ಮಾರ್ಚ್‌ 19 ಕ್ಕೆ ತೆರೆಗೆ ಬರುತ್ತಿದೆ ” ಒಂದು ಗಂಟೆಯ ಕಥೆʼ

ನಿರ್ದೇಶಕ ರಾಘವ್‌ ದ್ವಾರ್ಕಿ ಮತ್ತೆ ಸುದ್ದಿಯಲ್ಲಿದ್ದಾರೆ. “ಮತ್ತೆ ಮುಂಗಾರುʼ ಚಿತ್ರದ ನಂತರ ಈಗವರು ಒಂದು ಗಂಟೆಯ ಕಥೆಯೊಂದನ್ನು ತೆರೆ ಮೇಲೆ ತೋರಿಸಲು ರೆಡಿಯಾಗಿದ್ದಾರೆ. ಅಂದ ಹಾಗೆ, ಒಂದು ಗಂಟೆಯ ಕಥೆ ಅನ್ನೋದು ರಾಘವ್‌ ದ್ವಾರ್ಕಿ ನಿರ್ದೇಶಸಿದ ಚಿತ್ರ. ದೇಶದಲ್ಲಿ ಇತ್ತೀಚೆಗೆ ಅತೀ ಹೆಚ್ಚು ಸುದ್ದಿಯಾದ ಅತ್ಯಾಚಾರದ ಪ್ರಕರಣಗಳ ಸುತ್ತ ಈ ಚಿತ್ರದ ಕತೆ ಹೆಣೆಯಲಾಗಿದೆಯಂತೆ. ರಿಯಲ್‌ ವೆಲ್ತ್‌ ವೆಂಚರ್‌ ಪ್ರೋಡಕ್ಷನ್‌ ಹೌಸ್‌ ಮೂಲಕ ರಾಘವ್‌ ದ್ವಾರ್ಕಿ, ಕಶ್ಯಪ್‌ ದಾಕೋಜು, ಕೆ.ಎಸ್.‌ ದುಶ್ಯಂತ್‌, ಶ್ವೇತಾ ದಾಕೋಜು ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.
ಹೊಸ ಪ್ರತಿಭೆಗಳಾದ ಅಜಯ್‌ ರಾಜ್‌ ನಾಯಕರಾಗಿ ಅಭಿನಯಿಸಿದ್ದು, ಶನಾಯ ಕಟ್ಟೆ, ಸ್ವಾತಿ ಶರ್ಮಾ, ಪಾಪ ಪಾಂಡು ಚಿದಾನಂದ್‌, ಸಿಲ್ಲಿ ಲಲ್ಲಿ ಆನಂದ್‌, ಪ್ರಕಾಶ್‌ ತಮಿಳು ನಾಡು, ಯಶ್ವಂತ್‌ ಸರ್ದೇಶ್‌ ಪಾಂಡೆ, ಪ್ರಶಾಂತ್ ಸಿದ್ದಿ ಮತ್ತಿತರರು ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ದೇಶದಲ್ಲಿ ಇತ್ತೀಚೆಗೆ ಅತೀ ಹೆಚ್ಚು ಸುದ್ದಿಯಾದ ಅತ್ಯಾಚಾರದ ಪ್ರಕರಣಗಳನ್ನು ಆಧರಿಸಿ ಈ ಸಿನಿಮಾ ಮಾಡಿದ್ದಾರಂತೆ ನಿರ್ದೇಶಕ ರಾಘವ್‌ ದ್ವಾರ್ಕಿ. ” ಇದು ಮಹಿಳಾ ಪ್ರದಾನ ಚಿತ್ರವಾದರೂ, ಮಹಿಳೆಯರ ಮೇಲಿನ ಶೋಷಣೆಯೇ ಈ ಚಿತ್ರದ ಪ್ರಮುಖ ಕಥಾ ವಸ್ತು. ಅತ್ಯಾಚಾರದ ಘಟನೆಗಳ ಸುತ್ತ ಮುತ್ತ ಈ ಕತೆ ಹೆಣೆಯಲಾಗಿದೆ. ಕರ್ನಾಟಕದಲ್ಲೇ ನಡೆದ ಒಂದು ಘಟನೆಯೇ ಇದಕ್ಕೆ ಸ್ಪೂರ್ತಿ. ಜಗತ್ತಿನಲ್ಲಿ ಮಹಿಳೆಯರು ಹಾಗೂ ಮಕ್ಕಳಿಗಾಗುವ ಶೋಷಣೆ ಸುತ್ತ ಈ ಕಥೆ ಸಾಗುತ್ತದೆʼ ಎನ್ನುತ್ತಾರೆ ನಿರ್ದೇಶಕ ರಾಘವ್‌ ದ್ವಾರ್ಕಿ.

ಹಾಗಂತ ಇದು ಪೂರ್ಣ ಪ್ರಮಾಣದಲ್ಲಿ ಗಂಭೀರವಾದ ಸಿನಿಮಾ ಅಲ್ಲ. ಹಾಸ್ಯವೂ ಸಿನಿಮಾದ ಪ್ರಮುಖ ಅಂಶ. ಮಾಮೂಲಿಗಿಂತ ವಿಭಿನ್ನವಾದ ಕಥಾಹಂದರವಿರಲಿದೆ ಎನ್ನುತ್ತೆ ಚಿತ್ರತಂಡ.” ಸಿನಿಮಾ ಫುಲ್‌ ಕಾಮಿಡಿ ಪ್ಯಾಕೇಜ್‌ನಿಂದ ಕೂಡಿದೆ. ಶೇ.೯೦ ರಷ್ಟು ಮನರಂಜನೆ ಹೊಂದಿದೆ. ಹೀರೋ, ಹೀರೋಯಿನ್‌ ಜೊತೆ ಟ್ರಾವೆಲ್‌ ಮಾಡುವುದು, ಪ್ರಪೋಸ್‌ ಮಾಡುವುದು ನನ್ನ ಸಿನಿಮಾ ಜರ್ನಿ ಅಲ್ಲ. ಕಥೆ ಯೂನಿವರ್ಸಲ್‌ ಆಗಿರಬೇಕು, ಅದು ಜನರಿಗೆ ಮುಟ್ಟಬೇಕು ಎನ್ನುವುದು ನಮ್ಮ ಉದ್ದೇಶʼ ಎನ್ನುತ್ತಾರೆ ನಿರ್ದೇಶಕರು. ಚಿತ್ರಕ್ಕೆ ಬೆಂಗಳೂರು, ಮೈಸೂರು, ಮೇಲುಕೋಟೆ, ಶಿವನ ಸಮುದ್ರ, ಮಡಿಕೇರಿ ಮುಂತಾದ ಕಡೆಗಳಲ್ಲಿ ಶೂಟಿಂಗ್‌ ನಡೆದಿದೆ. ಮಾ.19ರಂದು ಚಿತ್ರ ಬಿಡುಗಡೆ ಆಗುತ್ತಿದೆ.

Related Posts

error: Content is protected !!