದು ನಿಲ್ಲಿಸುವ ರಾಯನ್ ರಾಜ್ ಸರ್ಜಾ ಇದೀಗ ಅಮ್ಮನನ್ನು ಶೂಟಿಂಗ್‌ಗೆ ಮರಳುವಂತೆ ಮಾಡಿದ್ದಾನೆ. `ಚಿರು ನನ್ನ ರಾಜ ನಮ್ಮ ರಾಯನ್ ನನ್ನ ಯುವರಾಜ’ ಹೀಗನ್ನುವ ಮೇಘನಾ ಮತ್ತೆ ಕಲಾಸರಸ್ವತಿಯ ಆರಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಯನ್ ರಾಜ್ ಸರ್ಜಾಗೆ ಒಂಭತ್ತು ತಿಂಗಳು ತುಂಬಿದ ದಿನದಂದೇ ಜಾಹೀರಾತುಗೋಸ್ಕರ ಬಣ್ಣ ಹಚ್ಚಿದ್ದರು. ಇದಾದ್ಮೇಲೆ ಮಗನ ನಾಮಕರಣ ಶಾಸ್ತ್ರ ಅದ್ದೂರಿಯಾಗಿ ನಡೀತು. ಇದೀಗ ಮತ್ತೆ ಮುಖಕ್ಕೆ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ನಿಂತಿದ್ದಾರೆ. ನಿರ್ದೇಶಕನ ಕಲ್ಪನೆಯಲ್ಲಿ ಅರಳಿದ ಪಾತ್ರಕ್ಕೆ ಜೀವತುಂಬುತ್ತಿದ್ದಾರೆ. ಪತ್ನಿ ಮೇಘನಾ ಕಲಾರಾಧನೆಗೆ ಬೆಳ್ಳಿಮೋಡಗಳಿಂದಲೇ ಚಿರು ಹಾರೈಸುತ್ತಿರುತ್ತಾರೆ. ಸೋ, ಸದ್ಯಕ್ಕೆ ಗುಟ್ಟಾಗಿರುವ ನಟಿ ಮೇಘನಾ ಸಿನಿಮಾ ಹಾಗೂ ಪಾತ್ರ ಆದಷ್ಟು ಬೇಗ ಅವರೇ ಹೇಳಿಕೊಳ್ಳಲಿ. ಫ್ಯಾನ್ಸ್ ಜೊತೆ ಬೆಳ್ಳಿಪರದೆಯನ್ನು ಖುಷಿಪಡಿಸಲಿ ಅನ್ನೋದೇ ನಮ್ಮ ಆಸೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!