ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡ ಯುವನಟನದ್ದೇ ಹವಾ!

ಸಿನಿಮಾ ಅಂದರೇನೆ ಹಾಗೆ. ಅದೊಂದು ರಂಜಿಸುವ ಮಾಧ್ಯಮ. ಅದಕ್ಕೆ ನಗಿಸುವುದು ಗೊತ್ತು, ಅಳಿಸುವುದೂ ಗೊತ್ತು. ಹಾಗೆ ಒಮ್ಮೊಮ್ಮೆ ಭಾವುಕತೆಗೆ ದೂಡುವುದೂ ಗೊತ್ತು. ಕೆಲ ಸಿನಿಮಾಗಳು ಮನಸ್ಸಿಗೆ ಆಪ್ತವಾಗಿಬಿಡುತ್ತಿವೆ. ಅಂತಹ ಆಪ್ತ ಸಿನಿಮಾಗಳ ಸಾಲಿಗೆ ಈಗ “ಸಿನಿಮಾ ಬಂಡಿ” ಕೂಡ ಸೇರಿದೆ. ಹೌದು, “ಸಿನಿಮಾ ಬಂಡಿ” ಈಗ ಇತ್ತೀಚೆಗೆ ಜೋರು ಸದ್ದು ಮಾಡುತ್ತಿರುವ ಚಿತ್ರ. ದೇಶ ಮಾತ್ರವಲ್ಲ, ವಿದೇಶಿಗರು ಕೂಡ ಮೆಚ್ಚಿಕೊಳ್ಳುತ್ತಿರುವ ಚಿತ್ರ ಅನ್ನೋದು ವಿಶೇಷ. “ಸಿನಿಮಾ ಬಂಡಿ” ತೆಲುಗು ಚಿತ್ರ. ಅರೇ, ತೆಲುಗು ಚಿತ್ರದ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ಉತ್ತರ. “ಸಿನಿಮಾ ಬಂಡಿ” ಚಿತ್ರದ ಹೈಲೈಟ್.‌

ಇದಕ್ಕೆ ಕಾರಣ, ಈ ಚಿತ್ರದಲ್ಲಿ ಕನ್ನಡದ ಪ್ರತಿಭಾವಂತರಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ.
“ಸಿನಿಮಾ ಬಂಡಿ” ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾಗಿದ್ದೇ ತಡ, ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ. ಈ ಸಿನಿಮಾಗೆ ಪ್ರವೀಣ್‌ ಕಂದ್ರೆಗುಲ ನಿರ್ದೇಶಕರು. ರಾಜ್‌ ಮತ್ತು ಡಿಕೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ತೆಲುಗು ಸಿನಿಮಾ ಆಗಿದ್ದರೂ, ಈ ಚಿತ್ರದ ಹೈಲೈಟ್‌ ಕನ್ನಡದ ನಟ. ಹೆಸರು ವಿಕಾಸ್‌ ವಸಿಷ್ಠ ಇವರೊಂದಿಗೆ ಉಮಾ ಮತ್ತು ಸಿಂಧು ಎಂಬ ಕನ್ನಡದ ನಟಿಯರೂ ನಟಿಸಿದ್ದಾರೆ. ಈ ಕುರಿತಂತೆ ನಟ ವಿಕಾಸ್‌ ಸಿಂಹ, “ಸಿನಿಲಹರಿ” ಜೊತೆ ಒಂದಷ್ಟು ಮಾತಾಡಿದ್ದಾರೆ.

ಓವರ್‌ ಟು ವಿಕಾಸ್‌ ವಸಿಷ್ಠ…
“2012 ರಲ್ಲಿ ನನ್ನ ಸಿನಿಮಾ ಜರ್ನಿ ಶುರುವಾಯ್ತು. ಈ ರಂಗಿನ ಲೋಕಕ್ಕೆ ಬರುವ ಮೊದಲು, ಒಂದು ಕಡೆ ಕೆಲಸ ಮಾಡುತ್ತಿದ್ದೆ. ಆ ಬಳಿಕ ನನಗೂ ನಟಿಸೋ ಆಸೆ ಹೆಚ್ಚಾಯ್ತು. ಆಸಕ್ತಿ ಇದ್ದುದರಿಂದ ನಾನು ಮೊದಲು “ಪಂಚರಂಗಿ ಪೊಂವ್‌ ಪೊಂವ್‌” ಸೀರಿಯಲ್‌ನಲ್ಲಿ ನಟಿಸಿದೆ. ಅದು ದಿನದ ಪಾತ್ರವಾಗಿತ್ತು. ಆ ಬಳಿಕ “ಪರಿಣಿತ”, “ಕೋಗಿಲೆ”, “ಚಕ್ರವ್ಯೂಹ”, “ಅಮ್ಮ”, “ಅವಳು”, “ಮನಸಾರೆʼ ಹೀಗೆ ಧಾರಾವಾಹಿಗಳಲ್ಲಿ ನಟಿಸುತ್ತಾ ಹೋದೆ. ಅದರ ನಡುವೆಯೇ ನನಗೆ ಸಿನಿಮಾದಲ್ಲೂ ನಟಿಸೋ ಭಾಗ್ಯ ಸಿಕ್ಕಿತು.”ಕರಾಲಿ”, “ಅರನೇ ಮೈಲಿ”, “ರಾಂಧವ” ಸಿನಿಮಾದಲ್ಲಿ ನಟಿಸಿದೆ.

