ಬಿಗ್‌ಬಾಸ್‌ನಲ್ಲಿ ಸಂಬರಗಿ ಸಂಭ್ರಮ, ಅತೀಬುದ್ಧಿವಂತಿಕೆಯ ಆಟ ಬಲು ಜೋರು !

ಪ್ರಶಾಂತ್‌ ಸಂಬರಗಿ ರಾಜಕಾರಣಿನಾ ? ಗೊತ್ತಿಲ್ಲ. ಅವರು ಯಾವ ಆಂಗಲ್‌ ನಲ್ಲಿ ರಾಜಕಾರಣಿಯೋ. ಆದ್ರೆ, ಅವರು ರಾಜಕಾರಣಿ ಎನ್ನುವ ಕೆಟಗರಿಯಲ್ಲಿಯೇ ಕಲರ್ಸ್‌ ಕನ್ನಡ ” ಬಿಗ್‌ ಬಾಸ್‌ ಸೀಸನ್‌ 8ʼ ಕ್ಕೆ ಸೆಲೆಕ್ಟ್‌ ಮಾಡಿಕೊಂಡಿದೆ. ಅದು ಶುರುವಾಗಿ ಈಗಾಗಲೇ ಮೂರು ದಿನಗಳೂ ಕಳೆದು ಹೋಗಿವೆ. ಬಿಗ್‌ ಬಾಸ್‌ ಮನೆಯಲ್ಲೀಗ ಪ್ರಶಾಂತ್‌ ಸಂಬರಗಿ ಆಟ ಜೋರಾಗಿದೆ. ತಣ್ಣಗೆ ಸಂಬರಗಿ ಬಿಗ್‌ ಬಾಸ್‌ ಮನೆಯನ್ನೇ ಆವರಿಸಿಕೊಳ್ಳುತ್ತಿದ್ದಾರೆ. ತಾವೇ ಅತೀ ಬುದ್ಧಿವಂತರೂ ಎನ್ನುವ ಹಾಗೆ ಫೋಸು ನೀಡುತ್ತಿದ್ದಾರೆ. ಟಾಸ್ಕ್‌ ಗಳಲ್ಲಿ ಗೆದ್ದ ಪರಿಯನ್ನು ಸಂಭ್ರಮಿಸುವ ರೀತಿಯಂತೂ ಹೇಳತೀರದು. ಯುದ್ಧ ಗೆದ್ದ ಸಂಭ್ರಮ ಅವರ ಮುಖದಲ್ಲಿರುತ್ತದೆ.

ಮೊದಲ ದಿನವೇ ಬಿಗ್‌ ಬಾಸ್‌ ಮನೆಯಲ್ಲಿ ಸಂಬರಗಿ, ನಟಿ ದಿವ್ಯಾ ಉರುಡುಗ ಅವರೊಂದಿಗೆ ನಡೆದುಕೊಂಡ ರೀತಿಯೇ ವಿಚಿತ್ರವಾಗಿತ್ತು. ಟಾಸ್ಕ್‌ ವೊಂದರಲ್ಲಿ ಗೆದ್ದ ವೇಳೆ, ದಿವ್ಯಾ ಅವರನ್ನು ಎತ್ತಿಕೊಂಡು ಬಿಟ್ಟರು. ಅದೆಷ್ಟು ಸಲುಗೆಯೋ ಎನ್ನುವಂತೆ ಇದು ಕಂಡಿದ್ದು ಹೌದು. ಹಾಗೆಯೇ ಚರ್ಚೆಗಳ ವೇಳೆ, ಟಾಸ್ಕ ಸಂದರ್ಭದಲ್ಲಿ ಎಲ್ಲರನ್ನೂ ಅವರು ಡಾಮಿನೇಟ್‌ ಮಾಡುವ ಪರಿಯಂತೂ ಬಿಗ್‌ ಬಾಸ್‌ ಮನೆಯಲ್ಲಿ ತಣ್ಣಗೆ ಆಕ್ರೋಶದ ಭುಗಿಲೇಳುವಂತೆ ಮಾಡಿದೆ. ಇಷ್ಟರಲ್ಲಿಯೇ ಅದು ಸ್ಪೋಟಗೊಳ್ಳುವುದು ಗ್ಯಾರಂಟಿ ಆಗಿದೆ. ಮಂಗಳವಾರದ ಎಪಿಸೋಡ್‌ ನಲ್ಲಿ ಪ್ರಶಾಂತ್‌ ಸಂಬರಗಿ, ಬೆಂಗಳೂರಿನಲ್ಲಿನ ನಾಯಿ ಸಾಕುವವರ ಮೇಲೆ ತಮ್ಮ ಸಿಟ್ಟು ಹೊರ ಹಾಕಿದರು.

