ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಸೋಷಿಯಲ್ ಲೋಕದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸೋದ್ರ ಮೂಲಕ ಮುಂದಿನ ತಮ್ಮ ನಿಲುವೇನು ತಮ್ಮ ನಡೆಯೇನು ಎಂಬುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ. ದಾಸನ ಭಕ್ತವಲಯ ಮಾಡಿರುವ ತೀರ್ಮಾನ ಇದ್ಯೆಯಲ್ಲ ಅದು ಅಂತಿಮ ಅಲ್ಲ. ಆದರೆ, ಚಕ್ರವರ್ತಿಯ ಹೆಸರಿಗೆ ಮಸಿಬಳಿಯುವ ಹಾಗೂ ತೇಜೋವಧೆ ಮಾಡುತ್ತಿರುವ ಈ ಹೊತ್ತಲ್ಲಿ ಅಭಿಮಾನಿ ದೇವರುಗಳು ಕೈಗೊಂಡಿರುವ ನಿರ್ಧಾರ ಇದೆಯಲ್ಲ ಅದು ಮೆಚ್ಚುವಂತಹದ್ದು. ಹಾಗಾದ್ರೆ, ದಚ್ಚು ಫ್ಯಾನ್ಸ್ ಅದ್ಯಾವ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ? ಯಾಕಾಗಿ ದೃಡಸಂಕಲ್ಪ ಮಾಡಿದ್ದಾರೆ? ಇದೆಲ್ಲದರ ಕಂಪ್ಲೀಟ್ ರಿಪೋರ್ಟ್ ನಿಮಗಾಗಿ
ಸ್ಯಾಂಡಲ್ವುಡ್ ಯಜಮಾನ ದಾಸದರ್ಶನ್ಗೆ ಕೋಟ್ಯಾಂತರ ಭಕ್ತರಿದ್ದಾರೆ ಈ ಸತ್ಯ ನಮಗೆ ನಿಮಗೆ ಮಾತ್ರವಲ್ಲ ಇಡೀ ಕರ್ನಾಟಕಕ್ಕೆ ಗೊತ್ತು. ಆ ಕೋಟ್ಯಾಂತರ ಅಭಿಮಾನಿ ಬಳಗದ ರಕ್ತ ಕುದಿಯುತ್ತಿದೆ. ಯಾರಿಗೂ ಕೇಡು ಬಯಸದ, ಒಳಗೊಳಗೆ ಕತ್ತಿಮಸೆಯದ, ಹಿಂದೆ ಒಂದು ಮುಂದೆ ಒಂದು ಮಾತನಾಡದ ನಮ್ಮ ಆರಾಧ್ಯದೈವನ ಮೇಲೆ ಇದೆಂತಾ ಆರೋಪ, ಇದೆಂತಾ ಕೀಳುಮಟ್ಟದ ರಾಜಕೀಯ ಛೀ.. ಥೂ.. ಅಂತ ಉಗುಳುತ್ತಾ.. ಹಲ್ಲಲ್ಲು ಕಡಿಯುತ್ತಾ ಕಣ್ಣಲ್ಲೇ ಕೆಂಡ ಉಗುಳ್ತಿದ್ದಾರೆ. ಯಾರು ಎಷ್ಟೇ ಕೇಡು ಬಯಸಿದ್ರೂ, ಯಾರು ಎಷ್ಟೇ ಕಿತಾಪತಿ ಮಾಡಿದ್ರೂ, ಯಾರು ಎಷ್ಟೇ ಟಾರ್ಗೆಟ್ ಮಾಡಿ ಕುಗ್ಗಿಸೋಕೆ ಪ್ರಯತ್ನಿಸಿದ್ರೂ, ನೇರ ಹಾಗೂ ನಿಷ್ಠುರವಾದಿಯಾಗಿರುವ, ಪರರಿಗೆ ಸದಾ ಒಳ್ಳೆಯದನ್ನೇ ಬಯಸುವ, ಬೆವರು ಸುರಿಸಿ ಸಂಪಾದಿಸಿದ ಹಣದಲ್ಲಿ ಕೋಟಿಗಟ್ಟಲೇ ದುಡ್ಡನ್ನು ಬಡಬಗ್ಗರಿಗೆ ದಾನ ಮಾಡುವ ಶತಸೋದರಾಗ್ರಜಶರವೀರ ದರ್ಶನ್ಗೆ ಕೆಡುಕಾಗಲ್ಲ ಅಂತ ಎದೆಮುಟ್ಟಿಕೊಂಡು ಹೇಳಿಕೊಳ್ಳುತ್ತಿದ್ದಾರೆ.
