ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಉಳಿಸಿ ಅಭಿಯಾನಕ್ಕೆ ಸಿನಿಮಾ ಸಾಹಿತಿ ಕವಿರಾಜ್ ಬೆಂಬಲ !

ಕನ್ನಡ ಚಿತ್ರರಂಗದ ಹೆಸರಾಂತ ಗೀತೆ ರಚನೆಕಾರ ಕವಿರಾಜ್ ಅಪ್ಪಟ‌ ಮಲೆನಾಡಿನ‌ ಪ್ರತಿಭೆ.‌ ಅವರು ಓದಿದ್ದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜು. ಅಲ್ಲಿಂದಲೇ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಇವತ್ತು ನಾಡಿನ ಹೆಸರಾಂತ ಸಿನಿಮಾ ಗೀತೆ ರಚನೆಕಾರ ಅನ್ನೋದು‌ ಬಹುತೇಕರಿಗೆ ಗೊತ್ತಿರುವ ವಿಚಾರ. ಇಷ್ಟು ಹೇಳಿದ ಮೇಲೆ ಅವರು ಮಲೆನಾಡು, ಸಹ್ಯಾದ್ರಿಕಾಲೇಜಿಗೆ ಅಪತ್ತು ಬಂದ್ರೆ ಸುಮ್ನೆ ಇರ್ತಾರಾ? ಹೌದು, ಶಿವಮೊಗ್ಗದ ಪ್ರತಿಷ್ಟಿತ ಸಹ್ಯಾದ್ರಿ ಕಾಲೇಜು ಈಗ ಆಪತ್ತಿನಲ್ಲಿದೆ‌ . ಕಾಲೇಜಿನ ವಿಶಾಲ ಕ್ಯಾಂಪಸ್ ಅನ್ನು ಸರ್ಕಾರ ಸಾಯಿ ಇಂಡಿಯಾ ಖೇಲೋ ಇಂಡಿಯಾಕ್ಕೆ ಕೊಡಲು ಹೊರಟಿದೆ. ಅದರ ವಿರುದ್ಧ ಈಗ ಅಲ್ಲಿ ದೊಡ್ಡ ಅಭಿಯಾನ ಶುರುವಾಗಿದೆ. ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಉಳಿಸಿ ಅಂತ ಅಲ್ಲಿನ ಸಾಹಿತಿಗಳು, ಸಂಘಟನೆಗಳು, ಪ್ರಗತಿಪರ ಚಿಂತಕರು, ಕಾಲೇಜಿನ ಹಳೆಯ ಹಾಗೂ ಹಾಲಿ ವಿದ್ಯಾರ್ಥಿಗಳು ಧ್ವನಿ ಎತ್ತಿದ್ದಾರೆ. ಅದಕ್ಕೀಗ ಕವಿರಾಜ್ ಕೂಡ ಬೆಂಬಲಿಸಿದ್ದಾರೆ.

ಕಾಲೇಜು ಅಂದರೆ, ಕೇವಲ ಕಟ್ಟಡವಲ್ಲ, ಅಲ್ಲಿರುವ ವಸ್ತುಗಳಲ್ಲ. ಆ ಇಡೀ ಕ್ಯಾಂಪಸ್​ನಲ್ಲಿ ಕಲಿಕೆಯಿದೆ. ಅಲ್ಲಿರುವ ಮರ ಗಿಡಗಳು, ಬಯಲು, ಉದ್ಯಾನವನ, ಹೂವುಗಳೆಲ್ಲಾ ಸೇರಿಯೇ ಕಾಲೇಜು ಎನಿಸಿವೆ. ಅಲ್ಲಿ ನಡೆವ ಘಟನೆಗಳು ವಿದ್ಯಾರ್ಥಿಗಳನ್ನು ಬೆಳೆಸುತ್ತವೆ. ನಾವು ಓದುತ್ತಿದ್ದಾಗ ಇದ್ದ ಕಾಲೇಜಿನ ಆವರಣ ಈಗಾಗಲೇ ಸಾಕಷ್ಟು ಚಿಕ್ಕದಾಗಿದೆ.

ಶಿಕ್ಷಣಕ್ಕೆ ಸಂಬಂಧವಿರದ ಕಾರಣಕ್ಕೆ ಅಲ್ಲಿಯ ಜಾಗವನ್ನು ಬೇರೆಯಾರಿಗೋ ಕೊಡುವುದಕ್ಕೆ ನನ್ನ ವಿರೋಧವಿದೆ. ಅಲ್ಲದೆ ಧ್ಯಾನ ಕೇಂದ್ರದ ಅಸ್ಮಿತೆಯನ್ನು ಹಾಳು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಸಾಧ್ಯವಾದರೆ ಅಲ್ಲಿನ ವಾತಾವರಣವನ್ನು ಇನ್ನಷ್ಟು ಸುಂದರಗೊಳಿಸಬೇಕು. ಅದನ್ನ ವಿರೂಪಗೊಳಿಸಬೇಡಿ ಎಂದು ಮನವಿ ಮಾಡಿದ್ದಾರೆ.

Related Posts

error: Content is protected !!