ನಟ ಕಿಚ್ಚ ಸುದೀಪ್ ಆಯ್ತು, ಈಗ ಪಾರ್ವತಿ ಟಾರ್ಗೆಟ್‌ :ʼಪಾರುʼ ಪಾರಿವಾಳದ ಮೇಲೆ ಅಹೋರಾತ್ರನ ಕಣ್ಣು !

ಅಹೋರಾತ್ರ ಎನ್ನುವ ಒಬ್ಬ ಸೋ ಕಾಲ್ಡ್‌ ಅಸ್ಡ್ರಾಲಜಿಸ್ಟ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಅವರಿಗೆ ಕೆರೆದು ಹುಣ್ಣು ಮಾಡಿಕೊಳ್ಳುವ ಕಾಯಿಲೆ ಹಿಡಿದಿರುವ ಹಾಗನ್ಸುತ್ತೆ. ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ ಎನ್ನುವ ಹಾಗೆ ಸ್ಯಾಂಡಲ್ವುಡ್‌ ಪಾಲಿಗೆ ಆಗಾಗ ಅವರು ಇಣುಕು ಹಾಕುತ್ತಿರುವುದು ವಿಚಿತ್ರವಾಗಿದೆ. ನಟ ಸುದೀಪ್‌ ಅವರಾಯ್ತು, ಈಗ ಅಹೋರಾತ್ರ ಕಣ್ಣು ಕಿರುತೆರೆಯ ಫೇಮಸ್‌ ನಟಿ ಮೋಕ್ಷಿತಾ ಪೈ ಮೇಲೆ ಬಿದ್ದಿದೆ. ಪಾರು ಸೀರಿಯಲ್‌ ಖ್ಯಾತಿಯ ನಟಿ ಇವ್ರು. ಇಷ್ಟಕ್ಕೂ ಇವ್ರು ಅಹೋರಾತ್ರ ಕೆಂಗಣ್ಣಿಗೆ ಗುರಿಯಾಗುವುದಕ್ಕೆ ಕಾರಣ ಎಂತ ಗೊತ್ತಾ, ಅದೇ ಆನ್‌ ಲೈನ್‌ ರಮ್ಮಿ. ಅಂದ ಹಾಗೆ, ಆನ್‌ ಲೈನ್‌ ರಮ್ಮಿ ಅಂದಾಕ್ಷಣ ನಿಮಗೆ ಈ ಸೋ ಕಾಲ್ಡ್‌ ಅಸ್ಟ್ರಾಲಜಿಸ್ಟ್‌ ಅಹೋರಾತ್ರ ಯಾರು ಅಂದಾಜು ಸಿಕ್ಕೇ ಸಿಕ್ಕಿರುತ್ತೆ. ಯಾಕಂದ್ರೆ, ನಟ ಕಿಚ್ಚ ಸುದೀಪ್‌ ಅವರ ವಿಚಾರದಲ್ಲಿ ಇತ್ತೀಚೆಗೆ ಸ್ಯಾಂಡಲ್‌ ವುಡ್‌ ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ವ್ಯಕ್ತಿ ಇವ್ರು.

