ಹೊಂಬಾಳೆ ಫಿಲ್ಮ್ಸ್ ಹಬ್ಬದೂಟ; ಸೆಪ್ಟೆಂಬರ್ 22ಕ್ಕೆ ಸಿನಿ ಪ್ರೇಮಿಗಳಿಗೆ ಬಾಳೆದೆಲೆ ಬಾಡೂಟ !

ಗಂಧದಗುಡಿಯಲ್ಲಿ ಹೊಡೆದ ಹೊಂಬಾಳೆ ಗೊನೆಗೆ ಇವತ್ತು ಪಕ್ಕದ ರಾಜ್ಯದಲ್ಲಿ ಮಾತ್ರವಲ್ಲ ಹೊರದೇಶದಲ್ಲೂ ಬೇಡಿಕೆ‌ ಇದೆ. ಅದಕ್ಕೆ ಕಾರಣ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಾಣಗೊಳ್ಳುವ ಚಿತ್ರಗಳು‌ ಸಿನಿಮಾ ಪ್ರೇಕ್ಷಕರಿಗೆ ಬಾಳೆದೆಲೆಯಲ್ಲಿ ಹಬ್ಬದೂಟ ಸವಿದಂತಿರುತ್ತದೆ. ಅಟ್ ದಿ‌ ಸೇಮ್ ಟೈಮ್ ಬಾಳೆದೆಲೆಯಲ್ಲಿಯೇ ಬಿರಿಯಾನಿ ಬಡಿದ್ಹಂಗೆ ಇರುತ್ತೆ. ಸದ್ಯ ಹಾಟ್ ಅಂಡ್ ಸ್ಮೈಸಿ ಸಮಾಚಾರ್ ಅಂದರೆ ಹೊಂಬಾಳೆ ಮುಖ್ಯಸ್ಥರು ಸೆಪ್ಟೆಂಬರ್ 22 ರಂದು ಹಬ್ಬದೂಟ ಬಡಿಸೋದಕ್ಕೆ ರೆಡಿಯಾಗಿರುವುದು.

ಹೌದು, ಪ್ರತಿಯೊಬ್ಬರಲ್ಲೂ ಹಸಿವಿದೆ, ಪ್ರತಿ ಅಗಳಿನಲ್ಲೂ ತಿನ್ನುವವರ ಹೆಸರಿದೆ.
‘ಅನ್ನದಾತೋ ಸುಖೀಭವ’ ಹೀಗಂತ ಬಾಳೆದೆಲೆಯಲ್ಲಿಯೇ ಬರೆದು ತಮ್ಮ ಹೊಂಬಾಳೆಯ 12ನೇ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ನ ಇದೇ ಸೆಪ್ಟೆಂಬರ್ 22 ರಂದು ರಿವೀಲ್ ಮಾಡುವುದಾಗಿ ಹೊಂಬಾಳೆ ಮುಖ್ಯಸ್ಥರು ಸೋಷಿಯಲ್ ಮೀಡಿಯಾ ದಲ್ಲಿ ಅನೌನ್ಸ್ ಮಾಡಿದ್ದಾರೆ.

ಹೊಂಬಾಳೆಯ 12ನೇ ಚಿತ್ರದ ಹೀರೋ ಯಾರು? ನಿರ್ದೇಶಕರು ಯಾರು? ಈ ಕೂತೂಹಲದ ಪ್ರಶ್ನೆಗೆ ಉತ್ತರ ಬಾಳೆದೆಲೆಯ ಪೋಸ್ಟರ್ ಉತ್ತರ ಕೊಟ್ಟಿಲ್ಲ. ಆದರೆ, ಕಳೆದೆರಡು ದಿನಗಳ ಹಿಂದೆ ರಾಜಕುಮಾರ ಸಾರಥಿ ಸಂತೋಷ್ ಆನಂದ್ ರಾಮ್ ‌ಅವರು, ಪವರ್ ಸ್ಟಾರ್ ಗೆ ಮತ್ತೆ ಆಕ್ಷನ್ ಕಟ್ ಹೇಳ್ತಿರುವುದಾಗಿ ತಿಳಿಸಿದ್ದರು. ಹ್ಯಾಟ್ರಿಕ್ ಬಾರಿಸೋ ಜುಗಲ್ ಬಂಧಿಗೆ ಹೊಂಬಾಳೆ ಸಂಸ್ಥೆ ದುಡ್ಡುಹಾಕುವ ಸುದ್ದಿ ಈ ಹಿಂದೆಯೇ ಹೊರಬಿದ್ದಿತ್ತು. ಹೀಗಾಗಿ, ಹೊಂಬಾಳೆ ಬ್ಯಾನರ್ ನ 12ನೇ ಚಿತ್ರ ಪುನೀತ್-ಸಂತೋಷ್ ಆನಂದ್ ರಾಮ್ ಕಾಂಬೋದ ಮೂರನೇ ಚಿತ್ರ ಆಗಿರ್ಬೋದು ಅಂತ ಪ್ರಿಡಿಕ್ಟ್ ಮಾಡ್ಬೋದು.

ಸದ್ಯಕ್ಕೆ ಹೊಂಬಾಳೆ‌ ಫಿಲ್ಮ್ಸ್ ಸಿನಿಮಾ ತೋಟದಲ್ಲಿ ಆರು ಚಿತ್ರಗಳು ಅರಳುವ ಹಂತದಲ್ಲಿವೆ. ಕೆಜಿಎಫ್ ಚಾಪ್ಟರ್ 2, ಸಲಾರ್, ಭಗೀರ, ದ್ವಿತ್ವ, ರಿಚರ್ಡ್ ಆಂಟನಿ, ಕಾಂತಾರ, ಹೀಗೆ ಬ್ಯಾಕ್ ಟು‌ ಬ್ಯಾಕ್ ಚಿತ್ರಗಳು ಅದ್ದೂರಿಯಾಗಿ ನಿರ್ಮಾಣಗೊಳ್ತಿವೆ.

ಕೆಜಿಎಫ್ ಚಾಪ್ಟರ್ ೨ ಹಾಗೂ ಸಲಾರ್ ಗಾಗಿ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಎದುರುನೋಡ್ತಿದೆ. ಈ ಮಧ್ಯೆಯೇ ಒಂದಾದ ಮೇಲೊಂದರಂತೆ ಹೊಂಬಾಳೆ ಸಂಸ್ಥೆ ಸಿನಿಮಾ ಅನೌನ್ಸ್ ಮಾಡ್ತಿದೆ. ಸೆ.22 ರಂದು 12 ನೇ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಹೊರಬರಲಿದೆ. ಹೇಗಿರಲಿದೆ ಟೈಟಲ್ ಕಮ್ ಫಸ್ಟ್ ಲುಕ್ ಜಸ್ಟ್ ವೇಯ್ಟ್ ಅಂಡ್ ವಾಚ್.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!