ಮಹಾನಾಯಕನ ತಂಟೆಗೆ ಹೋದ ಉಪೇಂದ್ರ : ನೆಟ್ಟಿಗರ ಆಕ್ರೋಶಕ್ಕೆ ಕ್ಷಮೆ ಕೇಳಿ ಸುಮ್ಮನಾದ ರಿಯಲ್ ಸ್ಟಾರ್ !

ಇದೆಲ್ಲ ಬೇಕಿತ್ತಾ? ಸೋಷಲ್ ಮೀಡಿಯಾದಲ್ಲಿ ನಟ ಉಪೇಂದ್ರ ಅವರಿಗೆ ಜನ ಕೇಳಿದ ಪ್ರಶ್ನೆ ಇದು. ಅಂಬೇಡ್ಕರ್ ವಿಚಾರದಲ್ಲಿ ನಟ ಉಪೇಂದ್ರ ನೀಡಿದ್ದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಅವರು ಕ್ಷಮೆ ಕೇಳಿದ್ದಾರೆ.


“ಇತಿಹಾಸ ಅರಿಯವದವರು ಇತಿಹಾಸ ಸೃಷ್ಟಿಸಲಾರ ʼ ಎಂಬುದು ಡಾಕ್ಟರ್ ಅಂಬೇಡ್ಕರ್ ಅವರ ಹೇಳಿಕೆ ಎಂಬುದನ್ನು ತಿಳಿದಿರಲಿಲ್ಲ. ಯಾರೋ ಇಂಗ್ಲಿಷ್ ಅವರ ಬರಹ ಎಂದು ತಿಳಿದು ತಪ್ಪು ಮಾತನಾಡಿದೆ. ದಯವಿಟ್ಟು ಕ್ಷಮಿಸಿ ʼ ಅಂತ ಸೋಷಲ್ ಮೀಡಿಯಾ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ. ಇಷ್ಟಕ್ಕೂ ಆಗಿದ್ದೇನು ಗೊತ್ತಾ?


ನಟ ಉಪೇಂದ್ರ ಮೂರ್ನಾಲ್ಕು ದಿನಗಳ ಹಿಂದೆ ಸೋಷಲ್ ಮೀಡಿಯಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ ಅಂತ ಯಾರೋ ತಪ್ಪಾಗಿ ಹೇಳಿದ್ದಾರೆ. ಇತಿಹಾಸ ಸೃಷ್ಟಿಸೋದಿಕ್ಕೆ ಇತಿಹಾಸ ಗೊತ್ತಿರಬೇಕು ಅಂತೇನಿಲ್ಲ. ಇತಿಹಾಸ ತಾನಾಗಿಯೇ ಸೃಷ್ಟಿಯಾಗುತ್ತೆ ಅಂತ ಅಂದಿದ್ದರು. ಅವರ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.

ಉಪೇಂದ್ರ ಹೇಳಿಕೆಗೆ ಕೆಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಉಪೇಂದ್ರ ಅವರಿಗೆ ಇತಿಹಾಸ ಗೊತ್ತಿಲ್ಲ. ಸುಮ್ನೆ ಮಾತನಾಡುತ್ತಾರೆ. ಅವರಿಗೆ ಅಂಬೇಡ್ಕರ್ ಯಾರು ಅನ್ನೋದು ಗೊತ್ತಿಲ್ಲ. ಮೇಲ್ಜಾತಿಯ ಅಮಲು ಹೀಗೆಲ್ಲ ಮಾತನಾಡಿಸುತ್ತೆ ಅಂತೆಲ್ಲ ಕಟುವಾಗಿ ಟೀಕಿಸಿದ್ದರು. ಇದಾದ ಬೆನ್ನಲೇ ಉಪೇಂದ್ರ ಕ್ಷಮೆ ಕೇಳಿ ಬಚವಾಗಿದ್ದಾರೆ.

Related Posts

error: Content is protected !!