ಪಾವಗಡ ಮಂಜುನಾ ಕೈ ಬಿಡಲಿಲ್ಲ ಧರ್ಮಸ್ಥಳ ಮಂಜುನಾಥಸ್ವಾಮಿ; ಬಿಗ್ಬಾಸ್ ಪಟ್ಟಕ್ಕೇರಿಸಿ ಕೇಕೆ ಹೊಡೆದಿದ್ದು 6 ಕೋಟಿ ಜನ ಸ್ವಾಮಿ !

ಉಸಿರುಗಟ್ಟಿ‌ ಕೋಮಾಗೆ ಹೋದಾಗ, ಸಾವು ಬದುಕಿನ ನಡುವೆ ಹೋರಾಟ ಮಾಡುವಾಗ, ಜೀವಕ್ಕೆ ಉಸಿರು ತುಂಬಿ ಬದುಕಿಸಿಕೊಂಡ ಧರ್ಮಸ್ಥಳ‌ ಮಂಜುನಾಥ ಸ್ವಾಮಿ, ಅರಮನೆಯಂತಹ ಸೆರೆಮನೆಯಲ್ಲಿರುವ ನನ್ನನ್ನ ಕೈಬಿಡುವುದುಂಟೇ ? ಹೀಗೊಂದು ಪ್ರಶ್ನೆ ಮಂಜು ಪಾವಗಡ ಮನಸ್ಸಲ್ಲೂ ಕೂಡ ಕಥಕ್ಕಳಿ ಆಡಿತ್ತು.
ಕಲಾವಿದ ಆಗಬೇಕು ಎಂದು ಬೇಡಿಕೊಂಡಾಗ, ನಾಲ್ಕು ಮಂದಿ ನನ್ನನ್ನು ಗುರುತಿಸುವಂತೆ ಮಾಡು ಸ್ವಾಮಿ ಎಂದು ಅಡ್ಡಬಿದ್ದು ಬೇಡಿದಾಗ ಎಲ್ಲವನ್ನೂ ಈಡೇರಿಸಿರುವ ಧರ್ಮಸ್ಥಳ ಮಂಜುನಾಥ ಸ್ವಾಮಿ, ಬಿಗ್ ಬಾಸ್ ಗೆಲ್ಲುವ ಕನಸನ್ನು ಈಡೇರಿಸದೇ ಬಿಡುವನೇ ? ಯಾವುದೇ ಕಾರಣಕ್ಕೂ ಮಂಜುನಾಥ ಸ್ವಾಮಿ ನನ್ನ ಕೈ ಬಿಡಲ್ಲ.. ಗೆದ್ದೇ ಗೆಲ್ತೀನಿ.. ಬಿಗ್ಬಾಸ್ ಗದ್ದುಗೆ ಏರೇ ಏರ್ತೀನಿ, ಹೀಗೊಂದು ಆತ್ಮ ವಿಶ್ವಾಸ ಮಂಜು ಪಾವಗಡ ಮನಸ್ಸಲ್ಲಿತ್ತು. ಆ ಅಚಲವಾದ ಆತ್ಮವಿಶ್ವಾಸಕ್ಕೆ ಬಿಗ್ಬಾಸ್ ವಿಜಯದ ಹಾರ ಹಾಕಿದೆ. ಮಂಜುನಾಥ ಸ್ವಾಮಿಯ ಅಭಯ ಹಸ್ತ ಮಂಜಣ್ಣನ ಮೇಲಿರುವುದು ನಿಜವಾಗಿದೆ.

