ತಮಿಳುನಾಡು ಚುನಾವಣಾ ಪ್ರಚಾರದಲ್ಲಿ ಲಹರಿ ವೇಲು !

ರಾಜಕೀಯಕ್ಕೂ ಸಿನಿಮಾಕ್ಕೂ ಅತೀವ ನಂಟು. ಕನ್ನಡಕ್ಕಿಂತ ತಮಿಳುನಾಡಿನಲ್ಲಿ ಇದು ಇನ್ನಷ್ಟು ಜಾಸ್ತಿ ಅನ್ನೋದನ್ನು ವಿವರಿಸಿ ಹೇಳಬೇಕಿಲ್ಲ. ಅಲ್ಲೀಗ ಲಹರಿ ಸಂಸ್ಥೆಯ ಮಾಲೀಕರಾದ ಲಹರಿ ವೇಲು ಕೂಡ ಚುನಾವಣಾ ಪ್ರಚಾರದ ಅಬ್ಬರ ಆರಂಭಿಸಿದ್ದಾರೆ. ಹೌದು, ಲಹರಿ ವೇಲು ಅವರೀಗ ತಮಿಳುನಾಡು ಚುನಾವಣಾ ಪ್ರಚಾರದಲ್ಲಿದ್ದಾರೆ. ಮಧುರೈ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ವೇಲು ಅವರಿಗೆ ಉಸ್ತುವಾರಿಯ ಜವಾಬ್ದಾರಿ ನೀಡಿದೆ. ಅಲ್ಲಿನ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಅವರು ಪಣ ತೊಟ್ಟಿದ್ದಾರಂತೆ. ” ಚುನಾವಣೆ ಘೋಷಣೆಯಾದ ನಂತರದ ದಿನಗಳಲ್ಲಿ ಪಕ್ಷವು ನನಗೆ ಈ ಜವಾಬ್ದಾರಿ ನೀಡಿದೆ. ಪಕ್ಷದ ಉಸ್ತುವಾರಿ ಸಿ.ಟಿ. ರವಿ ಅವರು ನನ್ನನ್ನು ಗುರುತಿಸಿ ಈ ಕೆಲಸ ನೀಡಿದ್ದಾರೆ. ನಾನಂತೂ ಇದನ್ನು ತುಂಬಾ ಖುಷಿಯಿಂದಲೇ ವಹಿಸಿಕೊಂಡಿದ್ದೇನೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ. ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಬಂದಾಗ ಅವರ ಬದ್ಧತೆಕಂಡು ಖುಷಿ ಆಯಿತುʼ ಅಂತ ಲಹರಿ ಸಂಸ್ಥೆಯ ಮಾಲೀಕರಾದ ಲಹರಿ ವೇಲು ಸಿನಿ ಲಹರಿಗೆ ಪ್ರತಿಕ್ರಿಯಿಸಿದರು.

ದೊಡ್ಡ ಜನಪ್ರಿಯತೆಯ ನಡುವೆಯೂ ಲಹರಿ ಸಂಸ್ಥೆಯ ಮಾಲೀಕರಾದ ಲಹರಿ ವೇಲು ಅವರು ರಾಜಕೀಯದಿಂದ ತುಂಬಾನೆ ದೂರ ಇದ್ದವರು. ಆದರೆ ಈಗ ಅವರಿಗೂ ರಾಜಕಾರಣ ಬೇಕಾಗಿದೆ. ಅದಕ್ಕಂತಲೇ ಕಳೆದ ವಿಧಾನ ಸಭಾ ಚುನಾವಣೆ ಹೊತ್ತಿಗೆ ತಮ್ಮ ಮೂಲ ನೆಲೆ ಬೆಂಗಳೂರಿನ ಚಾಲರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಾರೆನ್ನುವ ಸುದ್ದಿ ಜೋರಾಗಿತ್ತು. ಕೊನೆಗದು ಏನಾಯ್ತೋ ಗೊತ್ತಿಲ್ಲ, ವೇಲು ಅವರಿಗೆ ಟಿಕೆಟ್‌ ಕೈ ತಪ್ಪಿತು. ಆದರೂ ಅವರ ರಾಜಕೀಯದಿಂದ ಹೊರ ಬರಲಿಲ್ಲ. ಟಿಕೆಟ್‌ ಸಿಗಲಿಲ್ಲ ಅಂತ ಬೇಸರ ಪಡದೆ, ಬಿಜೆಪಿಯ ಕಾರ್ತಕರ್ತರಾಗಿಯೇ ಉಳಿದುಕೊಂಡಿದ್ದರು. ಈಗ ಅದಕ್ಕೆ ಫಲ ಸಿಕ್ಕಿದೆ. ತಮಿಳುನಾಡು ಚುನಾವಣೆಯಲ್ಲಿ ಲಹರಿ ವೇಲು ಸಕ್ರಿಯವಾಗಿ ಪಾಲ್ಗೊಂಡಿದ್ದು, ಚುನಾವಣೆ ಮುಗಿದ ನಂತರವೇ ಬೆಂಗಳೂರಿಗೆ ವಾಪಾಸ್‌ ಆಗುವುದು ಅಂತಿದ್ದಾರೆ ಲಹರಿ ವೇಲು.

Related Posts

error: Content is protected !!