ಮಗ‌ ಆಸ್ಪತ್ರೆ ಯಲ್ಲಿದ್ದಾನೆ, ನಾನು ಆರ್ಥಿಕ‌ ಸಂಕಷ್ಟದಲ್ಲಿದ್ದೇನೆ, ಯಾರಾದರೂ ನೆರವು ನೀಡಿ- ನಟ, ನಿರ್ದೇಶಕ ವಿ. ಆರ್. ಭಾಸ್ಕರ್ ಮನವಿ

ನಟ ಡಾ. ವಿಷ್ಣುವರ್ಧನ್ ಅವರಿಗೆ ಬಹುಕಾಲ ಸಹಾಯಕರಾಗಿದ್ದ ನಟ, ಸಾಹಿತಿ ಹಾಗೂ ನಿರ್ದೇಶಕ ವಿ.ಆರ್. ಭಾಸ್ಜರ್ ಸಂಕಷ್ಟದಲ್ಲಿದ್ದಾರೆ. ಅವರ ಪುತ್ರ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದಾರೆ. ಆತನ ಚಿಕಿತ್ಸಾ ವೆಚ್ಚಕ್ಕೆ ಬೇಕಾದಷ್ಟು ಹಣ ಇಲ್ಲದೆ ಭಾಸ್ಕರ್ ಅವರು ಆರ್ಥಿಕ ಸಂಕಷ್ಟ ಕ್ಕೆ ಸಿಲುಕಿದ್ದು, ದಾನಿಗಳಿಂದ ಆರ್ಥಿಕ‌ ನೆರವು ಬಯಸಿದ್ದಾರೆ. ಈ ಕುರಿತು ಒಂದು ವಿಡಿಯೋಮಾಡಿ, ಸೋಷಲ್ ಮೀಡಿಯಾದಲ್ಲಿ ಹಂಚಿ ಕೊಂಡಿ ದ್ದಾರೆ. ಚಿತ್ರರಂಗದ  ಯಾರಾದರೂ  ಕೈಲಾದ ಸಹಾಯ ಮಾಡಿ‌ಅಂತ ಅಸಹಾ ಯಕತೆ ಯೊಂದಿಗೆ ಕೈ ಮುಗಿದು ಕೇಳಿಕೊಂಡಿದ್ದಾರೆ.

” ಮಗ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದು , ಆತನ ಚಿಕಿತ್ಸೆಗೆ ಹೆಚ್ಚಿನ ಹಣ ಬೇಕಿದೆ. ವಿಕ್ಟೋರಿಯಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಿಕಿತ್ಸೆಗೆ ತುಂಬಾ ಹಣ ಬೇಕಿದೆ.ಅಷ್ಟು ಹಣ ನನ್ನ ಬಳಿ ಇಲ್ಲ. ವಿಷ್ಣುವರ್ಧನ್ ಅವರ ಜತೆಯಲ್ಲಿದ್ದಾಗ ಒಂದಷ್ಟು ಹಣಕಾಸು ಮಾಡಿಕೊಂಡಿದ್ದೆ. ಆದರೆ ಇನ್ನೊಬ್ಬ ಮಗ ತೀರಿಹೋದ. ಆತನ ಚಿಕಿತ್ಸೆಗಾಗಿಯೇ ಆ ಹಣ ಖರ್ಚಾಗಿ ಹೋಯಿತು. ಈಗ ಉಳಿದ ಇನ್ನೊಬ್ಬ ಮಗನೂ ಕೂಡ ಅನಾರೋಗ್ಯ ದಲ್ಲಿದ್ದಾನೆ. ಯಾರಾದರೂ ದಾನಿಗಳು ಒಂದಷ್ಟು ಸಹಾಯ ಮಾಡಿದರೆ, ಅದು ಆತನ ಚಿಕಿತ್ಸೆಗೆ ಅನುಕೂಲವಾಗಲಿದೆ ಅಂತ ಭಾಸ್ಕರ್ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. 

