ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪುತ್ರ ನಿಧನ; ನೃತ್ಯ ಕಲಾವಿದರಾಗಿ ಬದುಕು ಕಟ್ಟಿಕೊಂಡಿದ್ದ ರಾಮು ಕಣಗಾಲ್ ಜೀವ ಪಡೆದ ಕೊರೊನಾ

ಈ ಕೊರೊನಾ ಯಾರನ್ನೂ ಬಿಡುತ್ತಿಲ್ಲ. ಬದುಕನ್ನಷ್ಟೇ ಚೆಲ್ಲಾಪಿಲ್ಲಿಯಾಗಿಸಿದ್ದ ಕೊರೊನೊ ಹೆಮ್ಮಾರಿ, ಲೆಕ್ಕವಿಲ್ಲದ್ದಷ್ಟು ಜೀವಗಳನ್ನೇ ಬಲಿ ತೆಗೆದುಕೊಂಡಿದೆ.
ಇಲ್ಲಿ ದಿನ ಕಳೆದಂತೆ ಹಲವು ಸಿನಿಮಾರಂಗದ ಜನರೂ ಪ್ರಾಣ‌ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಕೋಟಿ ನಿರ್ಮಾಪಕ ರಾಮು ಜೀವ ಕಳೆದುಕೊಂಡಿದ್ದರು. ಈಗ ಕನ್ನಡ‌ ಚಿತ್ರರಂಗದ ಖ್ಯಾತ ನಿರ್ದೇಶಕ ಪುಟ್ಟಣ ಕಣಗಾಲ್ ಅವರ ಪುತ್ರ ರಾಮು ಕಣಗಾಲ್ ಕೊರೊನಾ ಮಾರಿಗೆ ಪ್ರಾಣ ಬಿಟ್ಟಿದ್ದಾರೆ.

ಹೌದು, ರಾಮು ಕಣಗಾಲ್
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಕೊನೆಯ ಕುಡಿ. ಪುಟ್ಟಣ್ಣ ಕಣಗಾಲ್ ಅವರ ಐದನೇ ಪುತ್ರ. ಪುಟ್ಟಣ್ಣ ಅವರಿಗೆ ಸರ್ವೋತ್ತಮ, ಭುವನೇಶ್ವರಿ, ರಾಜರಾಜೇಶ್ವರಿ,
ತ್ರಿವೇಣಿ, ರಾಮು ಮಕ್ಕಳು. ಈ ಪೈಕಿ ರಾಮು , ಭರತನಾಟ್ಯ ಪ್ರವೀಣರು ತಂದೆಯ (ಕಣಗಾಲ್ ನೃತ್ಯಾಲಯ) ಹೆಸರಲ್ಲಿ ಬೆಂಗಳೂರಿನ ಬನಶಂಕರಿಯಲ್ಲಿ ನೃತ್ಯಶಾಲೆ ಶುರುಮಾಡಿದ್ದ ರಾಮು ಅವರು ಸಾಕಷ್ಟು ವಿದ್ಯಾರ್ಥಿಗಳಿಗೆ ನೃತ್ಯ ಗುರುವಾಗಿದ್ದರು. ಅಷ್ಟೇ ಅಲ್ಲ, ತಂದೆಯಂತೆಯೇ ಅವರು ಸಾಂಸ್ಕೃತಿಕ ಸೇವೆಯಲ್ಲಿ ನಿರತರಾಗಿದ್ದರು.

