ರಾಬರ್ಟ್ ಪ್ರೊಡ್ಯೂಸರ್ ಮಾತು ಕೇಳಿ ಬಿರಿಯಾನಿ ಸವಿದವರು ಈ‌ ಸುದ್ದಿನಾ ನೋಡ್ಲೆಬೇಕು !?

  • ವಿಶಾಲಾಕ್ಷಿ

ದೊಡ್ಮನೆ ಆಸ್ತಿಯ ಬಗ್ಗೆ ನಿರ್ಮಾಪಕ ಉಮಾಪತಿಯವರು ಮಾಹಿತಿ ಹೊರ ಹಾಕಿದ್ದೇ ತಡ ಕೆಲವರಿಗೆ ಸುಕ್ಕಾ ಹೊಡೆದಷ್ಟು, ಹೈದ್ರಬಾದ್ ಬಿರಿಯಾನಿ ತಿಂದಷ್ಟು ಖುಷಿಯಾಯ್ತು.
ನೋಡ ನೋಡ ಎನ್ನುತ್ತಲೇ
ಕೆಲವರು ಒಳಗೊಳಗೆ ಖುಷಿಪಟ್ಟರು. ಹತ್ತಿಕೊಂಡ್ತು ನೋಡು ಬೆಂಕಿ ಎನ್ನುತ್ತಾ ಸಿಗರೇಟ್ ಹಚ್ಚಿಕೊಂಡು ಲಂಗ್ಸ್ ನ‌ ಬೆಚ್ಚಗೆ ಮಾಡಿಕೊಳ್ಳೋದ್ರಲ್ಲಿ ಕೆಲವರು ಬ್ಯುಸಿಯಾದರು. ಎನಿ ಅಪ್ ಡೇಟ್ ಅಂತ ಮಾಧ್ಯಮ ಮಿತ್ರರಿಗೆ‌ ಕೆಲವರು‌ ಕಾಲ್ ಮಾಡಿದರು. ಇನ್ನೂ ಕೆಲವರು ಪ್ರತಿ ಚಾನೆಲ್ ನ ಚೇಂಜ್ ಮಾಡಿಕೊಂಡು ಡೀಟೈಲ್ಸ್ ಪಡೆದುಕೊಂಡರು. ಆದರೆ, ಅವರಿಗೆ ಯಾರೂ ಗೊತ್ತಿರಲಿಲ್ಲ ಹೀರೋ ದರ್ಶನ್ ಸಂಜೆ ಪ್ರೆಸ್ಮೀಟ್ ಮಾಡ್ತಾರೆ, ಅಸಲಿ ಸತ್ಯದ ಬಾಂಬ್ ಸ್ಪೋಟಿಸ್ತಾರೆ ಅಂತ.

ನಾನು ದೊಡ್ಮನೆ ಪ್ರಾಪರ್ಟಿ ಕೊಡ್ತೀರಾ ಅಂತ ಕೇಳಿಲ್ಲ ಕೊಡುವ ಐಡಿಯಾ ಇದೆಯಾ ಅಂತ ಕೇಳಿದ್ದೀನಿ. ಅಷ್ಟಕ್ಕೂ ದೊಡ್ಮನೆ ಪ್ರಾಪರ್ಟಿ ಬಗ್ಗೆ ನನಗೆ ಗೊತ್ತಿರಲಿಲ್ಲ. ನಿರ್ಮಾಪಕ ಉಮಾಪತಿಯವರೇ ನನ್ನ ಬಳಿ ಬಂದು ಕನ್ನಿಂಗ್ ಹ್ಯಾಮ್ ರೋಡ್ ನಲ್ಲಿ‌ರುವ
ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಸೇರಿದಂತಹ ಪ್ರಾಪರ್ಟಿಯನ್ನ ಖರೀದಿ ಮಾಡಿದ್ದೇನೆ ಸರ್ ಅಂತ ಹೇಳಿದರು. ಒಳ್ಳೆಯದಾಗಲಿ ಅಂದೆ ವಿಷ್ ಮಾಡಿದ್ದೆ

