ಕೋಟೆ ನಾಡಿನ ಹುಡುಗರ ಸಲ್ಯೂಟ್ ವಾರಿಯರ್ಸ್‌ ಆಲ್ಬಂ ಸಾಂಗ್‌ ; ಚಿತ್ರದುರ್ಗ ಪ್ರತಿಭೆಗಳ ಹಾಡಿಗೆ ಎಸ್‌ಪಿ, ಸಿಇಓ ಚಾಲನೆ…

ಕೊರೊನಾ ವಿಷಯ ಕುರಿತಂತೆ ಈಗಾಗಲೇ, ಹಾಡು, ಜಾಹಿರಾತು, ಕಿರುಚಿತ್ರ ಅಷ್ಟೇ ಯಾಕೆ ಸಿನಿಮಾಗಳು ತಯಾರಾಗಿವೆ. ಕೆಲವು ರಿಲೀಸ್ ಕೂಡ ಆಗಿವೆ. ಆ ಸಾಲಿಗೆ ಈಗ ‘ಸಲ್ಯೂಟ್ ವಾರಿಯರ್ಸ್’ ಆಲ್ಬಂ ಸಾಂಗ್ ಕೂಡ ಒಂದು.
ಹೌದು, ಇದು ಕೋಟೆ ನಾಡು ಚಿತ್ರದುರ್ಗ ಪ್ರತಿಭೆಗಳೇ ಸೇರಿ ಚಿತ್ರೀಕರಿಸುತ್ತಿರುವ ಹಾಡು. ಸದ್ಯ ಹಾಡಿನ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಶೂಟಿಂಗ್ ಬಳಿಕ ಯುವಕರ ತಂಡ, ಸಾಂಗ್ ಬಿಡುಗಡೆ ಮಾಡಲು ತಯಾರು ನಡೆಸುತ್ತಿದೆ.
ಇನ್ನು ಈ ಹುಡುಗರ ಪ್ರಯತ್ನ ಮೆಚ್ಚಿಕೊಂಡ ಚಿತ್ರದುರ್ಗ ಎಸ್.ಪಿ. ಮತ್ತು ಸಿಇಓ ಚಾಲನೆ ನೀಡಿ ಶುಭ ಹಾರೈಸಿದ್ದಾರೆ.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕೊರೊನಾ ಕುರಿತ ಜಾಗೃತಿ ಗೀತೆ ‘ಸಲ್ಯೂಟ್ ವಾರಿಯರ್ಸ್‌’ ಕನ್ನಡ ಆಲ್ಬಂ ಸಾಂಗ್ ಮುಹೂರ್ತ ನಡೆಯಿತು. ಈ ವೇಳೆ ಆಲ್ಬಂ ಸಾಂಗ್ ಗೆ ಚಾಲನೆ ಕೊಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ,
‘ಸರ್ಕಾರ ಕೊರೊನಾ ಲಾಕ್‌ಡೌನ್ ಸಡಿಲಿಕೆ ಮಾಡಿರಬಹುದು ಆದರೂ ಜನರು ಮೂರನೇ ಅಲೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಚಿತ್ರದುರ್ಗವನ್ನು ಕೊರೊನಾ ಮುಕ್ತ ಮಾಡಲು ಸನ್ನದ್ಧವಾಗಿದೆ. ಇನ್ನು ಪ್ರತಿಭಾವಂತ ಹುಡುಗರು ಸೇರಿ ಮಾಡಿರುವ ‘ಸಲ್ಯೂಟ್ ವಾರಿಯರ್ಸ್‌’ ಸಾಂಗ್ ಅದ್ಬುತವಾಗಿ ಮೂಡಿಬಂದಿದೆ. ಚಿತ್ರೀಕರಣ ಯಶಸ್ವಿಯಾಗಲಿ ಎಂದಿದ್ದಾರೆ.

ಸರ್ಕಾರ ವಿವಿಧ ರೀತಿಯಲ್ಲಿ ಜನಜಾಗೃತಿ ಕಾರ್ಯ ಮಾಡುತ್ತಿದ್ದು ಅದನ್ನು ಅರಿತ ಮಾತರಂ ಲ್ಯಾಪ್ ಕ್ರಿಯೇಷನ್ ತಂಡವು ಒಂದು ಅರ್ಥಪೂರ್ಣ ಹಾಡು ರಚಿಸಿದೆ. ಇವರ ಹೊಸ ಹೆಜ್ಜೆಗೆ ಶುಭವಾಗಲಿ. ಇವರಿಂದ ಇನ್ನೂ ಹೆಚ್ಚು ಕ್ರಿಯಾಶೀಲ ಕಾರ್ಯಗಳು ಬರಲಿ ಎಂದು ಶುಭ ಹಾರೈಸಿದ್ದಾರೆ.