ಮೇಲ್ನೋಟಕ್ಕೆ ನಮ್ಮ ಬಾಸ್ ಒರಟನಾಗಿ ಕಾಣುತ್ತಾರೆ, ಫಿಲ್ಟರ್ ಇಲ್ಲದೇ ಮಾತನಾಡ್ತಾರೆ ನೀವು ಅದನ್ನೇ ರಫ್ ಹಾಗೂ ರಾಂಗು ಅಂದ್ಕೊಂಡ್ರೆ ಯಾರು ಏನು ಮಾಡೋದಕ್ಕೆ ಆಗಲ್ಲ. ಕೊಲ್ಲೊಕೆ ಒಬ್ಬ ಇದ್ದರೆ ಕಾಯೋಕೆ ಅಂತ ಒಬ್ಬ ರ್ತಾನೆ ಎನ್ನುವ ಮಾತಿದೆ ಅದರಂತೇ ನೀವು ಏನೇ ಮಾಡಿದರೂ ನಮ್ಮ ಬಾಸ್ನ ಕಾಯೋದಕ್ಕೆ ಚಾಮುಂಡೇಶ್ವರಿ ತಾಯಿ ಇದ್ದಾಳೆ ಎನ್ನುವ ದಾಸನ ಭಕ್ತರು ಒಂದು ದೃಡ ಸಂಕಲ್ಪ ಮಾಡಿದ್ದಾರೆ. ದರ್ಶನ್ ಏನು-ಎಂತ-ಹೇಗೆ ಅಂತ ಗೊತ್ತಿದ್ದವರು, ದರ್ಶನ್ರನ್ನ ಹತ್ತಿರದಿಂದ ಕಂಡವರು, ಅವರ ವ್ಯಕ್ತಿತ್ವ ಎಂತಹದ್ದೆಂದು ಬಲ್ಲವರು ಸೈಲೆಂಟಾಗಿರುವುದನ್ನ ಕಂಡು ದಚ್ಚು ಫ್ಯಾನ್ಸ್ ಬೇಸರಗೊಂಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ದಾಸನಿಂದ ಸಹಾಯ ಪಡೆದು ತುಟಿಪಿಟಿಕ್ ಎನ್ನದ ಮಂದಿ ಮೇಲೆ ಸಾರಥಿ ಸೈನಿಕರು ಆಕ್ರೋಶಗೊಂಡಿದ್ದಾರೆ. ಇನ್ಯಾವತ್ತೂ ಕೂಡ ಅವರನ್ನು ಪ್ರೋತ್ಸಾಹಿಸಕೂಡದು ಎಂಬ ದೃಡನಿರ್ಧಾರಕ್ಕೆ ಬಂದಿದ್ದಾರೆ.
ಒಡೆಯ ದರ್ಶನ್ ಅವರಿಂದ ಸಹಾಯ ಪಡೆದವರು ಒಬ್ಬರಾ-ಇಬ್ಬರಾ ಲೆಕ್ಕಕ್ಕೇ ಇಲ್ಲ. ದೇಹಿ ಎನ್ನುವ ಮುಂಚೆನೇ ದಾನ ನೀಡುವ ಕರ್ಣ ಅಂದರೆ ಒನ್ ಅಂಡ್ ಓನ್ಲೀ ಡಿಬಾಸ್.
