ಸಸ್ಯಾಹಾರಿ ಅನುರಾಧ ಭಟ್‌, ಸೊಳ್ಳೆ ನುಂಗಿ ಮಾಂಸಹಾರಿಯಾದ್ರಾ – ʼ ಮರಳಿ ಮರೆಯಾಗಿ..ʼ ಬಂದ ಹಾಡಿನ ರೆಕಾರ್ಡಿಂಗ್‌ ವೇಳೆ ಅವರಿಗೆ ಆಗಿದ್ದೇನು ?

ಕನ್ನಡ ಸಿನಿ ದುನಿಯಾದಲ್ಲೀಗ ಹ್ಯಾಪನಿಂಗ್‌ ಸಿಂಗರ್‌ ಅಂತಲೇ ಖ್ಯಾತಿ ಪಡೆದ ಗಾಯಕಿ ಅನುರಾಧ ಭಟ್.‌ ʼಚೌಕʼ ಚಿತ್ರದ ಅಪ್ಪ…ಅಪ್ಪ ಹಾಡಿನ ಮೂಲಕ ಕನ್ನಡಿಗರ ಮನೆ ಮಾತಾದ ‌ಪ್ರತಿಭಾನ್ವಿತ ಹಿನ್ನೆಲೆ ಗಾಯಕಿ. ಮಧುರ ಕಂಠದ ಈ ಚೆಲುವೆ ಹಿನ್ನೆಲೆ ಗಾಯಕಿ ಆಗಿ ಚಿತ್ರರಂಗಕ್ಕೆ ಎಂಟ್ರಿಯಾದ ದಿನಗಳಲ್ಲಿ ರಘು ಮುಖರ್ಜಿ ಹಾಗೂ ಕಮಲಿನಿ ಮುಖರ್ಜಿ ಅಭಿನಯದ ʼಸವಾರಿʼ ಚಿತ್ರದ ʼಮರಳಿ ಮರೆಯಾಗಿ..ʼ ಹಾಡಿಗೆ ಟ್ರ್ಯಾಕ್‌ ಸಿಂಗರ್‌ ಆಗಿ ಧ್ವನಿ ನೀಡಿದ್ದರು ಎನ್ನುವುದು ಬಹುಶ: ನಿಮಗೆ ಗೊತ್ತಿರಲಿಕ್ಕಿಲ್ಲ. ಅದು ಆ ದಿನಗಳಲ್ಲಿ ಆಗಿತ್ತು. ಆ ಹಾಡಿನ ಲಿರಿಕಲ್‌ ವಿಡಿಯೋ ಭಾನುವಾರವಷ್ಟೇ ಸೋಷಲ್‌ ಮೀಡಿಯಾದಲ್ಲಿ ಲಾಂಚ್‌ ಆಗಿದೆ.

ಅದರ ರೆಕಾರ್ಡಿಂಗ್‌ ವೇಳೆ ಪಟ್ಟ ಕಷ್ಟದ ಕ್ಷಣಗಳನ್ನು ಗಾಯಕಿ ಅನುರಾಧ್‌ ಭಟ್‌ ಈಗ ನೆನಪಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಭಾನುವಾರವಷ್ಟೇ ಲಾಂಚ್‌ ಆದ ʼಸವಾರಿ‌ʼ ಚಿತ್ರದ ಮರಳಿ ಮರೆಯಾಗಿ ..ಹಾಡಿನ ಲಿರಿಕಲ್‌ ವಿಡಿಯೋ ಲಾಂಚ್. ಹಾಗಂತ ಅಲ್ಲೇನೋ ಕಿರಿಕ್‌ ಆಗಿತ್ತಾ ಅಂತಲ್ಲ. ಬದಲಿಗೆ ಅಲ್ಲಿ ಕೆಲವು ಸ್ವಾರಸ್ಯಕರ ಸಂಗತಿಯೊಂ ದಿದೆ. ಅದನ್ನೇ ಇಲ್ಲಿ ಅವರು ಹೇಳಿಕೊಂಡಿದ್ದಾರೆ.ʼ ಇದನ್ನು ನನ್ನ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ರೆಕಾರ್ಡ್‌ ಮಾಡಲಾಗಿತ್ತು. ರೆಕಾರ್ಡ್‌ ಮಾಡುವ ವೇಳೆ, ನಾನು ಗಂಟಲು ಕಿರಿ ಕಿರಿಯಿಂದ ಬಹಳ ಕಷ್ಟಪಟ್ಟಿದ್ದೆ. ಕಾರಣ ನಾನು ಸೊಳ್ಳೆಯೊಂದನ್ನು ನುಂಗಿದ್ದೆʼ ಅಂತ ಮರಳಿ ಮರೆಯಾಗಿ … ಹಾಡಿನ ಟ್ರ್ಯಾಕ್‌ ಧ್ವನಿ ಮುದ್ರಣದ ವೇಳೆ ಸೊಳ್ಳೆ ಕಾರಣಕ್ಕೆ ತಾವು ಕಷ್ಟಪಟ್ಟಿದ್ದನ್ನು ಬರೆದು ಪೇಸ್‌ ಬುಕ್‌ ನಲ್ಲಿ ಹಂಚಿಕೊಂಡಿದ್ದಾರೆ ಗಾಯಕಿ ಅನುರಾಧ ಭಟ್.‌ ಅವರ ಅನುಭವದ ಅನಿಸಿಕೆಗೆ ಅಭಿಮಾನಿಗಳು ಸಖತ್‌ ಫನ್ನಿ ಕಾಮೆಂಟ್ಸ್‌ ಹಾಕಿ ಖುಷಿ ಪಟ್ಟಿದ್ದಾರೆ. ಕಾಮೆಂಟ್ಸ್‌ಗಳೇ ಅಲ್ಲಿ ಮಜಾ ಆಗಿವೆ. ಸಸ್ಯಹಾರಿಯಾಗಿರುವ ಅನುರಾಧ ಭಟ್‌ ಸೊಳ್ಳೆ ನುಂಗಿ ಮಂಸಹಾರಿ ಆಗಿಬಿಟ್ರಾ ಅಂತ ಕೆಲವರು ತಮಾಷೆ ಮಾಡಿದ್ದಾರೆ.ಸೊಳ್ಳೆ ನುಂಗಿದ ಕಾರಣಕ್ಕೆ ಆ ಹಾಡು ಅಷ್ಟು ಮಧುರವಾಗಿ ಮೂಡಿ ಬಂದಿರಬೇಕು ಅಂತ ಕೆಲವರು ವರ್ಣಿಸಿದ್ದು ವಿಶೇಷ.

