ಬಿಗ್ ಬಾಸ್ ಮನೆ‌ ಕೆಡಿಸಿದ್ರಾ ಚಂದ್ರಚೂಡ್ ? ಅವರು ನುಗ್ಗೆಕಾಯಿ, ಮಾವಿನಕಾಯಿ ಕಥೆ ಹೇಳಿದ್ದು ಯಾರ ಕುರಿತು ಗೊತ್ತಾ?


ಬಿಗ್ ಬಾಸ್ ಸೆಂಕೆಂಡ್‌ ಇನ್ನಿಂಗ್ಸ್ ಹಳ್ಳಿ ಪಂಚಾಯಿತಿ ಕಟ್ಟೆಯಂತಾಗಿದೆ. ಅಲ್ಲೀಗ ‘ಮೂರನೇ ದರ್ಜೆ’ ಯ ಕಥಾ ಲೋಕ‌ ತೆರೆದುಕೊಂಡಿದೆ. ಕಳೆದ ಏಳು ಸೀಸನ್ ಗಳಲ್ಲಿ ಸಿಗದ ಮನರಂಜನೆ‌ ಈಗ ಇಲ್ಲಿ ವೀಕ್ಷಕರಿಗೆ ಸಿಗುತ್ತಿದೆ. ಸದ್ಯಕ್ಕೀಗ ಬಿಗ್ ಬಾಸ್ ಮನೆಯಲ್ಲಿನ ಅಷ್ಟು ಕಂಟೆಸ್ಟೆಡ್ ಗಳಿಗೆ ಚಕ್ರವರ್ತಿ ಚಂದ್ರಚೂಡ್ ಟಾರ್ಗೆಟ್ ಆಗಿದ್ದಾರೆ. ಅದರಿಂದ ಹೊರ ಬರಲು ಚಂದ್ರಚೂಡ್ ತಮ್ಮ ಮಾತಿನ ಪಾಂಡಿತ್ಯ ಪರಾಕಾಷ್ಟೆ ಮೆರೆಯುತ್ತಿದ್ದು, ಅವರ ಮೂಲಕ ಬಿಗ್ ಬಾಸ್ ಮನೆಯಲ್ಲಿ ನುಗ್ಗೆಕಾಯಿ, ಮಾವಿನಕಾಯಿ, ಮಲುಗೊಬದ ಮಾರ್ಮಿಕ ಕಥೆಗಳು ಚರ್ಚೆ ಆಗುತ್ತಿರುವುದು ವೀಕ್ಷಕರಲ್ಲೂ ಹೇಸಿಗೆ ತರಿಸಿದೆ.

ಚಂದ್ರಚೂಡ್ ತಪ್ಪುಮಾಡಿ ಬಿಟ್ರಾ? ಬಿಗ್ ಬಾಸ್ ವೀಕ್ಷಕರಿಗೆ ಈಗ ಹೀಗೆನಿಸುತ್ತದೆ. ಅದಕ್ಕೆ ಕಾರಣವೂ ಇದೆ. ಕೊರೋನಾ ಕಾರಣದಿಂದ ಬಿಗ್ ಬಾಸ್ ಸೀಸನ್ 8 ಅರ್ಧದಲ್ಲಿಯೇ ನಿಂತು ಹೋದಾಗ ಎಲ್ಲರೂ ಅಚ್ಚರಿಗೊಂಡಿದ್ದರು. ಬಿಗ್ ಬಾಸ್ ಇತಿಹಾಸದಲ್ಲಿ ಎಂದೂ ‌ಹೀಗಾಗದ ಕಾರಣಕ್ಕೆ ಟ್ರೋಪಿ ಗೆಲ್ಲುವ ಅದೃಷ್ಟ ಯಾರಿಗೂ ಇರಲಿಲ್ಲವೇ ಅಂತಂದುಕೊಂಡಿದ್ದು ಹೌದು. ಆದರೆ, ಸೆಕೆಂಡ್ ಇನ್ನಿಂಗ್ಸ್ ಮತ್ತೆ ಶುರುವಾಗುತ್ತೆ ಅಂದಾಗ ಜ‌ನ ಖುಷಿಯಾದರು. ಅತ್ತ ಚಕ್ರವರ್ತಿ ಚಂದ್ರಚೂಡ್ ಶಾಕ್ ಆದರು‌. ಅಷ್ಟೇ ಅಲ್ಲ, ಬಿಗ್ ಬಾಸ್ ಮನೆಗೆ ಮತ್ತೆ ಹೇಗೆ ಹೋಗುವುದು ಅಂತಲೂ ತಲೆ ಕೆಡಿಸಿಕೊಂಡಿದ್ದು ಹೌದು.

