ಬೆಟ್ಟದ ಹೂವು ಖ್ಯಾತಿಯ ನಟ ಶಂಖನಾದ ಅರವಿಂದ್ ನಿಧನ‌; ಜೀವ ಪಡೆದ ಕೊರೊನಾ

“ಬೆಟ್ಟದ ಹೂವು” ಖ್ಯಾತಿಯ ನಟ “ಶಂಖನಾದ” ಅರವಿಂದ್‌ ನಿಧನರಾಗಿದ್ದಾರೆ. ಕೊರೊನಾ ಸೋಂಕು ತಗುಲಿ, ಕಳೆದ ಹತ್ತು ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇಂದು‌ ( ಮೇ.7) ಉಸಿರಾಟದ ತೊಂದರೆ ಹೆಚ್ಚಾದ ಕಾರಣ ಕೊನೆಯುಸಿರೆಳೆದರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ‌.

ಅವರಿಗೆ 70 ವರ್ಷ ವಯಸ್ಸು ಆಗಿತ್ತು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನನ್ನು ಆಗಲಿದ್ದಾರೆ. ಸುಮಾರು ಮೂರು ತಿಂಗಳ ಹಿಂದೆ ಇವರ ಮಡದಿ ರಮಾ ಅರವಿಂದ್ ಅವರೂ ಅನಾರೋಗ್ಯದಿಂದ ವಿಧಿವಶರಾಗಿದ್ದರು. ರಮಾ ಕನ್ನಡ ಚಿತ್ರರಂಗದಲ್ಲಿ ಹಿನ್ನಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದರು.

ಸುಮಾರು 250ಕ್ಕೂ ಹೆಚ್ಚು ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ “ಶಂಖನಾದ” ಅರವಿಂದ್ ನಟಿಸಿದ್ದರು. 70-80ರ ದಶಕದಲ್ಲಿ ಅರವಿಂದ್ ಬಹು ಬೇಡಿಕೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದರು ಅವರು, ಕಾಶಿನಾಥ್ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಚಿರಪರಿಚಿತರಾಗಿದ್ದರು. ಇತ್ತೀಚಿಗೆ ಕನ್ನಡದ ಕೆಲವೊಂದು ಧಾರಾವಾಹಿಗಳಲ್ಲಿಯೂ ಅವರು ಅಭಿನಯಿಸಿದ್ದರು. 

“ಶಂಖನಾದ” ಅರವಿಂದ್ ಅವರ ಬಗ್ಗೆ ಬಹುತೇಕ ಗೊತ್ತಿರುವುದು ಒಬ್ಬ ಹಾಸ್ಯ ನಟನಾಗಿ. ಆದರೆ ಅವರು ಚಿತ್ರರಂಗಕ್ಕೆ ಬಂದಿದ್ದು ಒಬ್ಬ ಹೀರೊ ಆಗಿ. ಅದಕ್ಕೆ ಸಾಕ್ಷಿಯೇ “ಶಂಖನಾದ” ಚಿತ್ರ. ಮೊದಲ ಬಾರಿಗೆ ಅರವಿ‌ಂದ್ ಅವರು, ಹೀರೋ ಆಗಿ ಅಭಿನಯಿಸಿದ ಚಿತ್ರವದು.
“ಶಂಖನಾದ” ಚಿತ್ರವನ್ನು ಸಂಪಿಗೆ ಹಳ್ಳಿಯಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಆ ಚಿತ್ರದಲ್ಲಿ ಅವರೇ ಹೈಲೈಟ್. ಆ ಕಾಲದಲ್ಲಿ ಅದು ಜನಪ್ರಿಯವಾದ ಚಿತ್ರ ವದು. ಆರಂಭದಲ್ಲಿ ಈ ಚಿತ್ರಕ್ಕೆ ಅಷ್ಟಾಗಿ ಜನ ಮನ್ನಣೆ ಸಿಗಲಿಲ್ಲ. ಆನಂತರ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿತು.‌ಅಲ್ಲಿ‌ಂದ ಅವರ ಹೆಸರಿಗೆ “ಶಂಖನಾದ” ಎಂಬ ಹೆಸರೂ ಸೇರಿಕೊಂಡಿತು.

Related Posts

error: Content is protected !!