ಎಲ್ಲಾ ರಾಜಕೀಯ ಪಕ್ಷದ ಬೆಂಬಲಿಗರಿಗೆ ಬಹಿರಂಗ ಪತ್ರ ಬರೆದ ಉಪೇಂದ್ರ : ನನ್ನನ್ನು ಬೇರೆಯವರ ಜೊತೆ ಹೋಲಿಸಬೇಡಿ, ಎಂದೆಂದೂ ನಾನು ಉಪೇಂದ್ರ! ಹೀಗೆ ಹೇಳಲು ಕಾರಣ ಇಲ್ಲಿದೆ…

ಅಂಬೇಡ್ಕರ್‌ ಹೇಳಿಕೆಯೊಂದರ ಬಗ್ಗೆ ರಿಯಾಕ್ಟ್‌ ಮಾಡಿ ಕೊನೆಗೆ ಅದು ವಿವಾದಕ್ಕೆ ಸಿಲುಕಿದ ನಂತರ ಕ್ಷಮೆ ಕೇಳಿ ವಿವಾದದಿಂದ ಹೊರ ಬಂದ ಬೆನ್ನಲ್ಲೇ, ನಟ ಉಪೇಂದ್ರ ನಾಡಿನ ಎಲ್ಲಾ ರಾಜಕೀಯ ಪಕ್ಷದ ಬೆಂಬಲಿಗರಿಗೊಂದು ಬಹಿರಂಗ ಪತ್ರ ಬರೆದಿದ್ದಾರೆ.

ತೀವ್ರ ಬೇಸರದಲ್ಲೇ ಆ ಪತ್ರ ಬರೆದಿರುವ ಅವರು, ‘ನನ್ನನ್ನು ಬೇರೆಯವರ ಜೊತೆ ಹೋಲಿಸಬೇಡಿ, ಎಂದೆಂದೂ ನಾನು ಉಪೇಂದ್ರ’ ಅಂತ ಮನವಿ ಮಾಡಿಕೊಂಡಿದ್ದಾರೆ.
ಇಷ್ಟಕ್ಕೂ ಆಗಿದ್ದೇನು, ಅಷ್ಟೇಕ್ಕೆ ಬೇಸರದಲ್ಲಿ ಅವರು ಪತ್ರಬರೆದು ತಮ್ಮನ್ನು ಬೇರೆವರಿಗೆ ಹೋಲಿಸಬೇಡಿ ಅಂತ ರಿಕ್ವೇಸ್ಟ್‌ ಮಾಡಿಕೊಂಡಿದ್ದರ ಕಾರಣವಾದರೂ ಏನು ? ಅದೀಗ ದೊಡ್ಡ ಕುತೂಹಲ ಮೂಡಿಸಿದೆ. ಹಾಗೆಯೇ ಅವರು ಬಹಿರಂಗ ಪತ್ರದಲ್ಲಿ ಏಳು ಕಾರಣಗಳೊಂದಿಗೆ ತಾವು ಬೇರೆಯವರ ಹಾಗೆ ಅಲ್ಲ ಅಂತ ಹೇಳಿಕೊಂಡಿದ್ದಾರೆ.