ಬಿಗ್ಬಾಸ್ ಸೀಸನ್ 8 ರ ವಿನ್ನರ್ ಯಾರಾಗ್ತಾರೆ ಎನ್ನುವ ಆರು ತಿಂಗಳ‌ ಕೂತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ದೊಡ್ಮನೆ ಗ್ರ್ಯಾಂಡ್ ಫಿನಾಲೆ ಅದ್ದೂರಿಯಾಗಿ ಅಂತ್ಯಗೊಂಡಿದೆ.
ಮಜಾಭಾರತ ಖ್ಯಾತಿಯ ಮಂಜು ಪಾವಗಡ ಬಿಗ್ ಬಾಸ್ ವಿನ್ನರ್ ಪಟ್ಟಕ್ಕೇರಿ ಗೆಲುವಿನ ಮುತ್ತಿನ ಹಾರ ಹಾಕಿಸಿಕೊಂಡು ಕರುನಾಡ ಅಂಗಳದಲ್ಲಿ‌ ಮೆರವಣಿಗೆ ಹೊರಟಿದ್ದಾರೆ. ಮಂಜು ಗೆಲುವನ್ನು ಕರ್ನಾಟಕದ ಲಕ್ಷಾಂತರ ಮಂದಿ ಸಂಭ್ರಮಿಸುತ್ತಿದ್ದಾರೆ.

ಮಂಜು ಪಾವಗಡ ಗೆಲ್ಲಬೇಕು‌ ಎನ್ನುವುದು ಕೇವಲ ಅವರ ಕುಟುಂಬಸ್ಥರು ಹಾಗೂ ಆಪ್ತರ ಕನಸಾಗಿರಲಿಲ್ಲ. ಕರುನಾಡಿನ ಬಹುತೇಕ ಮಂದಿ ಮಂಜು‌ ಗೆಲುವಿನ‌ ಗದ್ದುಗೆ ಏರಬೇಕೆಂದು ಬಯಸಿದ್ದರು. ಪಾವಗಡ ಮಂಜು‌ ಬಿಗ್ಬಾಸ್ ನಲ್ಲಿ ದಿಗ್ವಿಜಯ ಸಾಧಿಸಿದರೆ ಹಳ್ಳಿ ಜಯಭೇರಿ ಬಾರಿಸಿದಂತೆ ಎಂದು ಮಾತನಾಡಿಕೊಂಡಿದ್ದರು.‌ ಅದರಂತೆ ಕರುನಾಡಿನ 45,03,495 ಲಕ್ಷ ಮಂದಿ
ವೋಟ್ ಹಾಕಿದ್ದಾರೆ. ಫಿನಾಲೆಗೆ ಲಗ್ಗೆ ಇಟ್ಟ ಟಾಪ್ ಫೈವ್ ಸ್ಪರ್ಧಿಗಳ‌ ಪೈಕಿ ಅತೀ ಹೆಚ್ಚು ವೋಟ್ ಪಡೆಯುವ ಮೂಲಕ ಬಿಗ್ಬಾಸ್ ಟ್ರೋಪಿಗೆ ಮಂಜಣ್ಣ ಮುತ್ತಿಕ್ಕಿದ್ದಾರೆ. 53 ಲಕ್ಷ ಕಂತೆ ನೋಟಿಗೆ ಮಂಜಣ್ಣ ಒಡೆಯರಾಗಿದ್ದಾರೆ.‌

ಹಳ್ಳಿಹಕ್ಕಿ.. ಗ್ರಾಮೀಣ ಪ್ರತಿಭೆ ಮಂಜಣ್ಣನ ಯಶಸ್ಸಿಗೆ ಸ್ವಂತ ಪರಿಶ್ರಮ ಹಾಗೂ ಕರ್ನಾಟಕದ ಮಂದಿಯ ಪ್ರೋತ್ಸಾಹ ಹಾಗೂ ಸಹಕಾರದ ಜೊತೆಗೆ ಧರ್ಮಸ್ಥಳದ‌ ಶ್ರೀಮಂಜುನಾಥ ಸ್ವಾಮಿಯ ಅಭಯಹಸ್ತವೂ ಇದೆ ಎನ್ನುವುದು ಪ್ರೂ ಆಗಿದೆ. ಮಂಜಣ್ಣ ಇಲ್ಲಿವರೆಗೂ ಏನೇ ಕೇಳಿಕೊಂಡರೂ ಅದೆಲ್ಲವೂ ಈಡೇರಿದೆಯಂತೆ. ಈಗ ದೊಡ್ಮನೆಯಲ್ಲಿ ಜಯಭೇರಿ ಬಾರಿಸುವ ಕನಸು ಕೂಡ ಸಾಕಾರಗೊಂಡಿದೆ. ಉಸಿರುಗಟ್ಟಿ ಕೋಮದಲ್ಲಿದ್ದ ಮಂಜುನಾ ತೀರ್ಥ ಹಾಗೂ ಪ್ರಸಾದ ಸೇವನೆಯಿಂದ ಬದುಕಿಸಿಕೊಂಡ ಶ್ರೀ ಮಂಜುನಾಥ ಸ್ವಾಮಿ,
ತನ್ನ ನಾಮಧೇಯ ಇಟ್ಟುಕೊಂಡು ಶ್ರದ್ಧಾ ಭಕ್ತಿಯಿಂದ ಸ್ಮರಿಸುವ ಹಾಗೂ ಕಲೆಯನ್ನು ಆರಾಧಿಸುವ ಕಲಾವಿದನ ದೊಡ್ಮನೆ‌ ಕನಸು ನನಸಾಗಿರುವುದರಲ್ಲಿ ಯಾವುದೇ ಡೌಟಿಲ್ಲ‌‌ ಬಿಡಿ.

