ಭಾರತ ಸಿಂಧೂರಿ ಸಿನಿಮಾ ವಿಚಾರ ಬಹಿರಂಗವಾದ ಬೆನ್ನಲೇ, ಡಿ.ಕೆ. ರವಿ ಕುರಿತು ಚಿತ್ರ ಮಾಡುವೆ ಅಂತ ಶಾಸಕ ಸಾ.ರಾ. ಮಹೇಶ್‌ ಹೇಳಿದ್ದೇಕೆ?


ಇದೆಲ್ಲ ನಿಜವಾ ? ಜನಕ್ಕೆ ಹಿಗೊಂದು ಅಚ್ಚರಿ. ಯಾಕಂದ್ರೆ, ಯಾರೋ ಅಧಿಕಾರಿಗಳು, ರಾಜಕಾರಣಿಗಳು ಇಲ್ಲವೇ ವಿವಾದಿತ ವ್ಯಕ್ತಿಗಳು ದೊಡ್ಡ ಪ್ರಚಾರಕ್ಕೆ ಬಂದಾಗ ಅವರ ಕುರಿತು ಸಿನಿಮಾ ಮಾಡುವ ಸುದ್ದಿಗಳು ಚಾಲ್ತಿಗೆ ಬರುವುದು ಅಷ್ಟೇ ಸಹಜ. ಈಗ ಅದೇ ಸಾಲಿನಲ್ಲಿ ಮಹಿಳಾ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ದಿವಂಗತ ಡಿ.ಕೆ. ರವಿ ಅವರ ಕುರಿತು ಸಿನಿಮಾ ಮಾಡುವ ವಿಚಾರಗಳು ಹೆಚ್ಚು ಸುದ್ದಿಯಲ್ಲಿವೆ. ಇದೇನು ಹೊಸದಲ್ಲ, ಹಾಗೆಯೇ ವಿಶೇಷವೂ ಅಲ್ಲ. ಕನ್ನಡ ಸಿನಿಮಾದ ಇತಿಹಾಸದಲ್ಲಿ ಹೀಗೆಲ್ಲ ಎಷ್ಟು ವ್ಯಕ್ತಿಗಳ ಬಗ್ಗೆ ಗಾಂಧಿನಗರದಲ್ಲಿ ಸುದ್ದಿ ಆಗಿಲ್ಲ ಹೇಳಿ ? ಮೊನ್ನೆ ಮೊನ್ನೆಯಷ್ಟೇ ಮಾಜಿ ಭೂಗತ ದೊರೆ ಮತ್ತಪ್ಪ ರೈ ಕುರಿತು ಸಿನಿಮಾ ಮಾಡುವ ವಿಚಾರವೂ ಕೊನೆಗೆ ಏನಾಯಿತು ಅನ್ನೋದು ನಿಮಗೆಲ್ಲ ಗೊತ್ತೇ ಇದೆ. ಅಷ್ಟೇ ಯಾಕೆ, ಸುನಾಮಿ ಹೆಸರಲ್ಲೋ, ಕೊರೋನಾ ಅಂತಲೋ, ಡ್ರಗ್ಸ್‌ ಮಾಫಿಯೋ ಜಾಡು ಹಿಡಿದೋ ಪ್ರಚಲಿತ ವಿಷಯದ ಬೆನ್ನು ಹತ್ತಿ ಅದೇ ಹೆಸರಲ್ಲೊಂದು ಸಿನಿಮಾ ಮಾಡುತ್ತೇವೆಂದು ಸುದ್ದಿ ಮಾಡಿಕೊಂಡವರ ಕಥೆಗಳೂ ಇಲ್ಲಿ ಬೇಕಾದಷ್ಟಿವೆ.