ಆನ್‌ಲೈನ್‌ ರಮ್ಮಿಗೆ ನಟ ಸುದೀಪ್‌ ಅವರು ಜಾಹೀರಾತಿಗೆ ಬ್ರಾಂಡ್‌ ಆಗಿದ್ದನ್ನು ವಿರೋಧಿಸಿ, ಸೋಷಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಅರಚಾಡಿಕೊಂಡಿದ್ದ ವ್ಯಕ್ತಿ ಇವ್ರು. ಕೊನೆಗದು ಕೋರ್ಟ್‌ ಮೆಟ್ಟಿಲು ಏರಿತ್ತು. ಅಲ್ಲೂ ಸುದೀಪ್‌ ಅವರ ಪರ ತೀರ್ಪು ಬಂತು. ಅಷ್ಟಕ್ಕೂ ಸುಮ್ಮನಾಗದ ಈ ಅಹೋರಾತ್ರ ಮತ್ತೆ ಸೋಷಲ್‌ ಮೀಡಿಯಾದಲ್ಲಿ ತನ್ನದೇ ವಕ್ರಬಕ್ರ ಅರಚಾಟ ಶುರುವಿಟ್ಟುಕೊಂಡಾಗ, ಸುದೀಪ್‌ ಅಭಿಮಾನಿಗಳೇ ಮನೆ ಬಾಗಿಲಿಗೆ ಹೋಗಿ ಬುದ್ದಿ ಕಲಿಸಬೇಕಾಯಿತು ಅನ್ನೋದೆಲ್ಲವೂ ಹಳೇ ಸುದ್ದಿಯೇ ಬಿಡಿ. ಹಾಗಂತ ಇಷ್ಟಾಗಿಯೂ ಆತ ಸುಮ್ಮನಿದ್ದಾರೆ ಅಂತಂದುಕೊಳ್ಳುವಂತಿಲ್ಲ, ವಿವಾದವೋ, ವಿಚಿತ್ರವೋ ಸದಾ ಸುದ್ದಿಯಲ್ಲಿರಬೇಕೆನ್ನುವುದೊಂದು ಅವರಿಗೆ ಅಂಟಿಕೊಂಡ ವಿಚಿತ್ರ ಪಬ್ಲಿಸಿಟಿಯ ಕೊರೋನಾ ಅದು. ಅದೇ ಕಾರಣಕ್ಕೆ ಈಗ ಅಹೋರಾತ್ರನಿಗೆ ʼಪಾರುʼ ಸೀರಿಯಲ್‌ ಖ್ಯಾತಿಯ ಬಹುಜನಪ್ರಿಯ ನಟಿ ಮೋಕ್ಷಿತಾ ಪೈ ಟಾರ್ಗೆಟ್‌ ಆಗಿದ್ದು ವಿಚಿತ್ರ, ವಿಕ್ಷಿಪ್ತ.

ಮೋಕ್ಷಿತಾ ಪೈ ಮೇಲೆ ಈ ಅಹೋರಾತ್ರ ಕಣ್ಣು ಹಾಕಿದ್ದು ಯಾಕೆ ಗೊತ್ತಾ ? ಆನ್‌ ಲೈನ್‌ ನಲ್ಲಿನ ರಮ್ಮಿ ಆಟದ ಪ್ರಚಾರಕ್ಕೆ ಈಗ ಜನಪ್ರಿಯ ನಟಿ ಮೋಕ್ಷಿತಾ ಪೈ ಬ್ರಾಂಡ್‌ ಆಗ್ತಿದ್ದಾರೆ ಅನ್ನೋ ಸುದ್ದಿ ಇದೆ. ಸದ್ಯಕ್ಕೆ ಇದು ಕನ್‌ ಫರ್ಮ್‌ ಅಂತ ಯಾರಿಗೂ ಗೊತ್ತಿಲ್ಲ. ಆದರೆ ಅಂತಹದೊಂದು ವಾಸನೆ ಅಹೋರಾತ್ರರ ಮೂಗಿಗೆ ಬಡಿದೆಯಂತೆ. ಹೇಳಿ ಕೇಳಿ ಅವರು ಜ್ಯೋತಿಷಿ ಅಲ್ವಾ? ಕಾಲಜ್ಝಾನಿ ಥರ ಮುಂದೆ ಆಗುವುದೆಲ್ಲವೂ ಇವ್ರಿಗೆ ಗೊತ್ತಾಗಿ ಬಿಡುತ್ತಂತೆ. ಹಾಗಂತ ಕೊರೋನಾ ಯಾವಾಗ ಹೋಗುತ್ತೆ, ನೀವ್ಯಾಗ ಸೇಪ್‌ ಆಗಿ ಊರೆಲ್ಲಾ ತಿರುಗಾಡುತ್ತೀಯಾ ಅಂತ ಕೇಳೋದಿಕ್ಕೆ ಹೋಗ್ಬೇಡಿ, ಅಂತೆಲ್ಲವನ್ನು ಬಿಟ್ಟು ಬೇರೆಯವರ ಭವಿಷ್ಯ ಹೇಳೋ ಕಾಲಿಯೆ ಅದು. ಅಷ್ಟಾಗಿಯೂ ಅವ್ರೀಗೀಗ ಪಾರು ಸೀರಿಯಲ್‌ ಖ್ಯಾತಿಯ ಮೋಕ್ಷಿತಾ ಪೈ ರಮ್ಮಿ ಬ್ರಾಂಡ್‌ ಆಗಿ ಅವ್ರ ಕನಸಿಗೆ ಬಂದಂತಿದೆ. ಅದೇ ಕಾರಣಕ್ಕೆ ಟ್ವಿಟರ್‌ ನಲ್ಲಿ ಒಂದಷ್ಟು ವಾಂತಿ ಮಾಡಿಕೊಂಡಿದ್ದಾರೆ.