ಬಿಗ್ಬಾಸ್ ಸೀಸನ್ 8ರ ಗೆಲುವು ಮಂಜಣ್ಣನಿಗೆ ಅಷ್ಟು ಸುಲಭವಾಗಿ ದಕ್ಕಿರುವುದಲ್ಲ. ಹಳ್ಳಿ ಹೈದ ಮಂಜಣ್ಣನಿಗೆ ತುಂಬಾ ಜನ ಕಾಂಪಿಟೇಟರ್ ಗಳು ಇದ್ದರು. ಫೈನಲ್ಸ್ ವರೆಗೆ ನೆಕ್ ಟು ನೆಕ್ ಪೈಪೋಟಿ ಕೊಡುತ್ತಲೇ ಬಂದರು.‌ ಇದ್ಯಾವುದಕ್ಕೂ ಜಗ್ಗದ ಹಳ್ಳಿ ಹಕ್ಕಿ ಮಂಜಣ್ಣ ಪ್ರತಿಸ್ಪರ್ಧಿಗಳ ಜೊತೆ ಫೈಟ್ ಮಾಡುತ್ತಾ, ಟಾಸ್ಕ್ ಕಂಪ್ಲೀಟ್ ಮಾಡುತ್ತಾ, ಬಿಗ್ಬಾಸ್ ವೀಕ್ಷಕರಿಗೆ ಭರ್ ಪೂರ್ ಹಾಸ್ಯದ ಮೂಲಕ ಮನರಂಜನೆ ಕೊಡುತ್ತಾ, ದೊಡ್ಮನೆ ನಾಯಕನಾಗಿಯೂ ಸೈ‌ ಎನಿಸಿಕೊಳ್ಳುತ್ತಾ ಅರಮನೆಯಲ್ಲಿ ಭರ್ತಿ
120 ದಿನ ಪೂರೈಸಿದರು. ಕಿಚ್ಚನ ಪಕ್ಕದಲ್ಲಿ ಬಂದು ನಿಂತರು.‌ ಮಾಣಿಕ್ಯನಿಂದ ಕೈ‌ ಮೇಲೆತ್ತಿಸಿಕೊಂಡು ವಿಜಯದ ಕೀರ್ತಿ ಪತಾಕೆಯನ್ನು ಹಾರಿಸಿದರು. ಅರೆಕ್ಷಣ ಭಾವುಕರಾದರು.

ಸಪೋರ್ಟ್ ಮಾಡಿದವರೆಲ್ಲರಿಗೂ ವೇದಿಕೆಯಿಂದಲೇ ಧನ್ಯವಾದ ಹೇಳಿದರು.
ಕರುನಾಡಿನ‌ ಈ ಋಣವನ್ನು ಕಲಾವಿದನಾಗಿ ತೀರಿಸಬೇಕು ಎನ್ನುವ ಹಠ ತೊಟ್ಟು ಮುಂದೆ ಸಾಗಿದ್ದಾರೆ. ಮಂಜಣ್ಣನ ವಿಜಯದ ಸವಾರಿ ಹೀಗೆ ಸಾಗಲಿ, ಕರುನಾಡನ್ನು ಸದಾ ರಂಜಿಸುತ್ತಿರಲಿ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!