ಕೆಲವರಿಗೆ ಇದೊಂಥರ ಖಾಯಲಿ. ಪ್ರಚಾರದಲ್ಲಿರುವ ವ್ಯಕ್ತಿ ಅಥವಾ ವಸ್ತು, ವಿಷಯಗಳಿಗೆ ರಾತ್ರೋರಾತ್ರಿ ಕಥೆ ಹೆಣೆದು ಸಿನಿಮಾ ಮಾಡುತ್ತೇನೆ ಅಂತ ಸುದ್ದಿ ಮಾಡಿಕೊಂಡವರು ಇಲ್ಲಿ ತುಂಬಾ ಜನರಿದ್ದಾರೆ. ಅವರಾರು ಸದಭಿರುಚಿಯ ಸಿನಿಮಾ ಮಾಡಿದವರಲ್ಲ. ಹಾಗೆಯೇ ಸ್ಟಾರ್‌ ಸಿನಿಮಾಗಳನ್ನು ಮಾಡಿಯೂ ಅನುಭವ ಇಲ್ಲ. ಹಾಗೋ ಹೀಗೋ ಯಾವುದೋ ಒಂದು ವಿಷಯ ದೊಡ್ಡದಾಗಿ ಸುದ್ದಿಯಾದಾಗ ಆ ವಿಷಯದ ಮೇಲೆ ಸಿನಿಮಾ ಮಾಡುತ್ತೇನೆಂದು ಹೇಳಿಕೊಂಡು ಸುದ್ದಿ ಮಾಡಿಕೊಂಡವರು. ಕೊನೆಗೆ ಹಾಗೆ ಸುದ್ದಿ ಆದ ವ್ಯಕ್ತಿ, ವಸ್ತು, ವಿಷಯಗಳ ಪೈಕಿ ಕೆಲವೇ ಕೆಲವು ಸಿನಿಮಾ ಆಗಿವೆ. ಆ ಸಿನಿಮಾ ಮಾಡಿದವರೆಲ್ಲರೂ ಪ್ರೊಪೆಷನಲ್‌ ಸಿನಿಮಾ ಮೇಕರ್ಸ್.ಅವರು ಹೇಳಿದ್ದಕ್ಕೆ ಬದ್ಧತೆ ಹೊಂದಿದವರು. ಮಾತು ಉಳಿಸಿಕೊಳ್ಳುವುದಕ್ಕಾಗಿಯೇ ಕೊನೆಗೆ ಸಿನಿಮಾ ಮಾಡಿದವರು. ಗಾಂಧಿನಗರದ ವಾಸ್ತವದ ಪರಿಸ್ಥಿತಿ ಹೀಗಿದ್ದೂ ಕೂಡ ಈಗ ಎರಡು ವ್ಯಕ್ತಿಗಳ ಕುರಿತು ಸಿನಿಮಾ ಮಾಡುತ್ತೇವೆಂದು ಹೊರಟವರ ಬಗ್ಗೆಯೂ ಈಗ ಸಖತ್‌ ಸುದ್ದಿ ಆಗಿದೆ.

ಒನ್ಸ್‌ ಎಗೇನ್‌ ಇವರು ಕೂಡ ಸಿನಿಮಾ ಮಾಡಲು ಹೊರಟಿದ್ದು ರಾಜ್ಯದಲ್ಲಿ ಹೆಚ್ಚು ಸುದ್ದಿಯಲ್ಲಿರುವ ವ್ಯಕ್ತಿ ಹಾಗೂ ವಿಷಯಗಳ ಬಗ್ಗೆ. ರಾಜ್ಯದಲ್ಲಿ ಈಗ ಹೆಚ್ಚು ಸುದ್ದಿಯಲ್ಲಿರುವ ಮಹಿಳಾ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಕುರಿತು ಪತ್ರಕರ್ತ ಕೃಷ್ಣಸ್ವರ್ಣ ಚಂದ್ರ ಎನ್ನುವವರು ಸಿನಿಮಾ ಮಾಡಲು ಹೊರಟಿದ್ದಾರಂತೆ. ಅವರ ಪ್ರಕಾರ ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಭಾರತ ಸಿಂಧೂರಿ ಎನ್ನುವ ಚಿತ್ರದ ಟೈಟಲ್‌ ಕೂಡ ರಿಜಿಸ್ಟ್ರಾರ್‌ ಆಗಿದೆಯಂತೆ. ಅಚ್ಚರಿ ಅಂದ್ರೆ ಈ ಸುದ್ದಿ ಬಹಿರಂಗ ಗೊಂಡ ಬೆನ್ನಲೇ ಅತ್ತ ಮೈಸೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಕೂಡ ದಿವಂಗತ ಡಿ.ಕೆ.ರವಿ ಕುರಿತು ಸಿನಿಮಾ ಮಾಡುವುದಾಗಿ ಹೇಳಿದ್ದಾರೆನ್ನುವ ಸುದ್ದಿ ಹರಡಿದೆ. ಇದೆಲ್ಲ ಎಷ್ಟು ಸತ್ಯ? ಮಹಿಳಾ ಐಎಎಸ್‌ ಆಧಿಕಾರಿ ರೋಹಿಣಿ ಸಿಂಧೂರಿ ಕುರಿತು ಸಿನಿಮಾ ಮಾಡುತ್ತೇನೆಂದು ಕೃಷ್ಣಸ್ವರ್ಣ ಚಂದ್ರ ಎನ್ನುವವರು ಸುದ್ದಿ ಬಹಿರಂಗ ಪಡಿಸಿದ ಬೆನ್ನಲೇ ಶಾಸಕ ಸಾ.ರಾ. ಮಹೇಶ್‌ ತಾವು ಕೂಡ ದಿವಂಗತ ಡಿ.ಕೆ. ರವಿ ಕುರಿತು ಸಿನಿಮಾ ಮಾಡುತ್ತೇನೆ ಅಂಹ ಹೇಳಿದ್ದೇಕೆ? ಡಿ.ಕೆ. ರವಿ ಕುರಿತು ಸಿನಿಮಾ ಮಾಡಲು ಸಾ.ರಾ. ಮಹೇಶ್‌ ಹೋರಟಿದ್ದಾರೆ?

