ನಟ ಪ್ರಕಾಶ್ ಬೆಳವಾಡಿಗೆ ಇರಬಾರದ ಜಾಗಕ್ಕೆ ಇರುವೆ ಬಿಟ್ಟುಕೊಳ್ಳುವ ಕೆಲಸ ಬೇಕಿತ್ತಾ…?


ಹಿರಿಯ ನಟ ಪ್ರಕಾಶ್ ಬೆಳವಾಡಿ ವಿರುದ್ಧ ಸೋಷಲ್ ಮೀಡಿಯಾದಲ್ಲಿ ಭಾರೀ‌ ಆಕ್ರೋಶ ವ್ಯಕ್ತವಾಗಿದೆ. ಅವನ್ಯಾವನೋ ಸುಮ್ಮಿರಲಾರದೆ ಅದೇನೋ ಕೆರ್ಕೊಂಡು ಹುಣ್ಣು ಮಾಡ್ಕೊಂಡ ಅಂತೆನ್ನುವ ಹಾಗಾಗಿದೆ ಪ್ರಕಾಶ್ ಬೆಳವಾಡಿ ಕಥೆ. ಕಾಲ, ಸಂದರ್ಭ, ಸನ್ನಿವೇಶದ ಅರಿವಿರದೆ ಅವರು ಸೋಷಲ್ ಮೀಡಿಯಾದಲ್ಲಿ ಹಾಕಿಕೊಂಡ ಒಂದು ಸ್ಟೇಟಸ್ ಗೆ ನೆಟ್ಟಿಗರು ಉಗಿದು ಉಪ್ಪು ಹಾಕಿದ್ದಾರೆ.

ಅವರ ಬಗ್ಗೆ ನಮಗೂ ಗೌರವ ಇದೆ. ಅವರು ಹಿರಿಯ ನಟರು. ಚಿತ್ರರಂಗಕ್ಕೆ ಮೆರಗು ತಂದವರು. ಆದರೆ ಈ ಸಂದರ್ಭಕ್ಕೆ ಅವರಿಗೆ ಇಂತಹ ಹೇಳಿಕೆ ನೀಡುವ ಅವಶ್ಯಕತೆ ಇರಲಿಲ್ಲ ಅಂತ ನಿಮಗೂ ಅನಿಸುತ್ತೆ. ಸೋಷಲ್ ಮೀಡಿಯಾದಲ್ಲಿ ಬಹಳಷ್ಟು ಜನ ಅದನ್ನೇ ಪ್ರಶ್ನಿಸಿದ್ದಾರೆ . ಈಗ್ಯಾಕಪ್ಪಾ ಈ ಸೇಡು ಅಂತ ಕಿವಿ ಮಾತು ಹೇಳಿದ್ದಾರೆ. ಇಷ್ಟಕ್ಕೂ ಆಗಿದ್ದೇನು ಗೊತ್ತಾ? ಪ್ರಕಾಶ್ ಬೆಳವಾಡಿ ಹೇಳಿಕೊಂಡ ಪ್ರಕಾರ;

ಅಹಮದಾಬಾದ್ ನಲ್ಲಿರುವ ನನ್ನ ಗೆಳೆಯ ನೊಬ್ಬ ಫೋನ್ ಮಾಡಿದ್ದ. ಗುಜರಾತ್ ನರಮೇದಕ್ಕೆ ಸಂಘಿಗಳಿಗೆ ಈಗ ತಕ್ಕ ಪಾಠ ಆಗ್ತಿದೆ ಅಂತಂದ.‌ ಅದಕ್ಕೆ‌ ನಾನು, ಅದು ಹಾಗಲ್ಲ, ಪಶ್ವಿಮ‌ ಬಂಗಾಳದಲ್ಲಿ ಹಿಂದೂಗಳ ಸಂಖ್ಯೆ ಜಾಸ್ತಿ ಇದೆ. ತಿರುಗಿ‌ ಬಿದ್ರೆ ಆ ಕಥೆ ಬೇರೆನೆ ಇದೆ ಅಂತಂದೆ. ಅನ್ನೋದು ಪ್ರಕಾಶ್ ಬೆಳವಾಡಿ ಹೇಳಿಕೆ. ಇಲ್ಲೊಂದಷ್ಟು ಹೇಳಿಕೆಗಳನ್ನು ಬೇಡ ಅಂತಲೇ ಹಾಕಿಲ್ಲ.

ಒಂದ್ರೀತಿ ಅವೆಲ್ಲ ಪಕ್ಕಾ ಪ್ರಚೋದನಾಕಾರಿ ಹೇಳಿಕೆ.‌ ಅದನ್ನೇ ಪ್ರಶ್ನಿಸಿ‌ ನೆಟ್ಟಿಗರು ಉಗಿದು ಉಪ್ಪು ಹಾಕಿದ್ದಾರೆ. ಕಾನೂನು ಪ್ರಕಾರ ಅವರ ಮೇಲೆ ಪ್ರಚೋದನಾಕಾರಿ ಹೇಳಿಕೆ ಮೇರೆಗೆ ಕೇಸು ದಾಖಲಿಸಿ ಆರೆಸ್ಟ್ ಮಾಡಬೇಕಿದೆ ಅಂತಲೂ ನೆಟ್ಟಿಗರು ಆಗ್ರಹಿಸಿದ್ದಾರೆ.

ಅಂದಹಾಗೆ ಪ್ರಕಾಶ್ ಬೆಳವಾಡಿ ಇಂತಹ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಇಂತಹದೇ ವಿವಾದಾತ್ಮಕ ಹೇಳಿಕೆ ನೀಡಿ, ಉಗಿಸಿಕೊಂಡಿದ್ದರು.ಆ ಕಥೆ ಈಗಲೂ ಮುಂದುವರೆದಿದೆ…

Related Posts

error: Content is protected !!