ವಿವಾಹ ಬಂಧನದಲ್ಲಿ ಬಹದ್ದೂರ್‌ ಚೇತನ್‌; ಅರಮನೆ ನಗರಿಯಲ್ಲಿ ಹೊಸ ಬಾಳಿಗೆ ಕಾಲಿಟ್ಟ ಜೇಮ್ಸ್‌ ಡೈರೆಕ್ಟರ್‌

‘ಬಹದ್ದೂರ್‌ʼ ಚಿತ್ರದ ಖ್ಯಾತಿಯ ನಿರ್ದೇಶಕ ಚೇತನ್‌ ಕುಮಾರ್‌ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಕೊರೋನಾ ನಡುವೆ ಸದ್ದಿಲ್ಲದೆ, ಸುದ್ದಿ ಮಾಡದೆ ಭಾನುವಾರ ಮೈಸೂರಿನಲ್ಲಿ ಸರಳವಾಗಿ ಮದುವೆ ಆಗಿದ್ದಾರೆ. ಆದರೆ ಅವರ ವಿವಾಹ ಮಹೋತ್ಸವಕ್ಕೆ ಕನ್ನಡದ ಅನೇಕ ಸ್ಟಾರ್‌ ಗಳು ಪಾಲ್ಗೊಳ್ಳುವ ಮೂಲಕ ಸಾಕ್ಷಿ ಅಗಿದ್ದಾರೆ.

ನಟರಾದ ದರ್ಶನ್‌, ಪುನೀತ್‌ ರಾಜಕುಮಾರ್‌, ನಿರ್ದೇಶಕರಾದ ಮಹೇಶ್‌ ಸೇರಿದಂತೆ ಹಲವರು ಮದುವೆಗೆ ಆಗಮಿಸಿ ನವದಂಪತಿಗೆ ಶುಭಾಶಯ ಕೋರಿದರು ಎಂದು ಮೂಲಗಳು ತಿಳಿಸಿವೆ. ನವದಂಪತಿಗಳಿಗೆ ಶುಭವಾಗಲಿ.

Related Posts

error: Content is protected !!