ಹೀಗೆ ಮೆಲ್ಲನೆ ಕನ್ನಡ ಚಿತ್ರರಂಗದ ಜರ್ನಿ ಶುರುವಾಯ್ತು. ಹೀಗಿರುವಾಗಲೇ ನನಗೆ ತೆಲುಗಿನ “ಸಿನಿಮಾ ಬಂಡಿ”ಯಲ್ಲಿ ನಟಿಸೋ ಆವಕಾಶ ಬಂತು. ಆ ಸಿನಿಮಾ ನಿರ್ದೇಶ ಪ್ರವೀಣ್‌ ಕಂದ್ರೆಗುಲ ಅವರು ಮೊದಲೇ ಪರಿಚಯವಿದ್ದರು. ಅವರೊಂದಿಗೆ ತಮಿಳು ಜಾಹಿರಾತಿನಲ್ಲಿ ಕೆಲಸ ಮಾಡಿದ್ದೆ. ಹೀಗಿರುವಾಗ ಅವರು, “ಸಿನಿಮಾ ಬಂಡಿ” ಕಥೆ ಹೇಳಿದ್ದರು. ಮಾಡೋಣ ಸರ್‌ ಅಂದೆ. ನಿರ್ಮಾಪಕರ ಬಳಿ ಕಥೆ ಹೇಳಿದಾಗ, ಒಂದು ವಿಡಿಯೋ ಮಾಡಿಕೊಂಡು ಬನ್ನಿ ಅಂದರು. ಸರಿ, ಅಂತ, ನಿರ್ದೇಶಕರು ನಾವು ಸೇರಿ ಒಂದು ವಿಡಿಯೋ ಶೂಟ್‌ ಮಾಡಿಕೊಂಡು ಅವರ ಬಳಿ ಹೋದೆವು. ನೋಡಿದ ನಿರ್ಮಾಪಕರು, ಖುಷಿಯಾದರು. ಇದರಲ್ಲಿರೋ ಆರ್ಟಿಸ್ಟ್‌ ಇಟ್ಟುಕೊಂಡೇ ಸಿನಿಮಾ ಮಾಡಿ ಅಂದರು. ಅಲ್ಲಿಂದಲೇ “ಸಿನಿಮಾ ಬಂಡಿ” ಶುರುವಾಯ್ತು. ತೆಲುಗಿನಲ್ಲಿ ತಯಾರಾದ ಈ ಚಿತ್ರವನ್ನು ಥಿಯೇಟರ್‌ನಲ್ಲೇ ಬಿಡುಗಡೆ ಮಾಡಬೇಕು ಅಂದುಕೊಂಡಿದ್ದೆವು. ಆದರೆ, ಕೊರೊನಾ ಸಮಸ್ಯೆ ಹಿನ್ನೆಲೆಯಲ್ಲಿ ಎಲ್ಲವೂ ಸಾಧ್ಯವಾಗಲಿಲ್ಲ. ನೆಟ್‌ಫ್ಲಿಕ್ಸ್‌ ನಲ್ಲಿ ಸಿನಿಮಾ ಬಿಡುಗಡೆಯಾಯ್ತು. ಎಲ್ಲೆಡೆ ಸುದ್ದಿಯಾಯ್ತು” ಎನ್ನುತ್ತಾರೆ ವಿಕಾಸ್‌ ವಸಿಷ್ಠ.

