ಹಾವೇರಿಯಲ್ಲಿ ದರ್ಶನ್‌, ಸಾಲುಗಟ್ಟಿ ನಿಂತರು ಅಭಿಮಾನಿ ಭಕ್ತರು- ಸಾವಿರ ಅಲಿಗೇಷನ್ಸ್‌ ಬರ್ಲಿ, ಹಿಂಗೈತಿ ನೋಡಿ ಚಕ್ರವರ್ತಿ ಹವಾ!

ಮೈಸೂರಿನ ಪ್ರಿನ್ಸ್ ಹೋಟೆಲ್‌ನ ಸಪ್ಲೈಯರ್ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪವು ಮೇಕಪ್ ಮಾಡಿಕೊಂಡು ಬಜಾರ್‌ಗೆ ಎಂಟ್ರಿಕೊಟ್ಟಿದ್ದೇ ತಡ ದಾಸನ ಕಥೆ ಮುಗೀತು ಗುರು ಅಂತ ನಾಲಿಗೆ ಅಲುಗಾಡಿಸಿದವರು ಒಬ್ಬಿಬ್ಬರಲ್ಲ. ದಾಸನಿಗೆ ಬುದ್ಧಿ ಬರಲ್ಲ ಬುಡು ಗುರು, ಒಂದ್ಸಲ್ಲ ಅಲ್ಲಾ ಎರಡು ಸಲ ಅಲ್ಲಾ ಪದೇ ಪದೇ ತಪ್ಪು ಮಾಡ್ತಾನೆ ಇದ್ದಾರೆ. ಇನ್ಮೇಲೆ ಅವರ ಫ್ಯಾನ್ಸು ಕೂಡ ಅವರನ್ನ ಸಪೋರ್ಟ್ ಮಾಡಲ್ಲ ಅಂತ ಕೆಲವುರ ಬೇಜಾನ್‌ ಮಾತನಾಡಿ ಕೊಂಡರಲ್ಲದೇ, ದರ್ಶನ್‌ ಇಮೇಜ್‌ ಹಾಳುಮಾಡಿ ಕೊಂಡರು ಅಂತಲೂ ಗುಸುಗುಟ್ಟಿದ್ದರು. ಅಷ್ಟು ಮಾತ್ರವಲ್ಲ, ಇನ್ಮೇಲೆ ಅಖಾಡದಲ್ಲಿ ದಾಸನ ಆಟ ನಡೆಯಕ್ಕಿಲ್ಲ ಅಂತ ಕೆಲವರು ಮಟಮಟ ಮಧ್ಯಾಹ್ನ ಗುಂಡಾಕಿ ಸಂಭ್ರಮಪಟ್ಟರು. ಆದ್ರೆ ಅದೆಲ್ಲವೂ ಸುಳ್ಳು ಅನ್ನೋತ್ತೆ ದರ್ಶನ್‌ ಹಾವೇರಿ ಎಂಟ್ರಿ. ಅದ್ಹೇಂಗೆ ಅಂತ ಗೊತ್ತಾಗಬೇಕಾದ್ರೆ, ನೀವು ಈ ಸ್ಟೋರಿನಾ ನೋಡ್ಲೆಬೇಕು..