ಕನ್ನಡ ಚಿತ್ರರಂಗಕ್ಕೆ ಅನೇಕ ಪ್ರತಿಭೆಗಳನ್ನು ಪರಿಚಯಿಸಿದ ಹಲವು‌ನಟ,ನಟಿಯರನ್ನು ಕನ್ನಡ ಸಿನಿಮಾ ಲೋಕಕ್ಕೆ ಕರೆತಂದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಮಕ್ಕಳು ಮಾತ್ರ ಸಿನಿಮಾ ರಂಗಕ್ಕೆ ಬರಲಿಲ್ಲ. ಈ ಪ್ರಶ್ನೆ‌ಗೆ ಇಂದಿಗೂ ಉತ್ತರ ‌ಸಿಕ್ಕಿಲ್ಲ.
ಚಿತ್ರರಂಗಕ್ಕೆ ಪುಟ್ಟಣ್ಣ ಕಣಗಾಲ್ ಮಕ್ಕಳು ಬರಲಿಲ್ಲ ಎಂಬ ಬಗ್ಗೆ ಪ್ರಶ್ನೆ ಎದ್ದ ಹಿನ್ನೆಲೆಯಲ್ಲಿ ಈ ಹಿಂದೆಯೇ ರಾಮು ಅವರು ಹೇಳಿಕೊಂಡಿದ್ದರು. ನನಗೆ ಚಿತ್ರರಂಗಕ್ಕೆ ಬರಬೇಕೆಂಬ ಆಸೆ ಇತ್ತು. ಆದರೆ, ತಂದೆಗೆ ತಾವು ಚೆನ್ನಾಗಿ ಓದಬೇಕು. ಆ ನಂತರವಷ್ಟೇ ಉಳಿದದ್ದು ಎಂದಿದ್ದರು. ಆದರೆ, ನಾನು 17 ವರ್ಷ ಹುಡುಗನಿದ್ದಾಗಲೇ ತಂದೆ ನಮ್ಮನ್ನು ಬಿಟ್ಟು ಹೋದರು ಎಂದಿದ್ದರು.
ಪುಟ್ಟಣ್ಷ ಕಣಗಾಲ್ ಅವರ ಕುಟುಂಬ ಮದರಾಸಿನಲ್ಲೇ ವಾಸವಾಗಿತ್ತು. ಪುಟ್ಟಣ್ಣ ಅವರು ನಿಧನವಾಗುವ ಮೂರು ತಿಂಗಳ ಹಿಂದಷ್ಟೇ, ಕುಟುಂಬ ಬೆಂಗಳೂರಿಗೆ ಬಂದಿತ್ತು. ಆದರೆ, ಚಿತ್ರರಂಗದವರ ಪರಿಚಯ ನಮಗಿರಲಿಲ್ಲ ಎಂದು ಹೇಳಿಕೊಂಡಿದ್ದ ರಾಮು, ಆ ಸಂದರ್ಭದಲ್ಲಿ ಯಾರೊಬ್ಬರೂ ಸಹಾಯ ಮಾಡಲಿಲ್ಲ. ನಮ್ಮ ತಂದೆ ಇದ್ದಿದ್ದರೆ ಸಿನಿಮಾ ಸಿನಿಮಾ ರಂಗಕ್ಕೆ ಬರುತ್ತಿದ್ದೆವೋ ಏನೋ ಎಂದು ಹಿಂದೆ ಪತ್ರಿಕೆಯೊಂದರ‌ ಸಂದರ್ಶನದಲ್ಲಿ ಹೇಳಿದ್ದರು ರಾಮು.


ಮದರಾಸಿನಲ್ಲಿ ಚಿಕ್ಕಂದಿನಲ್ಲೇ ನೃತ್ಯಾಭ್ಯಾಸ ಶುರುಮಾಡಿದ್ದ ರಾಮು, ಅದರಲ್ಲೇ ಬದುಕು ಕಟ್ಟಿಕೊಂಡಿದ್ದರು.
ಅದೇನೆ ಇರಲಿ, ಸಿನಿಮಾ ರಂಗದಲ್ಲಿ ಜನಪ್ರಿಯ ನಿರ್ದೇಶಕ ಎಂದೆನಿಸಿಕೊಂಡ ಪುಟ್ಟಣ್ಣ ಕಣಗಾಲ್ ಕುಟುಂಬ ಸಿನಿಮಾ ಲೋಕಕ್ಕೆ ಬಾರದೆ, ಬದುಕು ಕಟ್ಟಿಕೊಂಡು ತನ್ನ ಪಾಡಿಗಿತ್ತು. ನೃತ್ಯಶಾಲೆ ಮೂಲಕ ಹೆಸರು ಮಾಡಿದ್ದ ರಾಮು ಕಣಗಾಲ್ ಈಗ ಇಲ್ಲ. ಆದರೆ, ಅವರ ಅನೇಕ ನೃತ್ಯ ಕಾರ್ಯಕ್ರಮಗಳ ಮೂಲಕ ಜೀವಂತವಾಗಿದ್ದಾರೆ.
ಸಂತಾಪ: ನಟರಾದ ಶ್ರೀನಾಥ್,
ಶಿವರಾಮ್, ರಾಮಕೃಷ್ಣ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Related Posts

error: Content is protected !!