“ಸಿನಿಮಾ ಬಂಡಿ” ಕುರಿತ ಅನುಭವ ಹಂಚಿಕೊಳ್ಳುವ ಅವರು, ನಿಜಕ್ಕೂ ಚಿತ್ರೀಕರಣದ ವೇಳೆ ಸಾಕಷ್ಟು ಅನುಭವ ಆಯ್ತು. ಸಾಮಾನ್ಯವಾಗಿ ಸಿನಿಮಾ ಅಂದರೆ, ದೊಡ್ಡ ಯೂನಿಟ್‌, ಗಜಿಬಿಜಿ ಓಡಾಟ ಕಾಮನ್.‌ ಆದರೆ, ನಮ್ಮ ಶೂಟಿಂಗ್‌ ಟೈಮ್‌ನಲ್ಲಿ ಈ ರೀತಿ ಇರಲೇ ಇಲ್ಲ. ಕೇವಲ 13 ರಿಂದ 15 ಜನರನ್ನು ಇಟ್ಟುಕೊಂಡು ಮಾಡಿದ ಸಿನಿಮಾ ಅದು. ಟೆಕ್ನಿಕಲಿ ಸ್ಟ್ರಾಂಗ್‌ ಇತ್ತು. ದೊಡ್ಡ ಕ್ಯಾಮೆರಾವನ್ನೇ ಇಲ್ಲಿ ಬಳಸಿದ್ದೆವು. ಆದರೆ, ಸಿನಿಮಾ ಡಿಮ್ಯಾಂಡ್‌ ಮಾಡಿದ್ದೆಲ್ಲವನ್ನೂ ನಿರ್ಮಾಪಕರು ಕೊಟ್ಟಿದ್ದರು. ನಮಗೂ ಇಷ್ಟೇ ಬೇಕು, ಇಷ್ಟು ಸಾಕು ಅಂತಂದುಕೊಂಡೇ ಕೆಲಸ ಮಾಡಿದೆವು. ಕಥೆಗಿಂತ ಹೆಚ್ಚು ಮಾಡಿದರೆ, ವೈಭವೀಕರಣ ಆಗುತ್ತೆ. ನಮಗೆ ಅಂತಹ ವೈಭವೀಕರಣ ಬೇಕಿರಲಿಲ್ಲ. ಎಲ್ಲವೂ ನ್ಯಾಚುರಲ್‌ ಆಗಿರಬೇಕು. ಇಲ್ಲಿ ಎಲ್ಲವೂ ನ್ಯಾಚುರಲ್‌ ಆಗಿಯೇ ಇತ್ತು. ದೊಡ್ಡ ಲೈಟಿಂಗ್‌ ಬೇಡವಾಗಿತ್ತು, ಹೆಲಿಕ್ಯಾಮ್‌ ಕೂಡ ಬೇಕಿರಲಿಲ್ಲ. ಒಂದೊಳ್ಳೆಯ ಸಿನಿಮಾ ಆಗೋಕೆ ಏನೆಲ್ಲಾ ಬೇಕಿತ್ತೋ ಅದನ್ನು ಇಟ್ಟುಕೊಂಡು ಸಿನಿಮಾ ಮಾಡಿದೆವು. ಒಳ್ಳೇ ಚಿತ್ರವಾಯ್ತು. ಆದರೆ, ಈ ಮಟ್ಟಕ್ಕೆ ರೀಚ್‌ ಆಗುತ್ತೆ ಅಂತ ಗೊತ್ತಿರಲಿಲ್ಲ. ನಿಜಕ್ಕೂ ನಮ್ಮ ಪರಿಶ್ರಮ ಈಗ ಸಾರ್ಥಕವಾಗಿದೆ. ಸುಮಾರು ೩೫ ದಿನಗಳ ಕಾಲ ಮುಳಬಾಗಿಲು ಸುತ್ತಮುತ್ತ ಶೂಟಿಂಗ್‌ ಮಾಡಿದ್ದೇವೆ. ಸಮೀಪದ ಉತ್ತನೂರು, ಗೊಲ್ಲಹಳ್ಳಿ, ಸುತ್ತಮುತ್ತ ಚಿತ್ರೀಕರಣ ನಡೆದಿದೆ ಎಂಬುದು ವಿಕಾಸ್‌ ವಸಿಷ್ಠ ಅವರ ಮಾತು.


“ಸಿನಿಮಾ ಬಂಡಿ” ಕ್ಲಿಕ್‌ ಆಗುತ್ತಿದ್ದಂತೆಯೇ ಅತ್ತ, ವಿಕಾಸ್‌ ವಸಿಷ್ಠ ಅವರಿಗೂ ಒಂದಷ್ಟು ಅವಕಾಶಗಳು ಹುಡುಕಿ ಬರುತ್ತಿವೆ. ಸದ್ಯ ಈಗ ತೆಲುಗಿನಲ್ಲೇ ಇನ್ನೊಂದು ಸಿನಿಮಾ ಸಿಕ್ಕಿದ್ದು, ಚಿತ್ರೀಕರಣ ನಡೆಯುತ್ತಿದೆ. ಅತ್ತ, ಒಂದಷ್ಟು ವೆಬ್‌ಸೀರೀಸ್‌ ಕೂಡ ಪ್ಲಾನ್‌ ಆಗುತ್ತಿದೆಯಂತೆ. ಕನ್ನಡದಲ್ಲೂ ಎರಡು ಚಿತ್ರಗಳ ಮಾತುಕತೆ ನಡೆಯುತ್ತಿದೆ ಎನ್ನುತ್ತಾರೆ ಅವರು. “ಸಿನಿಮಾ ಬಂಡಿ” ಚಿತ್ರಕ್ಕೆ ಮುಂಬೈ ಮೂಲದ ಅಪೂರ್ವ, ಹೈದರಾಬಾದ್‌ನ ಸಾಗರ್‌ ಛಾಯಾಗ್ರಹಣ ಮಾಡಿದ್ದಾರೆ. ಶರೀಶ್‌ ಸತ್ಯಗೋಲು ಸಂಗೀತ ನೀಡಿದರೆ, ರವಿತೇಜ, ಧರ್ಮ ಸಂಕಲನ ಮಾಡಿದ್ದಾರೆ. ವಸಂತ್‌ ಮರಗಂಟಿ ಕಥೆ ಬರೆದಿದ್ದಾರೆ.

Related Posts

error: Content is protected !!