ಕೇಸ್ ಕೋರ್ಟ್ ನಲ್ಲಿದೆ ಸತ್ಯ ಹೊರ ಬರಲಿ ಅಂತ ದಚ್ಚು ಸುಮ್ನೆ ಇದ್ದರೆ ಬಜಾರ್ ನಲ್ಲಿ ಮ್ಯಾಟರ್ ಬೇರೆನೇ ಓಡುತ್ತಿತ್ತು. ದೊಡ್ಮನೆಯ ಆಸ್ತಿಗೆ ದಚ್ಚು ಕಣ್ಣುಹಾಕಿದ್ದಾರೆ ಅದನ್ನು ಕೊನೆಗೆ ದಕ್ಕಿಸಿಕೊಳ್ಳೋದಕ್ಕೆ ಆಗಲಿಲ್ಲ ಹಾಗೂ ನಿರ್ಮಾಪಕ ಉಮಾಪತಿಯವರು ಕೊಡಲಿಲ್ಲ ಎನ್ನುವ ಕಾರಣಕ್ಕೆ ಉಮಾಪತಿಯವರ ಮೇಲೆ ದರ್ಶನ್ ಜಿದ್ದು ಸಾಧಿಸ್ತಿದ್ದಾರೆ ಹಾಗೇ ಹೀಗೆ ಕಾಗೇ ಗೂಬೆ ಅಂತೆಲ್ಲಾ ಮಾತನಾಡೋದಕ್ಕೆ ಶುರುಮಾಡಿದರು. ಇದನ್ನೆಲ್ಲಾ ನೋಡಿಕೊಂಡು ಸುಮ್ಮನೇ ಇರೋದು ಸರಿಯಲ್ಲ ಇದಕ್ಕೊಂದು ಕ್ಯಾರಿಟಿ‌ ಕೊಡೋಣ ಅಂತ ಮೈಸೂರಿನ‌ ಫಾರ್ಮ್ ಹೌಸ್ ನಲ್ಲಿ ದರ್ಶನ್ ಸುದ್ದಿಗೋಷ್ಟಿ ನಡೆಸಿದರು.


ದರ್ಶನ್ ಏನ್ ಹೇಳಿದರು ಅನ್ನೋದಕ್ಕೂ ಮೊದಲು ಉಮಾಪತಿ ಏನ್ ಹೇಳಿದರು ನೋಡಿ

ಪ್ರಾಪರ್ಟಿ ವಿಚಾರವಾಗಿ ದರ್ಶನ್ ಸಾರ್ ಹಾಗೂ ನನ್ನ ನಡುವೆ ಭಿನ್ನಾಭಿಪ್ರಾಯ ಬಂದಿಲ್ಲ ಆದರೆ ದೊಡ್ಮನೆ ಆಸ್ತಿಯನ್ನ ದರ್ಶನ್ ಕೇಳಿದ್ದರು. ದೊಡ್ಮನೆ ಆಸ್ತಿಯನ್ನ ಮಾರಾಟ ಮಾಡುವುದು ನನಗೆ ಶೋಭೆ ತರುವಂತಹದ್ದು ಅಲ್ಲವೆಂದು ನಿರ್ಧರಿಸಿ ಡಿಬಾಸ್ ಗೆ ಕೊಡೋಕೆ ಆಗಲ್ಲ ಅಂತ ನೇರವಾಗಿ ಹೇಳಿದ್ದೆ ದೊಡ್ಮನೆ ಆಸ್ತಿ ಬದಲಾಗಿ ಬೇರೊಂದು ಪ್ರಾಪರ್ಟಿ‌ ಕೊಡ್ತೀನಿ ಅಂತಲೂ ಹೇಳಿದ್ದೇನೆ ಅಂತ ಮಾಧ್ಯಮದ ಮುಂದೆ ನಿರ್ಮಾಪಕ ಉಮಾಪತಿ ಹೇಳಿಕೊಂಡಿದ್ದರು‌.

