ರಾಯಲ್‌ ಫ್ಯಾಮಿಲಿಯ ರಾಯಲ್‌ ಹುಡುಗಿ ಜ್ಯೋತಿ- ಬಿಲ್ಲು, ಬಾಣ ಹಿಡಿದು ತೆಲುಗು ಕಿರುತೆರೆಗೆ ಕಾಲಿಡುತ್ತಿದ್ದಾರೆ ನಟಿ ಮೇಘಾಶ್ರೀ

ಕನ್ನಡದ ಬಹಳಷ್ಟು ನಟಿಯರು ಅವಕಾಶಗಳನ್ನು ಅರಸಿ ಪರಭಾಷೆಗೆ ಕಾಲಿಟಿರುವುದೇನು ಹೊಸದಲ್ಲ. ಹಾಗೆಯೇ ಅವಕಾಶಗಳನ್ನು ಹುಡುಕುತ್ತಾ ಟಾಲಿವುಡ್‌, ಕಾಲಿವುಡ್‌ಗೂ ಕಾಲಿಟ್ಟಿದ್ದ ಅಪ್ಪಟ ಮಲೆನಾಡಿನ ಹುಡುಗಿ ಮೇಘಾಶ್ರೀ ಈಗ ಅವೆರೆಡು ಭಾಷೆಯ ಕಿರುತೆರೆಯಲ್ಲೂ ಮಿಂಚಲು ರೆಡಿಯಾಗಿದ್ದಾರೆ. ಅದಕ್ಕಂತಲೇ ಬಿಲ್ಲು, ಬಾಣ ಹಿಡಿದು ಭರ್ಜರಿಯಾಗಿ ನಿಂತಿದ್ದಾರೆ. ಅವರ ಹಾಗೊಂದು ಲುಕ್‌ ಈಗ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದು ʼ ಜ್ಯೋತಿ ʼ ಹೆಸರಿನ ಬಹುಭಾಷೆ ಸೀರಿಯಲ್‌ ಸಮಾಚಾರ. ರಾಜ್‌ ಕಪೂರ್‌ ಇದರ ನಿರ್ದೇಶಕ. ಹೆಸರಾಂತ ನಟಿ ಖುಷ್ಬೂ ಇದರ ನಿರ್ಮಾಪಕರಂತೆ.

ತೆಲುಗು, ತಮಿಳು ಹಾಗೂ ಕನ್ನಡ ಸೇರಿದಂತೆ ಇದು ಐದು ಭಾಷೆಗಳಲ್ಲಿ ಬರುತ್ತಿದೆ ಅನ್ನೋದು ಸುದ್ದಿಯಿತ್ತು. ಆದರೆ ಅದು ಮುಂದೇನಾಯಿತೋ ಗೊತ್ತಿಲ್ಲ, ಸದ್ಯಕ್ಕೀಗ ಇದು ತೆಲುಗಿನಲ್ಲಿ ಮೊದಲು ನಿರ್ಮಾಣಗೊಂಡು ತೆರೆಗೆ ಬರುತ್ತಿದೆ. ಅಲ್ಲಿನ ಜೆಮಿನಿ ವಾಹಿನಿಯಲ್ಲಿ ಪ್ರಸಾರಕ್ಕೆ ಸಿದ್ಧತೆ ನಡೆಸಿದೆ. ಏಪ್ರಿಲ್‌ ೧೨ ರಿಂದ ಪ್ರಸಾರವಾಗಲಿದೆ ಅಂತ ಸುದ್ದಿಯೂ ಇದೆ. ʼಜ್ಯೋತಿʼ ಸೂಪರ್‌ ನ್ಯಾಚುರಲ್‌ ಕಥಾ ಹಂದರದ ಧಾರಾವಾಹಿ. ಇದರ ಪ್ರಧಾನ ಪಾತ್ರಧಾರಿ ಕನ್ನಡದ ನಟಿ ಮೇಘಾಶ್ರೀ. ಈಗಾಗಲೇ ಕನ್ನಡದಲ್ಲಿ ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಸಾಕಷ್ಟು ಹೆಸರು ಮಾಡಿದ ನಟಿ. ಹಾಗೆಯೇ ತೆಲುಗಿನಲ್ಲೂ ಈಗಾಗಲೇ ಮೂರು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಈಗಷ್ಟೇ ತಮಿಳಿನಲ್ಲೂ ಒಂದು ಚಿತ್ರದಲ್ಲಿ ಅಭಿನಯಿಸುವ ಅವಕಾಶ ಅವರಿಗೀಗ ಸಿಕ್ಕಿದೆಯಂತೆ. ಸದ್ಯ ಅದರ ಚಿತ್ರೀಕರಣದಲ್ಲೂ ಬ್ಯುಸಿ ಇದ್ದಾರಂತೆ. ಈ ನಡುವೆಯೇ ಈಗ ತೆಲುಗು ಹಾಗೂ ತಮಿಳು ಕಿರುತೆರೆಯಲ್ಲೂ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ.

ಸದ್ಯ ಅದರ ತೆಲುಗು ವರ್ಷನ್‌ ಪ್ರೋಮೋ ಹೊರ ಬಂದಿದೆ. ಅಲ್ಲಿ ನಟಿ ಮೇಘಾ ಶ್ರೀ ಅವರ ಲುಕ್‌ ಭರ್ಜರಿ ಆಗಿದೆ. ಒನಕೆ ಒಬವ್ವ ನಂತೆ ಅಲ್ಲಿ ಉಡುಗೆ ತೊಟ್ಟಿರುವ ಮೇಘಾಶ್ರೀ, ಜಿಂಕೆ ಭೇಟೆಗೆ ಬಿಲ್ಲು ಹೂಡುತ್ತಾರೆ. ಆದರೆ ಅದು ಬಂಗಾರದ ಮಾಯಾ ಜಿಂಕೆ ಅನ್ನೋದು ಗೊತ್ತಾಗಿ ಶಾಕ್‌ ಆಗುತ್ತಾರೆ. ಮುಂದೇನು ಅನ್ನೋದು ಧಾರಾವಾಹಿಯ ಕುತೂಹಲ. ಫಸ್ಟ್‌ ಟೈಮ್‌ ಇಂತಹದೊಂದು ವಿಭಿನ್ನ ಹಾಗೂ ವಿಶಿಷ್ಟ ಕಥೆಯ ಧಾರಾವಾಹಿಯ ಮೂಲಕ ತೆಲುಗು ಕಿರುತೆರೆ ವೀಕ್ಷಕರ ಮನೆ -ಮನ ಮುಟ್ಟಲು ಹೊರಟಿರುವ ನಟಿ ಮೇಘಾಶ್ರೀ, ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ.” ಕತ್ತಿ, ವರಸೆ ಬಗ್ಗೆ ತಿಳಿದುಕೊಂಡು, ತರಬೇತಿ ಪಡೆದುಕೊಂಡಿದ್ದೇನೆ, ಬಿಲ್ಲುಗಾರಿಕೆಯ ಬಗ್ಗೆ ನನಗೆ ಒಂದಿಷ್ಟು ಗೊತ್ತಿರಲಿಲ್ಲ. ನಾನು ಶ್ರಮ ಪಟ್ಟು ತರಬೇತಿಗಳನ್ನು ಮಾಡಿದ್ದೇನೆʼ ಎನ್ನುತ್ತಾರೆ ಮೇಘಾಶ್ರೀ.

Related Posts

error: Content is protected !!