ಅದಕ್ಕೆ ಕಾರಣವೂ ಇತ್ತು‌. ಬಿಗ್ ಬಾಸ್ ಅರ್ಧಕ್ಕೆ ನಿಂತು ಹೋಗಿ, ಅಲ್ಲಿದ್ದ ಸ್ಪರ್ಧಿಗಳು ವಾಪಾಸ್ ಮನೆಗೆ ಬಂದಾಗ, ಕುಂತಲ್ಲಿ ಕೂರಲಾರೆ, ನಿಂತಲ್ಲಿ ನಿಲ್ಲಲಾರೆ ಎನ್ನುವ ಹಾಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಟಿವಿ ಚಾನೆಲ್, ಯೂಟ್ಯೂಬ್ ಚಾನೆಲ್ ಗಳಿಗೆ ಹೋಗಿ ಹೋಗಿ ಇಂಟರ್ವ್ಯೂ ಕೊಟ್ಟು ಬಂದಿದ್ದರು ಚಕ್ರವರ್ತಿ ಚಂದ್ರಚೂಡ್. ಮಾತಿನಲ್ಲಿ ಚಂದ್ರಚೂಡ್ ಅವರನ್ನು ಮೀರಿಸುವವರೇ ಇಲ್ಲ‌. ವಿಷಯ ಯಾವುದೇ ಆದರೂ‌ ಸರಿ, ಗಂಟೆ ಗಟ್ಟಲೆ ಭಾಷಣ ಬಿಗಿಯುವ ಕಾಯಿಲೆ ಅವರಿಗಿದೆ. ಎಷ್ಟೋ‌ ಸಲ ಟಿವಿ ಡಿಬೆಟ್ ಗಳಿಗೆ ತಾವೇ ಒತ್ತಾಯ ಮಾಡಿ ಹೋಗಿದ್ದರ ಬಗ್ಗೆ ಟಿವಿ ಚಾನೆಲ್ ನವರೇ ಹೇಳಿದ್ದು ಇತ್ತು. ಅಂತಹದರಲ್ಲಿ ಬಿಗ್ ಬಾಸ್ ಎನ್ನುವ ಕಿರಾತಕ ಮನೆಯ ಕಂತೆ ಪುರಾಣ ಚಂದ್ರಚೂಡ್ ಬಳಿ ಇದ್ದಾಗ ಸುಮ್ಮನೆ ಕೂರುತಾರಾ? ಟಿ ವಿ ಚಾನೆಲ್ ಗಳಲ್ಲಿ, ಯೂಟ್ಯೂಬ್ ಚಾನೆಲ್ ಗಳಲ್ಲಿ ದಿನ ಗಟ್ಟಲೆ ಕುಳಿತು ಸುರುಳಿ ಸುರುಳಿ ಪುಂಗಿ ಊದಿ ಬಂದಿದ್ದು ಎಲ್ಲರಿಗೂ ಗೊತ್ತು.

ಇಂಟರ್ ವಿವ್ಯೂಗಳಲ್ಲಿ ಇಷ್ಟಕ್ಕೂ ಚಂದ್ರಚೂಡ್ ಹೇಳಿದ್ದೇನು ಗೊತ್ತಾ ? ಎಲ್ಲವೂ ವಿವಾದಿತ ಹೇಳಿಕೆಗಳೇ. ಬಿಗ್ಬಾಸ್ ಮನೆಯಲ್ಲಿ ಆಗ ವೀಕ್ಷಕರ ನಡುವೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಪಾವಗಡ ಮಂಜು, ದಿವ್ಯಾ ಸುರೇಶ್ ಜೋಡಿಯ ಬಗ್ಗೆ ಚಂದ್ರಚೂಡ್ ಹೊರಗಡೆ ಸಂದರ್ಶನಗ ಳಲ್ಲಿ ಕೊಟ್ಟ ಹೇಳಿಕೆಗಳೆಲ್ಲವೂ ಆಕ್ಷೇಪಾರ್ಹ. ಇಷ್ಟಕ್ಕೂ ಪಾವಗಡ ಮಂಜು ಹಾಗೂ ದಿವ್ಯಾ ಸುರೇಶ್ ನಿಜಕ್ಕೂ ಗಂಡ- ಹೆಂಡತಿ ಆಗಿರಲಿಲ್ಲ‌ . ಟಾಸ್ಕ್ ಗಳಲ್ಲಿ ಒಂದಾಗಿದ್ದ, ಈ ಜೋಡಿ ಮುಂದೆ ಒಳ್ಳೆಯ ಗೆಳೆಯರಾದರು. ಸಹಜವಾಗಿ ವೀಕ್ಷಕರ ಕಣ್ಣು ಅವರ ಮೇಲೆ ಬಿತ್ತು. ಅವರಿಬ್ಬರ ನಡುವೆ ಲವ್ ಇದೆ ಅನ್ನೋ ಮಾತುಗಳು ಕೇಳಿ ಬಂದಿದ್ದವು.