ʼ ನಿಮ್ಮ ಟ್ಯಾಲೆಂಟ್‌ ಪ್ರದರ್ಶನಕ್ಕೆ ಯಾರು ಅಡ್ಡಿ ಮಾಡಲ್ಲ, ಅದರಲ್ಲೂ ರಮ್ಮಿ ಗೇಮ್‌ ನಲ್ಲಿ, ನಿಮ್ಮ ನೆಚ್ಚಿನ ಭಾಷೆಯಲ್ಲಿಯೇ ರಮ್ಮಿ ಗೇಮ್‌ ಅನ್ನು ಎಂಜಾಯ್‌ ಮಾಡಿʼ ಎಂಬುದಾಗಿ ಮೋಕ್ಷಿತಾ ಪೈ ಹಾಕಿದ್ದ ಟ್ವಿಟ್‌ ಗೆ ಅಹೋರಾತ್ರ ರಿಯಾಕ್ಟ್‌ ಮಾಡಿ, ಈ ಸೆಲಿಬ್ರಿಟಿಗಳ ಮಾತು ನಂಬ್ವೇಡಿ ಅಂತ ಹೇಳಿದ್ಧಾರೆ. ಹಾಗೆಯೇ ವಿಜಯಕಂಠಕ ವಿಜಿ ಎಂಬಾತ ಮೋಕ್ಷಿತಾ ಪೈ ಅವರ ಟ್ವಿಟ್‌ ಗೆ ರಿಯಾಕ್ಟ್‌ ಮಾಡಿ, ನಿವೊಬ್ಬ ನಟಿ, ನಿಮಗೆ ಸ್ವಲ್ಪವಾದರೂ ಸಾಮಾಜಿಕ ಕಾಳಜಿ ಇರಬೇಕು, ಈ ರೀತಿಯ ಜೂಜು ಜಾಹೀರಾತು ಕೊಡ್ಬೇಡಿ. ನಿಮ್ಮಂತಹ ನಟ-ನಟಿಯರನ್ನು ಬೆಳೆಸಿದ್ದು ಜನ. ಆದರೆ, ಅದೇ ಜನರನ್ನು ಈ ಜೂಜಿನ ವಿಷ ಜಾಲಕ್ಕೆ ತಳ್ಳಲು ಹೊರಟಿರುವ ನಿಮಗೆಧಿಕ್ಕಾರವಿರಲಿʼಎಂಬುದಾಗಿ ಹೇಳಿದ್ದಾರೆ, ಇದನ್ನು ಅಹೋರಾತ್ರ ಷೇರ್‌ ಮಾಡಿ, ಅದನ್ನೇ ದೊಡ್ಡದಾಗಿ ವಿವಾದ ಮಾಡಲು ಹೊರಟಿದ್ದಾರೆ. ಸೋಷಲ್‌ ಮೀಡಿಯಾದಲ್ಲಿ ಇದಕ್ಕೆ ಮಿಶ್ರ ಪ್ರತಿಕ್ರಿಯೆ ಬಂದಿವೆ.ನಿಜ, ಆನ್‌ ಲೈನ್‌ ರಮ್ಮಿ ಅನ್ನೋದು ಜೂಜಾಟ. ಅದನ್ನು ಜನರಿಗೆ ಆಡಿ ಅಂತ ಸೆಲಿಬ್ರಿಟಿಗಳು ಹೇಳುವುದು ಕೂಡ ಸರಿಯಲ್ಲ. ಆದರೆ ಈ ಅಹೋರಾತ್ರ ತಾನು ಇನ್ನೇಲ್ಲೋ ಇದು. ಈ ರೀತಿ ಪ್ರಚಾರಕ್ಕಾಗಿ ಸೆಲಿಬ್ರಿಟಿಗಳನ್ನು ಹಿಡ್ಕೊಂಡೋ ಕಾಂಟ್ರೋ ವರ್ಷಿ ಮೂಲಕ ಪಬ್ಲಿಸಿಟಿ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ? ಇದು ಸಾರ್ವಜನಿಕರ ಪ್ರಶ್ನೆ.
ದೇಶಾದ್ರಿ , ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Related Posts

error: Content is protected !!