ಉಳಿದಂತೆ ಈ ಹಾಡಿನ ದೊಡ್ಡ ಜನಪ್ರಿಯತೆಗೆ ಹೆಸರಾಂತ ಗಾಯಕಿ ಸಾಧನಾ ಸರ್ಗಮ್‌ ಕೂಡ ಕಾರಣ. ಯಾಕಂದ್ರೆ ʼಸವಾರಿʼ ಚಿತ್ರದಲ್ಲಿ ಈ ಹಾಡು ಹಾಡಿದ್ದು ಬಾಲಿವುಡ್‌ ನ ಹೆಸರಾಂತ ಗಾಯಕಿ ಸಾಧನಾ ಸರ್ಗಮ್. ಸಂಗೀತ ನಿರ್ದೇಶಕ ಮಣಿಕಾಂತ್‌ ಕದ್ರಿ ಅವರಿಂದ ಅದು ಸಾಧ್ಯವಾಗಿತ್ತು. ಆ ಮೂಲಕ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಮೊಳಗಿದ ಸಾಧನಾ ಸರ್ಗಮ್ ಅವರ ಕಂಠಸಿರಿಯ ಮೂಲಕ‌ ಮರಳಿ ಮರೆಯಾಗಿ…ಹಾಡು ಮನೆ ಮಾತಾಯಿತು.

ಆ ಮೂಲಕ ಕನ್ನಡಕ್ಕೆ ಸುಧೀರ್‌ ಅತ್ತಾವರ್‌ ಎನ್ನುವ ಕ್ರೀಯಾಶೀಲ ಬರಹಗಾರನೊಬ್ಬ ಸಿಕ್ಕರು ಅನ್ನೋದು ಎಲ್ಲರಿಗೂ ಗೊತ್ತು. ಈ ಹಾಡಿನ ಜನಪ್ರಿಯತೆಯ ಮೂಲಕವೇ ಸಂಗೀತ ನಿರ್ದೇಶಕ ಮಣಿಕಾಂತ್‌ ಕದ್ರಿ ಸಾಕಷ್ಟು ಅವಕಾಶ ಹುಡುಕಿಕೊಂಡು ಬಂದವು. ಮತ್ತೊಂದೆಡೆ ಬರಹಗಾರರಾಗಿದ್ದ ಸುಧೀರ್‌ ಅತ್ತಾವರ್‌, ನಿರ್ದೇಶಕರಾಗಿ ಬಡ್ತಿ ಪಡೆದರು. ಸಾಕಷ್ಟು ಪ್ರಶಸ್ತಿಗಳು ಅವರಿಗೆ ಬಂದವು.

ಈಗಲೂ ಈ ಹಾಡಿನ ಸಂತಸದ ಕ್ಷಣಗಳನ್ನು ನೆನಪಿಸಿಕೊಳ್ಳುವ ಬರಹಗಾರ ಸುಧೀರ್‌ ಅತ್ತಾವರ್‌, ನಾನು ಈ ಹಾಡು ಬರೆದೆ ಎನ್ನುವುದಕ್ಕಿಂತ ಈ ಸಾಹಿತ್ಯಕ್ಕೆ ಗಾಯಕಿ ಸಾಧನಾ ಸರ್ಗಮ್‌ ಧ್ವನಿ ನೀಡಿದ ಕಾರಣಕ್ಕೆ ಇದು ಸಾಕಷ್ಟು ಜನಪ್ರಿಯತೆ ಪಡೆಯಿತು. ಆ ಮೂಲಕ ನಾನು ಕೂಡ ನಿರ್ದೇಶಕನಾಗುವ ಅವಕಾಶ ಬಂತು ಎನ್ನುತ್ತಾ ಆ ಹಾಡಿನ ಮೂಲಕ ತಮಗೆ ಸಿಕ್ಕ ಅವಕಾಶ ನೆನಪಿಸಿಕೊಳ್ಳುತ್ತಾರೆ. ಹಲವು ವರ್ಷಗಳ ನಂತರ ಹಾಡಿನ ಲಿರಿಕಲ್‌ ವಿಡಿಯೋ ಲಾಂಚ್‌ ಮೂಲಕ ಇಷ್ಟೇಲ್ಲ ನೆನಪಾದವು.

Related Posts

error: Content is protected !!