ಹೊರ ಗಡೆ ಬಂದಾಗ ಚಂದ್ರಚೂಡ್ ಕೇಳಿಸಿಕೊಂಡ ಆ ಮಾತುಗಳನ್ನೇ ನಿಜ ಅಂದುಕೊಂಡರು. ಹಾಗಾಗಿಯೇ ಅವರಿಬ್ಬರು‌ ಮದುವೆ ಆಗುವುದಾದರೆ ಅವರಿಬ್ಬರಿಗೂ ತಾಳಿ ಕೊಡಿಸ್ತೀನಿ ಅಂತ ಹೇಳಿ ಬಿಡೋದಾ? ಇದೇ ಮಾತನ್ನು ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರ ಬಗ್ಗೆಯೂ ಇದೇ ಮಾತು ಹೇಳಿದ್ದರೂ ಚಂದ್ರಚೂಡ್ . ಅಷ್ಟೇ ಅಲ್ಲ ಬಿಗ್ ಬಾಸ್ ಕಬ್ಬನ್ ಪಾರ್ಕ್ ಆಗಿತ್ತು ಅಂದಿದ್ದರು, ಅದೆಲ್ಲವಲ್ಲಕ್ಕೂ ಈಗ ಉತ್ತರ ಸಿಗುತ್ತಿದೆ.

ಚಂದ್ರಚೂಡ್ ಬಡಬಡಿಸುತ್ರಿರುವುದು ವಿಚಿತ್ರವಾಗಿದೆ‌. ವೀಕ್ಷಕರು ಎಲ್ಲಿಂದ ನಗಬೇಕೋ ಅರ್ಥ ವಾಗದೆ ಒದ್ದಾಡುತ್ತಿದ್ದಾರೆ. ಇದು ಕೂಡ ಗಿಮಿಕ್ ಅಂತಲೇ ಅಂದುಕೊಳ್ಳೋಣ. ಯಾಕಂದ್ರೆ ಈಗ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ವರಸೆ ಬದಲಾಗಬೇಕಿದೆ. ಹಾಗಾಗಿ ಚಂದ್ರಚೂಡ್ ಎಂಬ ಮಾತಿನ ಮಲ್ಲನನ್ನು ಹೀಗೆಲ್ಲ ಇಕ್ಕಟ್ಟಿಗೆ ಸಿಲುಕಿಸಿ, ಆಟ ಆಡಿಸುತ್ತಲೂ ಇರಬಹುದು‌. ಆದರೆ, ಚಂದ್ರಚೂಡ್ ಒಳಗೂ- ಹೊರಗೂ ಭಾರೀ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಭಾನುವಾರದ ಎಪಿಸೋಡ್ ನೋಡಿದವರು ಸೋಷಲ್ ಮೀಡಿಯಾದಲ್ಲಿ ಚಂದ್ರಚೂಡ್ ವಿರುದ್ಧ ಕೆಂಡಮಂಡಲ ಆಗಿದ್ದಾರೆ. ಇದೆಲ್ಲ ನೋಡಿದರೆ ಮುಂದಿನ ವಾರಕ್ಕೆ ಚಂದ್ರಚೂಡ್ ಎಲಿಮಿನೇಟ್ ಆದರೂ ಕೂಡ ಅಚ್ಚರಿ ಇಲ್ಲ.

Related Posts

error: Content is protected !!