ಹಿರಿಯ ನಟಿ ಶ್ರುತಿ ಅವರ ಮೇಲೆ ಸಿಎಂ ಬಿಎಸ್‌ವೈ ಮುನಿಸು ಯಾಕೆ ?

ಹಿರಿಯ ನಟಿ ಶ್ರುತಿ ಅವರಿಗೆ ಸರ್ಕಾರ ಕೋಕ್‌ ಕೊಟ್ಟಿದೆ. ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಅವರನ್ನು ಬದಲಾಯಿಸಿದೆ. ಅವರ ಜಾಗಕ್ಕೆ ಯಡಿಯೂರಪ್ಪ ಅವರ ಆಪ್ತ ಕಾಪು ಸಿದ್ದಲಿಂಗಸ್ವಾಮಿ ಅವರನ್ನು ನೇಮಕ ಮಾಡಿ ಆದೇಶ ಮಾಡಲಾಗಿದೆ. ಇದು ರಾಜ್ಯ ಬಿಜೆಪಿಯಲ್ಲಿ ಚರ್ಚೆಗೆ ಕಾರಣವಾಗಿದೆ. ಹಾಗೆಯೇ ಚಿತ್ರೋದ್ಯಮದಲ್ಲೂ ಇದು ತೀವ್ರ ಚರ್ಚೆಗೆ ಏಡೆ ಮಾಡಿಕೊಟ್ಟಿದೆ. ಶ್ರುತಿ ಅವರನ್ನು ಏಕಾಏಕಿ ಸರ್ಕಾರ ಯಾಕೆ ಬದಲಾಯಿಸಿತು? ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅವರಿನ್ನು ಆರು ತಿಂಗಳು ಪೂರೈಸಿಲ್ಲ, ಆಗಲೇ ಅವರನ್ನು ಕಿತ್ತು ಹಾಕಿದ್ದು ಯಾಕೆ? ಹೀಗೆಲ್ಲ ಚರ್ಚೆಗಳು ನಡೆಯುತ್ತಿವೆ. ಹಾಗಾದ್ರೆ ಸರ್ಕಾರ ಯಾಕಾಗಿ ಈ ರೀತಿ ಮಾಡಿತು ಅನ್ನೋದು ಯಕ್ಷ ಪ್ರಶ್ನೆ ಆಗಿದೆ. ವಿಚಿತ್ರ ಅಂದ್ರೆ ತಮ್ಮನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕುವ ಬಗ್ಗೆ ಒಂದೇ ಒಂದು ಮನ್ಸೂಚನೆ ಕೂಡ ಶ್ರುತಿ ಅವರಿಗೇ ಸಿಕ್ಕಿಲ್ವಂತೆ.

ಚಿತ್ರರಂಗದಿಂದ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ತಾರೆಯರ ಪೈಕಿ ಇತ್ತೀಚೆಗೆ ನಟಿ ತಾರಾ ಹಾಗೂ ಶ್ರುತಿ ಅವರಿಗೆ ಸರ್ಕಾರ ನಿಗಮಗಳ ಆಧ್ಯಕ್ಷ ಸ್ಥಾನದ ಅವಕಾಶ ನೀಡಿತ್ತು. ತಾರಾ ಅವರು ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದರೆ, ಶ್ರುತಿ ಅವರು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷರಾದರು. ಇವರಿಬ್ಬರಿಗೂ ಅವಕಾಶ ಸಿಕ್ಕಿದ್ದು ಕಂಡ ಚಿತ್ರರಂಗ ಖುಷಿ ಪಟ್ಟಿತು. ಆದರೆ ಈಗ ಪರಿಸ್ಥಿತಿಯೇ ಭಿನ್ನವಾಗಿದೆ.ಎಲ್ಲವೂ ಸರಿಯಾಗಿಯೇ ಇದಿದ್ದರೆ ಶ್ರುತಿ ಅವರು ಈಗಲೂ ಅಧ್ಯಕ್ಷಾಗಿಯೇ ಇರುತ್ತಿದ್ದರೋ ಏನೋ, ಕೊರೋನಾ ಕಾಲದಲ್ಲಿ ಅಷ್ಟಾಗಿ ಅವರು ನಿಗಮದ ಕಡೆ ಮುಖ ಹಾಕಿರಲಿಲ್ಲ ಎನ್ನುವ ಆರೋಪ ಇದೆ.

ಅದಕ್ಕಿಂತ ವಿಚಿತ್ರ ಅಂದ್ರೆ, ದೆಹಲಿ, ಹೈದ್ರಾಬಾದ್‌ ಅಂತಲೇ ಹೆಚ್ಚು ತಿರುಗಾಡುತ್ತಿದ್ದ ಸಚಿವ ಯೋಗೇಶ್ವರ್‌ ಅವರೊಂದಿಗೆ ನಟಿ ಶ್ರುತಿ ಕೂಡ ಇತ್ತೀಚೆಗೆ ದೇವಾಲಯಗಳಿಗೆ ಸುತ್ತಾಡಿದ್ದರು. ಇವರಿಬ್ಬರ ಟೆಂಪಲ್‌ ರನ್‌ ಮೇಲೆ ಸಿಎಂ ಕಣ್ಣು ಬಿದ್ದಿತ್ತು. ಅದೇ ವೇಳೆ ಪ್ರವಾಸೋದ್ಯಮ ಇಲಾಖೆ ತೀವ್ರ ನಷ್ಟದಲ್ಲಿತ್ತು. ಅದೇ ಕಾರಣಕ್ಕೆ ನಟಿ ಶ್ರುತಿ ಅವರನ್ನು ನಿಗಮದಿಂದ ಸರ್ಕಾರ ಬದಲಾಯಿಸಿದೆ ಎನ್ನುವ ಮಾತುಗಳು ಇವೆ. ರಾಜಕಾರಣವೇ ಹಾಗೆ, ಜನರಲ್ಲಿ ಮನೆ ಮಾತಾದ ಕಲಾವಿದರು ರಾಜಕಾರಣದಲ್ಲಿ ಕೆಲವೊಮ್ಮೆ ಹಿನ್ನೆಡೆ ಸಾಧಿಸಿದ್ದೂ ಇದೆ. ಅದಕ್ಕೆ ಇಲ್ಲಿ ಬೇಕಾದಷ್ಟು ಉದಾಹರಣೆಗಳು ಇವೆ. ಪಾಪಾ, ಶ್ರುತಿ ಅವರನ್ನು ಬಿಜೆಪಿ ಅದೇ ರೀತಿ ಮಾಡಿ ಬಿಟ್ಟಿತಾ ಗೊತ್ತಿಲ್ಲ. ವಾಸ್ತವ ಹಿರಿಯ ನಟಿ ಶ್ರುತಿ ಅವರಿಗೇ ಗೊತ್ತು.

Related Posts

error: Content is protected !!