ಬೆಂಗಳೂರಿನಲ್ಲಿ ನಾಯಿ ಮಾಲೀಕರು ಫುಟ್‌ಬಾತ್‌ನಲ್ಲಿ ಅದರ ಮಲ ಮಾಡಿಸುತ್ತಾರೆ. ಇದರಿಂದ ಜನರು ಫುಟ್‌ಪಾತ್‌ನಲ್ಲಿ ಓಡಾಡಾಲು ಕಷ್ಟವಾಗುತ್ತದೆ. ನಾಯಿಯ ಮಲದಲ್ಲಿ ಸಿಕ್ಕಾಪಟ್ಟೆ ಬ್ಯಾಕ್ಟೀರಿಯ ಇರುತ್ತದೆ. ಹೀಗಾಗಿಯೇ ನಾನು ಇದರ ವಿರುದ್ಧ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೆ ಅಂತ ಹೀಗೆ ಹೇಳಿಕೊಳ್ಳುವಾಗ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ, ಒಂದಷ್ಟು ವಿವರ ಹೊರ ಹಾಕಿದರು. “ನಾನು ಹೇಳುವ ವಿಚಾರ ನಾಯಿ ಪ್ರಿಯರಿಗೆ ಬೇಸರ ತರಿಸಬಹುದು. ನಾನು ಒಂದು ವರ್ಷ ಸಿಂಗಾಪುರದಲ್ಲಿದ್ದೆ. ಅಲ್ಲಿ ನಾಯಿಗಳ ಮಲವನ್ನು ಸ್ವಚ್ಛವಾಗಿ ತೆಗೆಯುತ್ತಾರೆ. ಅಧ್ಯಯನವನ್ನು ಮಾಡಿದ್ದೇನೆ, ವಿಶ್ಲೇಷಣೆ ಮಾಡಿದ್ದೇನೆ. ನಾಯಿಗಳು ಮಾಡುವ ಮಲವನ್ನು ಅವರೇ ಎತ್ತಬೇಕು, ದಂಡ ಎತ್ತಬೇಕು ಅಂತ ಅರ್ಜಿ ಸಲ್ಲಿಸಿದ್ದೆ. ನಾನು ಹೊರಗಡೆ ನೋಡುವಾಗ ಯಾರಿಗಾದರೂ ಹೇಳಿದಾಗ ಕೂಡ ನಮ್ಮ ನಾಯಿ ಅಲ್ಲ ಅದು, ಬೇರೆಯವರ ನಾಯಿ ಅಂತಾರೆ. 5% ಜನರು ಮಾತ್ರ ಅದನ್ನು ಸ್ವಚ್ಛ ಮಾಡುತ್ತಾರೆ. ನಾಯಿ ಮಲದಿಂದ ಸಿಕ್ಕಾಪಟ್ಟೆ ರೋಗಗಳು ಬರುತ್ತವೆ” ಎಂದು ಬಿಗ್‌ ಬಾಸ್‌ ಮನೆಯಲ್ಲಿ ಹೇಳಿಕೊಂಡರು.

Related Posts

error: Content is protected !!