ಇದಕ್ಕೆ ದರ್ಶನ್ ಪ್ರತಿಕ್ರಿಯೆ ನೀಡಿದ್ದು ನಾನು ದೊಡ್ಮನೆ ಪ್ರಾಪರ್ಟಿ ಕೊಡ್ತೀರಾ ಅಂತ ಕೇಳಿಲ್ಲ ಕೊಡುವ ಐಡಿಯಾ ಇದೆಯಾ ಅಂತ ಕೇಳಿದ್ದೀನಿ. ಅಷ್ಟಕ್ಕೂ ದೊಡ್ಮನೆ ಪ್ರಾಪರ್ಟಿ ಬಗ್ಗೆ ನನಗೆ ಗೊತ್ತಿರಲಿಲ್ಲ. ನಿರ್ಮಾಪಕ ಉಮಾಪತಿಯವರೇ ನನ್ನ ಬಳಿ ಬಂದು ಕನ್ನಿಂಗ್ ಹ್ಯಾಮ್ ರೋಡ್ ನಲ್ಲಿ‌ರುವ
ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಸೇರಿದಂತಹ ಪ್ರಾಪರ್ಟಿಯನ್ನ ಖರೀದಿ ಮಾಡಿದ್ದೇನೆ ಸರ್ ಅಂತ ಹೇಳಿದರು. ಒಳ್ಳೆಯದಾಗಲಿ ಅಂದೆ ವಿಷ್ ಮಾಡಿದ್ದೆ.

ಇದೇ ವೇಳೆ ನಿಮಗೇನಾದರೂ ಆ ಪ್ರಾಪರ್ಟಿನಾ ಮಾರುವ ಐಡಿಯಾ ಇದೆ ಅಂತ ಕೇಳಿದ್ದೆ ಅದಕ್ಕೆ ನಿಮಗೇನಾದರೂ ಬೇಕಾದರೆ ತಗೊಳಿ ಅಂದರು ಅದಕ್ಕೆ ನಾನು ನಿಮ್ಮ ಹತ್ತಿರ ನನ್ನ ಹಣ ಇದೆಯಲ್ಲ‌ ಅದರಲ್ಲಿ ಪ್ರಾಪರ್ಟಿದು ಕಟ್ ಮಾಡಿಕೊಂಡು ಬಾಕಿ ಹಣ ಕೊಡಿ ಅಂದೆ ಆಯ್ತು ಅಂತ ಒಪ್ಪಿಕೊಂಡರು. ಅಲ್ಲಿಂದ ಇಲ್ಲಿವರೆಗೆ ಆ ಪ್ರಾಪರ್ಟಿಯ ಬಾಡಿಗೆ ಹಣವನ್ನ ನನ್ನ ಕೈಗೆ ತಂದು ಕೊಡ್ತಿದ್ದಾರೆ. ಇದಕ್ಕೆ ಏನ್ ಹೇಳಬೇಕು ಸ್ವಾಮಿ ಅಷ್ಟಕ್ಕೂ ಉಮಾಪತಿಯವರು ಯಾಕೇ ಹೀಗೆ ಹೇಳಿಕೆ‌ ಕೊಡ್ತಿದ್ದಾರೋ ಗೊತ್ತಿಲ್ಲ ನೀವು ಹೋಗಿ ಮತ್ತೆ ಅವರನ್ನೇ ಕೇಳಿಕೊಳ್ಳಿ ಎಂದಿದ್ದಾರೆ. ಅಷ್ಟಕ್ಕೂ, ದಾಸ ನನ್ನ ಬ್ರದರ್ ಎನ್ನುವ ನಿರ್ಮಾಪಕ ಉಮಾಪತಿಯವರು ಅದ್ಯಾಕೇ ಈ ರೀತಿ ಹೇಳಿಕೆಗಳನ್ನು‌ ಕೊಡುತ್ತಿದ್ದಾರೋ ಆ ತಾಯಿ ಬನಶಂಕರಿ ದೇವಿಗೆ ಗೊತ್ತು.

Related Posts

error: Content is protected !!