ಸಪ್ಲೈಯರ್ ಮೇಲೆ ಸಾರಥಿ ಹಲ್ಲೆ ಮಾಡಿದ್ದಾರೆನ್ನುವ ಆರೋಪ ಚಕ್ರವರ್ತಿಯ ಇಮೇಜ್‌ನ ಡ್ಯಾಮೇಜ್ ಮಾಡೋದಿಕ್ಕೋ ಅಥವಾ ಸ್ಟಾರ್‌ಡಮ್‌ಗೆ ದಕ್ಕೆ ತರಬೇಕು ಅನ್ನೋದಕ್ಕೆ ಮಾಡಿದ ಕುತಂತ್ರವೋ ಅಥವಾ ನಿಜವಾಗಲೂ ಸಾರಥಿ ವೇಟರ್ ಮೇಲೆ ಹಲ್ಲೆ ನಡೆಸಿದ್ದಾರೋ ಗೊತ್ತಿಲ್ಲ. ಪ್ರಕರಣ ತನಿಖೆಯ ಹಂತದಲ್ಲಿರುವಾಗ್ಲೇ, ಡಿಬಾಸ್ ಬಜಾರ್‌ ನಲ್ಲಿ ಬೆಲೆತೂಕ ಕಳ್ಕೊಂಡು ಬಿಟ್ಟರು, ತಮ್ಮ ಇಮೇಜ್‌ನ ತಾವೇ ಹಾಳುಮಾಡಿಕೊಂಡರು, ತಮ್ಮ ಸ್ಟಾರ್‌ಡಮ್‌ಗೆ ತಾವೇ ದಕ್ಕೆ ತಂದು ಕೊಂಡರು ಅಂತ ಬಹುತೇಕರು ಮಾತನಾಡಿಕೊಂಡಿದ್ದರು. ಆದರೆ, ಡಿ ಬಾಸ್ ದರ್ಶನ್ ಆಟಕ್ಕೆ-ಓಟಕ್ಕೆ ಬ್ರೇಕ್ ಹಾಕುವ ತಾಕತ್ತೂ ಯಾರಿಗೂ ಇಲ್ಲ ಅನ್ನೋದು ಮತ್ತೊಮ್ಮೆ ಪ್ರೂ ಆಗಿದೆ. ವೈಯಕ್ತಿಕ ಜಿದ್ದಿನಿಂದಲೋ ಅಥವಾ ಮತ್ಯಾವುದೋ ಕಾರಣದಿಂದಲೋ ಸಾರಥಿಯನ್ನ ನಿಂದಿಸುವ, ತೇಜೋವಧೆ ಮಾಡುವ, ಹೆಸರಿಗೆ ಮಸಿಬಳಿಯುವ ಕೆಲಸಕ್ಕೆ ಕೈಹಾಕಿದ ಮಾತ್ರಕ್ಕೆ ಚಕ್ರವರ್ತಿಯ ಸದ್ದಡುಗುತ್ತೆ ಅಂತ ತಿಳಿದರೆ ನಿಜಕ್ಕೂ ಅದು ಸುಳ್ಳು ಅನ್ನೋದನ್ನು ಸಾರಥಿ ಸೈನಿಕ ಪಡೆ ಮತ್ತೊಮ್ಮೆ ಸಾಬೀತು ಮಾಡಿದೆ.

ಅಂತಹದೊಂದು ಘಟನೆಗೆ ಬುಧವಾರ ಹಾವೇರಿ ಜಿಲ್ಲೆ ಸಾಕ್ಷಿ ಆಯಿತು. ಅಕ್ಷರಶಃ ಅದು ಸಾಧ್ಯವಾಗಿದ್ದು ಹಾವೇರಿ ಜಿಲ್ಲೆಯ ದರ್ಶನ್‌ ಅಭಿಮಾನಿ ಬಳಗದಿಂದ. ಹೌದು, ಡಿಬಾಸ್ ಹಾವೇರಿಗೆ ಬಂದಿದ್ದಾರಂತೆ, ಶಾಸಕ ಸುರೇಶ್‌ಗೌಡರ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದಾರಂತೆ ಎನ್ನುವ ಸುದ್ದಿ ಕಿವಿಗೆ ಬಿದ್ದಿದ್ದೇ ತಡ, ಹಾವೇರಿ ಸುತ್ತಮುತ್ತಲಿನ ಎಲ್ಲಾ ಅಭಿಮಾನಿಗಳು ಬ್ಯಾಡಗಿಗೆ ಬಂದು ಸೇರಿದ್ರು. ಶಾಸಕ ಸುರೇಶ್‌ಗೌಡರಿಗೆ ಸೇರಿದ ಅತಿಥಿಗೃಹ ಹಾಗೂ ಅವರ ಮನೆಮುಂದೆ ಜಮಾವಣೆಗೊಂಡರು. ಡಿಬಾಸ್‌ಗೆ ಜೈಕಾರ ಹಾಕುತ್ತಾ ಆರಾಧ್ಯದೈವನನ್ನು ಕಣ್ತುಂಬಿಕೊಡರು. ಅದಕ್ಕೆ ಸಾಕ್ಷಿ ಈ ಫೋಟೋಗಳು.

ಅಂದ್ಹಾಗೇ, ದಚ್ಚುನಾ ನೋಡೋದಕ್ಕೆ ಇನ್ಮುಂದೆ ಜನ ಸೇರಲ್ಲ, ಹೋದಲ್ಲಿ ಬಂದಲ್ಲಿ ಮುತ್ತಿಗೆ ಹಾಕಲ್ಲ ಎನ್ನುವ ಭ್ರಮೆಯಲ್ಲಿ ಕೆಲವರು ಇದ್ದರು. ಇನ್ಮುಂದೆ ದರ್ಶನ್ ಹವಾ ಕಮ್ಮಿಯಾಯ್ತು ಬಿಡ್ರಿ ಎಂಬ ಸುದ್ದಿಯನ್ನು ಹಬ್ಬಿಸಿದ್ದರು. ಆದರೆ, ಆ ಸುದ್ದಿನಾ ಸಾರಥಿ ಸೈನಿಕರು ಸುಳ್ಳು ಮಾಡಿದ್ದಾರೆ. ಯಾರು ಎಷ್ಟೇ ಆರೋಪ ಮಾಡಿದರೂ, ನಿಮ್ಮ ಮೇಲೆ ನೂರಲ್ಲ ಸಾವಿರಾರು ಆಪಾದನೆಗಳು ಕೇಳಿಬಂದ್ರೂ ಕೂಡ ನಿಮ್ಮೊಟ್ಟಿಗೆ ಸದಾ ನಾವಿರುತ್ತೇನೆ ಅನ್ನೋದನ್ನ ಸಾಬೀತುಪಡಿಸಿದ್ದಾರೆ. ಅದಕ್ಕೆ ಹಾವೇರಿಯಲ್ಲಿ ಜಮಾವಣೆಗೊಂಡಿದ್ದ ಅಭಿಮಾನಿಗಳೇ ಸಾಕ್ಷಿ. ದರ್ಶನ್‌ ಅಂದ್ರೆನೆ ಹಾಗೆ, ಅವರು ಲೋಕಲೋ, ಹೈ ಕ್ಲಾಸೋ ಗೊತ್ತಿಲ್ಲ. ದರ್ಶನ್‌ ಅಂದ್ರೆ ಮುಗಿ ಬಿಳ್ತಾರೆ ಫ್ಯಾನ್ಸು.