ದುರಂತ ಅಂದ್ರೆ ಕೆಲವರನ್ನು ಬದುಕು ವಿನಾಕರಣ ಹೈರಾಣಾಗಿಸುತ್ತೆ. ಅಂತಹದೇ ಪರಿಸ್ಥಿಯಲ್ಲೀಗ ಭಾಸ್ಕರ್ ಇದ್ದಾರೆ. ಭಾಸ್ಕರ್ ಚಿತ್ರರಂಗಕ್ಕೆ ತುಂಬಾನೆ ಪರಿಚಿತ ಇದ್ದವರು. ನಟರಾಗಿ, ನಿರ್ದೇಶಕ ರಾಗಿ ಯೂ ಚಿರಪರಿಚಿತ. ಅದಕ್ಕಿಂತ ಮುಖ್ಯವಾಗಿ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಬಹುಕಾಲ ಸಹಾಯಕರಾಗಿದ್ದರು. ಹಾಗೆಯೇ ಅವರ ಕಾರು ಚಾಲಕರಾಗಿಯೂ ಕೆಲಸ ಮಾಡಿದ್ದರು. ಆ ದಿನಗಳಲ್ಲಿ ಅನೇಕ ನಟರೊಂದಿಗೆ ತುಂಬಾ ಒಳ್ಳೆಯ ಗೆಳೆತನ ಹೊಂದಿದ್ದರು. ವಿಷ್ಣುವರ್ಧನ್ ಅವರ ನಿಧನದ ನಂತರ ಏಕಾಂಗಿಯಂತಿರುವ ಭಾಸ್ಕರ್,  ಮಕ್ಕಳ ಅನಾರೋಗ್ಯ ದ ಕಾರಣ ನೊಂದು ಹೋಗಿದ್ದಾರೆ. ತೀವ್ರ ಆರ್ಥಿಕ‌ ಸಂಕಷ್ಟಕ್ಕೆ ಸಿಲುಕಿ, ಮಗನನ್ನು ಉಳಿಸಿಕೊಳ್ಳಲು ಪರದಾಡಬೇಕಿದೆ.

ಬಹುಕಾಲ ನಟ ವಿಷ್ಣುವರ್ಧನ್ ಅವರನ್ನುದೇವರಂತೆ ನಂಬಿಕೊಂ ಡಿದ್ದ‌ಭಾಸ್ಕರ್ ಗೆ, ವಿಷ್ಣುವರ್ಧನ್ ‌ಇಲ್ಲದ ದಿನಗಳು ತೀವ್ರ ಕಷ್ಟಕರ ವಾಗಿವೆ ಅಂತ ಅವರ ಕುಟುಂಬ ಹೇಳಿಕೊಂಡಿದೆ.  ವಿಷ್ಣುವರ್ಧನ್ ಅಭಿಮಾನಿಗಳು ಯಾರಾದರೂ‌ಮುಂದೆ ಬಂದು ಭಾಸ್ಕರ್ ನೆರವಿಗೆ ನಿಂತರೆ, ಭಾಸ್ಕರ್ ಪುತ್ರ ನನ್ನು ಉಳಿಸಿಕೊಳ್ಳಲಿದ್ದಾರೆ.ಆ ಕೆಲಸ ವಿಷ್ಣುವರ್ಧನ್ ಅಭಿಮಾನಿಗಳು ಹಾಗೂ‌ ಅಭಿಮಾನಿ‌ಸಂಘಗಳಿಂದ ಆದೀತೆ ಅಂತ‌ಭಾಸ್ಕರ್ ಕುಟುಂಬ‌ಕೂಡ ಎದುರು‌ನೋಡುತ್ತಿದೆ. ಸಂಪರ್ಕಕ್ಕೆ ಮೊಬೈಲ್ ಸಂಖ್ಯೆ 8495085291 ಕ್ಕೆ ಕರೆ ಮಾಡಬಹುದು.

..

Related Posts

error: Content is protected !!