ಆ ಪತ್ರದಲ್ಲಿರೋ ಅಂಶಗಳು ಹೀಗಿವೆ…

  • ನನ್ನನ್ನು ಬೇರೆಯವರ ಜೊತೆ ಹೋಲಿಸಬೇಡಿ – ಎಂದೆಂದಿಗೂ ನಾನು ಉಪೇಂದ್ರ
  • ಆತಂಕ ಪಡಬೇಡಿ. ಇನ್ನೊಬ್ಬ ನಾಯಕ ಹುಟ್ಟಿಕೊಳ್ಳುತ್ತಿದ್ದಾನೆ ಎಂದು- ನಾನೆಂದಿಗೂ ನಾಯಕನಾಗುವುದಿಲ್ಲ.
  • ಭಯಪಡಬೇಡಿ ನಿಮ್ಮ ಪಕ್ಷ ನಾಯಕಿನಿಗೆ ಸಿಗುವ ಮತ ವಿಭಜನೆ ಆಗುತ್ತದೆ ಎಂದು-ನಾಯಕನಾಗಬೇಕೆಂದು ಧೃಡ ಮನಸು ಮಾಡಿರುವ ಪ್ರಜಾಪ್ರಭು ಯಾವ ನಾಯಕನಿಗೂ ಇನ್ನು ಮುಂದೆ ಮತ ನೀಡುವುದಿಲ್ಲ!
  • ನಿಮಗೆ ನಿಮ್ಮ ಪಕ್ಷ ನಾಯಕನಿಂದ ಸಿಗುವ ಮಾನಸಿಕ ನೆಮ್ಮದಿ, ಸಾಮಾಜಿಕ ಘನತೆ, ರಾಜಕೀಯ ಭದ್ರತೆ ಮತ್ತು ಆರ್ಥಿಕ ಆದಾಯ ಬೇರೆ ಯಾರೋ ಕಿತ್ತುಕೊಳ್ಳುತ್ತಾರೆಂಬ ಆತಂಕ ಬೇಡ. ಅದು ಕಡಿಮೆಯಾಗಬಾರದು ಇಮ್ಮಡಿ ಆಗಬೇಕೆನ್ನುವುದೇ ಪ್ರಜಾಕೀಯದ ಉದ್ದೇಶ.
  • ಶೇ. 20 ರಷ್ಟು ನಾಯಕತ್ವದ , ಚಾಣಾಕ್ಷ ಜಾಣತನದ, ಹಣ, ತೋಳ್ಬಲದ ಪ್ರಬಲ ಗುಂಪಿನಲ್ಲಿದ್ದೆನೆಂದು ಹೆಮ್ಮೆ ಪಡಬೇಡಿ. ಶೇ. 80 ರಷ್ಟು ಸಾಮಾನ್ಯರು, ದೀನ ದಲಿತರು, ಅಮಾಯಕರ ಗುಂಪು ನಿಮ್ಮ ತಾಳಕ್ಕೆ ಕುಣಿಯುತ್ತಲೇ ಇರುವರು ಎಂಬ ಕಾಳ ಮುಗಿದಿದೆ.
  • ನಾನು ಎಲೆಕ್ಷನ್‌ ನಲ್ಲಿ ನಿಲ್ಲುತ್ತೇನೆ ಎಂದುಕೊಂಡು ಇದೊಂದು ಕುಟುಂಬ ರಾಜಕಾರಣ ಎಂದಿರಿ, ನಾನು ನಿಲ್ಲಲ್ಲ ಎಂದಾಗ ಬೇರೆಯವರನ್ನು ಬಾವಿಗೆ ತಳ್ಳಿ ಆಳ ನೋಡ್ತೀರಾ ಎಂದಿರಿ ! ಇರಲಿ ಒಂದು ಸತ್ಯ ತಿಳಿಯಿರಿ….
    7.ಶೇ.20 ʼನಾನುʼ ಎನ್ನುವವರ ಜಪತೆ ನಿನ್ನನ್ನು ಬಿಟ್ಟು ಯಾರೂ ಇರುವುದಿಲ್ಲ, ನೀನು ಎನ್ನುವ ಶೇ.80 ರಷ್ಟು ಜನರ ಜೊತೆ ಅವನೇ…’
    ಅಂತ ಪತ್ರದಲ್ಲಿ ಬರೆದು ಅದನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯಕ್ಕೆ ಅವರು ಯಾರ ಕುರಿತು ಇದನ್ನೆಲ್ಲ ಹೇಳಿದ್ದಾರೆ, ಅವರ ಟಾರ್ಗೆಟ್‌ ಯಾರು, ಇಷ್ಟೆಲ್ಲ ಈಗ ಯಾಕಾಗಿ ಹೇಳಿದರು, ಎಲ್ಲವೂ ನಿಗೂಢ. ಆದರೆ, ‘ಮಹಾನಾಯಕ ಅಂಬೇಡ್ಕರ್‌’ ವಿಚಾರದಲ್ಲಿ ಅವರು ಕ್ಷಮೆ ಕೇಳಿದ ಬೆನ್ನಲ್ಲೇ ಸೋಷಲ್‌ ಮೀಡಿಯಾದಲ್ಲಿ ಇಷ್ಟೆಲ್ಲ ಹಂಚಿಕೊಂಡಿದ್ದು ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಇದೆಲ್ಲವನ್ನು ಗಾಳಿಗೆ ತೂರಿದ ಅವರು, ಕಲಾವಿದರ ಹಾಗೂ ಅಸಹಾಯಕ ಜನರ ನೆರವಿಗೆ ನಿಂತಿದ್ದಾರೆ. ಇಂದು ಮಂಡ್ಯ ಹಾಗೂ ಮೈಸೂರಿನಲ್ಲಿ ಫುಡ್‌ ಕಿಟ್‌ ವಿತರಣೆಯಲ್ಲಿ ಪಾಲ್ಗೊಂಡಿದ್ದಾರೆ.

Related Posts

error: Content is protected !!