ಜಗತ್ತೇ ನಿಮ್ಮ ವಿರುದ್ದ ನಿಂತರೂ ಆ ಜಗತ್ತಿನ ವಿರುದ್ದ ನಾವು ನಿಲ್ತೇವೆ' ಹೀಗಂತ ಡಿಬಾಸ್ ಫ್ಯಾನ್ಸ್ ಬರೀ ಮಾತಿಗೆ ಹೇಳಿಲ್ಲ.ವಿ ಸ್ಟ್ಯಾಂಡ್‌ ವಿತ್ ಡಿಬಾಸ್’ ಎನ್ನುವ ಕ್ಯಾಂಪೇನ್ ಬರೀ ಅಭಿಯಾನವಾಗಿ ಉಳಿದಿಲ್ಲ ಮಾತುಕೊ ಟ್ಟಂತೆ ಡಿಬಾಸ್ ಸೆಲೆಬ್ರಿಟಿಗಳು ನಡೆದುಕೊಳ್ತಿದ್ದಾರೆ. ನಮ್ಮ ಬಾಸ್ ಪರವಾಗಿ ಯಾರೂ ಮಾತನಾಡದೇ ಇದ್ದರೂ ಪರವಾಗಿಲ್ಲ ನಾವು ಯಾವತ್ತೂ ಬಾಸ್ ಪರವಾಗಿ ರ‍್ತೇವೆ ಎಂಬುದನ್ನು ಪ್ರೂ ಮಾಡಿ ತೋರಿಸುತ್ತಿದ್ದಾರೆ. ಇಷ್ಟೆಲ್ಲಾ ಓದಿದ ಮೇಲೂ ದಾಸ ದರ್ಶನ್‌ ಅವರ ಇಮೇಜ್‌ನ ಡ್ಯಾಮೇಜ್ ಮಾಡ್ಬೇಕು, ಸ್ಟಾರ್‌ಡಮ್‌ಗೆ ಪೆಟ್ಟುಕೊಡ್ಬೇಕು ಅಂತ ಯಾರಾದ್ರೂ ಸ್ಕೆಚ್ ಹಾಕ್ತಾ ಇದ್ದರೆ ಒಂದು ಅರ್ಥ ಮಾಡ್ಕೊಬೇಕು. ಚಕ್ರವರ್ತಿಯ ಇಮೇಜ್‌ನ ಡ್ಯಾಮೇಜ್ ಮಾಡೋದು ಅಷ್ಟು ಸುಲಭದ ಕೆಲಸ ಅಲ್ಲ. ಯಾಕಂದ್ರೆ, ಯಾರಿಗೋ ಬಕೆಟ್ ಹಿಡಿದು ಡಿಬಾಸ್ ಬ್ರಾಂಡ್‌ ಆಗಿಲ್ಲ, ದಾಸನಿಗೆ ಸ್ಟಾರ್‌ಡಮ್ ಏಕಾಏಕಿ ಬಂದಿಲ್ಲ, ಸಾಮಾನ್ಯ ಲೈಟ್‌ಬಾಯ್ ಆಗಿದ್ದ ದಚ್ಚು ಚಕ್ರವರ್ತಿಯಾಗೋದಕ್ಕೆ ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬುದು ತಾಯಿ ಚಾಮುಂಡೇಶ್ವರಿಗೆ ಗೊತ್ತು. ಹೀಗಾಗಿ, ಸುಖಾಸುಮ್ಮನೇ ಆರೋಪ ಮಾಡಿ ಸಾರಥಿನಾ ಕಟ್ಟಿಹಾಕೋದಕ್ಕೆ ಟ್ರೈ ಮಾಡ್ಬೇಡಿ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!