ಸಾಂಗ್ ಚಿತ್ರೀಕರಣಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ನಂದಿನಿದೇವಿ, ‘ನಮ್ಮ ಜಿಲ್ಲೆಯನ್ನು ಹೋಲಿಕೆ ಮಾಡಿ ನೋಡಿದಾಗ ಕೊರೊನಾ ಸಂಖ್ಯೆ ಕಡಿಮೆ ಇದೆ. ಎಲ್ಲರೂ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ, ಮುಂದೆ ಮೂರನೆ ಅಲೆಯನ್ನು ತಡೆಯಲೂ ಎಲ್ಲರೂ ಸಿದ್ಧರಾಗೋಣ ಮತ್ತು ಎಚ್ಚರದಿಂದ ಇರೋಣ ಎಂದರು.

‘ಸಲ್ಯೂಟ್ ವಾರಿಯರ್ಸ್‌’ ಸಾಂಗ್ ಕ್ರಿಯೇಟಿವ್ ಹೆಡ್ ಮಾಲತೇಶ್ ಅರಸ್ ಹರ್ತಿಕೋಟೆ, ‘ನಿಜವಾದ ವಾರಿಯರ್ಸ್‌ ಗಳು ಇಲ್ಲಿ ನಾಯಕರಾಗಿ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ನಮ್ಮ ಈ ಹಾಡಿನಲ್ಲಿ ಎಸ್‌ಪಿ. ಡಿಸಿ, ಸಿಇಒ ಪ್ರಮುಖವಾಗಿದ್ದು ಜಿಲ್ಲೆಯ ಎಲ್ಲಾ ಪೊಲೀಸರು, ವೈದ್ಯರು, ನರ್ಸಗಳು, ಆಸ್ಪತ್ರೆ ಬ್ರದರ್ಸ್, ನಗರಸಭೆ ಪೌರ ಕಾರ್ಮಿಕರು, ಪತ್ರಕರ್ತರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಬೆಸ್ಕಾಂ ಸಿಬ್ಬಂದಿ, ಹೋಮ್ ಗಾಡ್ಸ್, ಪಿಡಿಒ, ಗ್ರಾಪಂ ಸಿಬ್ಬಂದಿ, ಡಿಸಿ ಕಚೇರಿ, ಜಿಪಂ ಕಚೇರಿಯ ಸಿಬ್ಬಂದಿಗಳನ್ನು ಚಿತ್ರಿಕರಣ ಮಾಡಲಾಗುವುದು ಎಂದರು.

ಸಲ್ಯೂಟ್ ವಾರಿಯರ್ಸ್‌
ಆಲ್ಬಂಗೆ ದೇವರತ್ನ ಮಂಜು ಸಾಹಿತ್ಯ ಬರೆದು ನಿರ್ದೇಶನ‌ ಮಾಡಲಿದ್ದಾರೆ.’ಇದು ಕೊರೊನಾ ಜಾಗೃತಿ ಗೀತೆಯಾಗಿದ್ದು ಇದರಲ್ಲಿ ವಾರಿಯರ್ಸ್‌ ಗಳನ್ನು ಸಾರ್ವಜನಿಕರು ಅಭಿನಂದಿಸುವ ಉದ್ದೇಶವೂ ಇದೆ. ಚಿತ್ರದುರ್ಗದ ವಾರಿಯರ್ಸ್‌ ಗಳೇ ಇದರಲ್ಲಿ ಇರುತ್ತಾರೆ ಚಿತ್ರದುರ್ಗದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಐದು ದಿನಗಳ ಕಾಲ ಚಿತ್ರೀಕರಣ ಮಾಡಿ ನಂತರ ಎಲ್ಲರನ್ನು ಒಂದೆಡೆ ಸೇರಿಸಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಸಲಾಗುವುದು ಎಂದರು.

ಮುಹೂರ್ತದಲ್ಲಿ ಅಡಿಷನಲ್ ಎಸ್.ಪಿ ನಂದಗಾವಿ ಮತ್ತು ಜಿಲ್ಲೆಯ ಎಲ್ಲಾ ಡಿವೈಎಸ್‌ಪಿ, ಎಲ್ಲಾ ವೃತ್ತ ನಿರೀಕ್ಷಕರು, ಸಬ್ ಇನ್ಸ್ ಪೆಕ್ಟರ್ ಹಾಗೂ ಸಲ್ಯೂಟ್ ವಾರಿಯರ್ಸ್‌ ಸಾಂಗ್ ಸಂಗೀತ ನಿರ್ದೇಶಕರಾದ ಮುನ್ನಾ, ನಿವೃತ್ತ ಪೊಲೀಸ್ ಅಧಿಕಾರಿ ದೇವೇಂದ್ರಪ್ಪ ತಂಡದ ಅಶೋಕ್, ರಾಘವೇಂದ್ರ, ಚಂದನ್, ಶಶಿಡ್ರೋಣ್, ಕಿಶೋರ್‌ಚಿನ್ನು, ಪಾಟೀಲ್, ಚೇತನ್, ತೇಜು, ಮದನ್ ರಾಹುಲ್ ಮತ್ತು ಚಿತ್ರತಂಡ ಭಾಗವಹಿಸಿದ್ದರು.

Related Posts

error: Content is protected !!