ಜನಸಾಮಾನ್ಯರಿಗೆ ಮಾತ್ರವಲ್ಲ ಕಲಾವಿದರಿಗೂ ಕೂಡ ದಾಸನ ಮನ ಮಿಡಿಯುತ್ತೆ. ಗಾಡ್ಫಾದರ್ಗಳಿಲ್ಲದೇ ಗಂಧದಗುಡಿಗೆ ಯಾರೇ ಬರಲಿ ಅವರಲ್ಲಿ ಪ್ರತಿಭೆಯಿದ್ದರೆ ಅಂತಹವರನ್ನ ದರ್ಶನ್ ಪ್ರೋತ್ಸಾಹಿಸ್ತಾರೆ. ಪೋಸ್ಟರ್ ಲಾಂಚ್ನಿಂದ ಹಿಡಿದು ಸಿನಿಮಾ ಬಿಡುಗಡೆವರೆಗೂ ಹೊಸತಂಡದ ಜೊತೆಗೆ ಬೆಂಬಲವಾಗಿ ನಿಲ್ತಾರೆ. ಆರಾಧ್ಯದೈವನ ನಿಲುವನ್ನ ಸ್ವಾಗತಿಸುವ ಅಭಿಮಾನಿಗಳು ಹೊಸತಂಡ ಚಿತ್ರವನ್ನ ಸಾರಥಿ ಸಿನಿಮಾದಂತೆಯೇ ನೋಡ್ತಾರೆ ಜೊತೆಗೆ ಆ ಸಿನಿಮಾವನ್ನು ಪ್ರಮೋಷನ್ ಮಾಡಿಕೊಡ್ತಾರೆ. ಇಷ್ಟೆಲ್ಲಾ ಮಾಡಿಕೊಟ್ಟರೂ ಕೂಡ ಯಾರೊಬ್ಬರು ನಮ್ಮ ಬಾಸ್ ಪರವಾಗಿ ಧ್ವನಿಎತ್ತಲಿಲ್ಲ ಎಂಬುದು ದಚ್ಚು ಭಕ್ತರ ಅಳಲು ಹಾಗೂ ಏಕೈಕ ಪ್ರಶ್ನೆ
ಆರಾಧ್ಯದೈವ ದರ್ಶನ್ ಹೆಸರಿಗೆ ಮಸಿ ಬಳಿಯುವಂತಹ ಹಾಗೂ ತೇಜೋವಧೆ ಮಾಡುವಂತಹ ಕೆಲಸ ಆಗ್ತಿದೆ. ಈ ಹೊತ್ತಲ್ಲಾದರೂ ದಾಸನಿಂದ ಸಹಾಯ ಪಡೆದವರು ಧ್ವನಿ ಎತ್ತಬಹುದು ಆದರೆ ಯಾರೊಬ್ಬರು ಕೂಡ ದಚ್ಚು ಪರವಾಗಿ ಬ್ಯಾಟಿಂಗ್ ಮಾಡೋದಕ್ಕೆ ಫೀಲ್ಡಿಗಿಳಿಯುತ್ತಿಲ್ಲ. ಹೀಗಾಗಿ, ಬೇಸರಗೊಂಡಿರುವ ಚಕ್ರವರ್ತಿಯ ಸೈನಿಕರು ಇಲ್ಲಿ ಎಲ್ಲಾ ಅವಕಾಶವಾಧಿಗಳೇ ಕೆಲಸ ಆಗೋತನಕ ಮಾತ್ರ ಆ ಮೇಲೆ ತಮ್ಮ ಬುದ್ದಿ ಏನು ಅಂತ ತೋರಿಸಿಬಿಡ್ತಾರೆ. ಇನ್ಮುಂದೆ, ಯಾವುದೇ ಕಾರಣಕ್ಕೂ ಸಿನಿಮಾ ಇರಲಿ ಅಥವಾ ಬೇರೆ ಯಾವುದೇ ವಿಷ್ಯವಿರಲಿ ಯಾರನ್ನೂ ಪ್ರೋತ್ಸಾಹಿಸೋದು ಬೇಡ. ನಮ್ಮ ಡಿಬಾಸ್ ಪರವಾಗಿ ಯಾರೂ ಮಾತನಾಡೋದು ಬೇಡ ಅಭಿಮಾನಿಗಳಾಗಿ ನಾವೇ ಕೋಟ್ಯಾಂತರ ಮಂದಿಯಿದ್ದೇವೆ ಹೀಗಂತ ಬರೆದು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನಿಲುವನ್ನ ಸ್ಪಷ್ಟಪಡಿಸಿದ್ದಾರೆ. ದಾಸನ ಭಕ್ತರ ನಿಲುವನ್ನ ಈ ಕ್ಷಣಕ್ಕೆ ಮೆಚ್ಚುವಂತಹದ್ದೇ ಬಿಡಿ. ಅದಕ್ಕೆ ಡಿಬಾಸ್ ಹೇಳೋದು ಈ ಜನ್ಮ ಅಲ್ಲ ನೂರು ಜನ್ಮ ಹುಟ್ಟಿಬಂದರೂ ಫ್ಯಾನ್ಸ್ ಋಣ ತರ್ಸೋದಕ್ಕೆ ಆಗಲ್ಲ ಅಂತ.