ಟೇಶಿ ವೆಂಕಟೇಶ್‌ ವಿರುದ್ಧ ಮಾನನಷ್ಠ ಮೊಕದ್ದಮೆ ಹಾಕಿದ ರೂಪ ಅಯ್ಯರ್‌ ; ವೈಯಕ್ತಿಕ ನಿಂದನೆ ಮಾಡಿದ್ದಕ್ಕೆ ಒಂದು ಕೋಟಿ ಮಾನನಷ್ಠ ಮೊಕದ್ದಮೆ

ನಿರ್ದೇಶಕರ ಸಂಘ ಬೀದಿಗೆ ಬಂದಿದ್ದು ಗೊತ್ತೇ ಇದೆ. ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ವಿರುದ್ಧ ಹಲವರು ಕಿಡಿಕಾರಿದ್ದು ಗೊತ್ತು. ಈಗ ಟೇಶಿ ಟೇಶಿ ವೆಂಕಟೇಶ್ ವಿರುದ್ಧ ನಿರ್ದೇಶಕಿ ಕಮ್‌ ನಿರ್ಮಾಪಕಿ ರೂಪ ಅಯ್ಯರ್‌ ಅವರು ಗುಡುಗಿದ್ದಾರೆ. ಅಷ್ಟೇ ಅಲ್ಲ, ಅವರು ಮಾನನಷ್ಠ ಮೊಕದ್ದಮೆ ಹಾಕುವುದಾಗಿ ಹೇಳಿದ್ದಾರೆ. ಹೌದು, ರೂಪ ಅಯ್ಯರ್‌ ಅವರು ಟೇಶಿ ವೆಂಕಟೇಶ್ ವಿರುದ್ಧ 1 ಕೋಟಿ‌ ಮಾನನಷ್ಠ ಮೊಕದ್ದಮೆ ಕೇಸ್ ಹಾಕಿದ್ದಾರೆ.

ವೈಯಕ್ತಿಕ ವಿಚಾರವನ್ನು ಕೆದಕಿದ್ದ ಹಿನ್ನೆಲೆಯಲ್ಲಿ ರೂಪ ಅಯ್ಯರ್‌ ಅವರು ಇದೀಗ ಟೇಶಿ‌ ವೆಂಕಟೇಶ್ ಅವರ ಮೇಲೆ ದೂರಿದ್ದು, ಕೇಸ್‌ ಹಾಕಿದ್ದಾರೆ.

“ರೂಪ ಅಯ್ಯರ್ ಅಕೌಂಟ್ ನಲ್ಲಿ‌ ಎಷ್ಟು ದುಡ್ಡು ಇದೆ, ಯಾವ್ ರೀತಿ‌ ಸಂಪಾದನೆ ಮಾಡ್ತಾರೆ ಅಂತ ಗೊತ್ತಿದೆ” ಅಂತ ಈ‌ ಹಿಂದೆ ಟೇಶಿ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಉರ. ಹೀಗೆ ವೈಯಕ್ತಿಕವಾಗಿ ಪ್ರಶ್ನೆ ಮಾಡಿದ್ದಕ್ಕೆ ರೂಪ ಅಯ್ಯರ್ ಕಾನೂನಿನ ಮೊರೆ ಹೋಗಿರುವ ರೂಪ ಅಯ್ಯರ್‌,

ಕೋರ್ಟ್ ನಲ್ಲಿ ಈ ಕೇಸ್ ಗೆದ್ದೇ ಗೆಲ್ತೀನಿ ಎಂದಿದ್ದಾರೆ. ಅಷ್ಟೇ ಅಲ್ಲ, ಈ ಕೇಸ್‌ನಿಂದ ಬರುವ 1 ಕೋಟಿ ರೂಪಾಯಿ ಮಾನನಷ್ಠ ಹಣವನ್ನು ನಿರ್ದೇಶಕರ ಸಂಘದ ಅಭಿವೃದ್ಧಿಗೆ ಕೊಡ್ತೀನಿ ಅಂತ ಹೇಳಿದ್ದಾರೆ.

Related Posts

error: Content is protected !!