ಇತ್ತ ಕೃಷ್ಣ ಸ್ವರ್ಣ ಚಂದ್ರ ನಿರ್ದೇಶಿಸುವ ಭಾರತ ಸಿಂಧೂರಿ ಸಿನಿಮಾದಲ್ಲಿ ಇರುವ ಪಾತ್ರಗಳಾದರು ಯಾವು? ಸೋಷಲ್‌ ಮೀಡಿಯಾದಲ್ಲಿ ಈಗ ಈ ಸಿನಿಮಾ ಸುದ್ದಿಗಳ ಸುತ್ತ ಇತ್ಯಾದಿ ಪ್ರಶ್ನೆಗಳು ವೈರಲ್‌ ಆಗಿವೆ.
ಆ ಕತೆ ಇರಲಿ ಬಿಡಿ, ಅವರ ಬಯಸಿದಂತೆ ಸಿನಿಮಾ ಮಾಡಲಿ. ಆದರೆ ಇವರೀಗ ಸಿನಿಮಾ ಮಾಡುತ್ತೇವೆಂದು ಹೇಳಿಕೊಂಡ ಸಂದರ್ಭವಾದರೂ ಹೇಗಿದೆ ಗೊತ್ತಾ? ಸಿನಿಮಾ ಚಟುವಟಿಕೆಗಳೇ ಕಂಪ್ಲೀಟ್‌ ಸ್ಥಬ್ದವಾಗಿರೋ ಈ ಸಂದರ್ಭದಲ್ಲಿ ಇವರೆಲ್ಲ ಸಿನಿಮಾ ಮಾಡ್ತೀವಿ ಅನ್ನೋದು ಎಷ್ಟು ಸತ್ಯ?

ಇವರು ಸಿನಿಮಾ ಮಾಡುವ ಉತ್ಸಾಹ, ಉಮೇದು, ಕೆಚ್ಚು, ಕಿಚ್ಚು ಇನ್ನೆಷ್ಟು ದಿನ ಇರಬಹುದು? ಬರೀ ಇದೆಲ್ಲ ಪ್ರಚಾರದ ಗೀಳಾ ? ಇಂತಹ ಪ್ರಶ್ನೆಗಳು ಕೂಡ ಈಗ ಹೆಚ್ಚು ಚರ್ಚೆಯಲ್ಲಿವೆ. ಐಎಎಸ್‌ ಆಧಿಕಾರಿ ರೋಹಿಣಿ ಸಿಂಧೂರಿ ಅವರ ಕುರಿತು ಸಿನಿಮಾ ಬರುವುದೇ ನಿಜವಾಗಿದ್ದರೆ, ಅತ್ತ ಶಾಸಕ ಸಾ.ರಾ. ಮಹೇಶ್‌ ಅವರು ದಿವಂಗತ ಡಿ.ಕೆ. ರವಿ ಕುರಿತು ಸಿನಿಮಾ ಮಾಡುವುದು ನಿಜವಾ? ಆ ಸಿನಿಮಾ ಬರುವುದದಾರೂ ಯಾವಾಗ? ಉತ್ತರಕ್ಕೆ ಕಾಲವೇ ನಿರ್ಧರಿಸಲಿದೆ.

Related Posts

error: Content is protected !!