ತಾಳ್ಮೆಯಲಿ ಶ್ರೀರಾಮ, ಮಾತ್ಕೊಟ್ರೆ ದಶರಥ ರಾಮ, ಪ್ರೀತಿಯಲಿ ಜಾನಕಿ ರಾಮ- ನಟ ದರ್ಶನ್ ಅವರನ್ನು ವಿಶೇಷವಾಗಿ ಗುಣಗಾನ ಮಾಡಿದ ಆಶಾ ಭಟ್

ಇವ್ರು ತಾಳ್ಮೆಯಲಿ ಶ್ರೀರಾಮ, ಮಾತ್ಕೊಟ್ರೆ ದಶರಥ ರಾಮ, ಪ್ರೀಯಿಯಲಿ ಜಾನಕಿರಾಮ, ತಿರುಗಿ ಬಿದ್ರೆ….

– ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಸಾವಿರಾರು ಅಭಿಮಾನಿಗಳ ಮುಂದೆ ಈ ರೀತಿ ತಮ್ಮದೇ ಮಾತುಗಳ ಮೂಲಕ ಗುಣಗಾನಮಾಡಿದ್ದು ಬೇರಾರರು ಅಲ್ಲ, ಒನ್ ಡ್ ಒನ್ಲಿ ರಾಬರ್ಟ್ ನಾಯಕಿ, ಭದ್ರಾವತಿಯ ಚೆಲುವೆ , ಮಾಡೆಲ್ ಆಶಾಭಟ್.

ಫೆ‌ ೨೬ ರಂದು ಹೈದ್ರಾಬಾದ್ ನಲ್ಲಿ ನಡೆದ ರಾಬರ್ಟ್ ಚಿತ್ರದ ಪ್ರೀ ರಿಲೀಸ್ ಸಮಾರಂಭದಲ್ಲಿ ಮಾತನಾಡಿದ ಆಶಾಭಟ್, ದರ್ಶನ್ ಅವರಂತಹ ಸ್ಟಾರ್ ನಟನ ಕಾಂಬಿನೇಷನ್ ಮೂಲಕ ಮೊಟ್ಟ ಮೊದಲು ಬೆಳ್ಳಿತೆರೆಗೆ ಎಂಟ್ರಿಯಾಗುತ್ತಿರುವುದಕ್ಕೆ ಅಗಾದ ಆನಂದ ವ್ಯಕ್ತಪಡಿಸಿದರು.

‘ ಫಸ್ಟ್ ಟೈಮ್ ಸಿನಿಮಾ ಸಂಬಂಧಿತ ಇಷ್ಟು ದೊಡ್ಡ ವೇದಿಕೆ ನಿಂತು ಮಾತನಾಡುತ್ತಿದ್ದೇನೆ. ಐ ಡೋಂಟ್ ಪರ್ಗೆಟ್ ಇಟ್, ನನ್ನ ಜೀವನದಲ್ಲೇ ಮರೆಯಲಾರದ ಕ್ಷಣ ಇದು. ದೇವರ ದಯೆ, ಹಾಗೆಯೇ ಚಿತ್ರ ತಂಡದ ಆಶೀರ್ವಾದ ದ ಫಲವಾಗಿ ಇದು ಒದಗಿ ಬಂತು. ಕನ್ನಡ ನನ್ನ ಉಸಿರು. ಕನ್ನಡದ ಮೂಲಕವೇ ಇವತ್ತು ಟಾಲಿವುಡ್ ಗೂ ಎಂಟ್ರಿಯಾಗುವ ಅವಕಾ ಬಂದಿದೆ. ನಿಮ್ಮೆಲ್ಲರ ಆಶೀರ್ವಾದ ‌ನನಗೆ ಬೇಕಿದೆ. ಯಾವುದೇ ಕಲಾವಿದರಿಗೆ ಪ್ರೇಕ್ಷಕರೇ ದೇವರು ‘ ಎನ್ನುತ್ತಾ ತೆಲುಗು ಚಿತ್ರ ಪ್ರೇಮಿಗಳ ಹೃದಯಕ್ಕೆ ಲಗ್ಗೆ ಹಾಕಿದರು ಸೂಪರ್ ಮಾಡೆಲ್ ಆಶಾ ಭಟ್.

ಚಿತ್ರದ ನಾಯಕ ದರ್ಶನ್ ಅವರ ಬಗ್ಗೆ ವಿಶೇಷವಾಗಿ ಮಾತನಾಡಿದ ಆಶಾ ಭಟ್, ಇವ್ರು ತಾಳ್ಮೆಯಲಿ ಶ್ರೀರಾಮ, ಮಾತ್ಕೊಟ್ರೆ ದಶರಥ ರಾಮ, ಪ್ರೀಯಿಯಲಿ ಜಾನಕಿರಾಮ, ತಿರುಗಿ ಬಿದ್ರೆ……ಎನ್ನುವ ಮಾತನ್ನು ಅರ್ಧದಲ್ಲೇ ನಿಲ್ಲಿಸಿ ಅದನ್ನು ಪ್ರೇಕ್ಷಕರ ಊಹೆಗೆ ಬಿಟ್ಟ ಆಶಾ ಭಟ್, ಅವರ ಜತೆಗೆ ಸ್ಕೀನ್ ಹಂಚಿಕೊಂಡಿರುವುದು ನನ್ನ ಅದೃಷ್ಟ ಎಂದರು.

ಹೈದ್ರಾಬಾದ್ ಪ್ರೀ ರಿಲೀಸ್ ಈವೆಂಟ್ ನಂತರ ದೂರವಾಣಿ ಮೂಲಕ ‘ಸಿನಿ‌ಲಹರಿ’ ಜತೆಗೆ ಮಾತನಾಡಿದ ಅವರು, ಫಸ್ಟ್ ಟೈಮ್ ಸಿನಿಮಾ ಪ್ರಚಾರದ ಅಷ್ಟು ದೊಡ್ಡ ವೇದಿಕೆ ಹಂಚಿಕೊಂಡಿದ್ದನ್ನು ಮರೆಯಲಾರೆ. ಇದು ನನ್ನ ಪಾಲಿಗೆ ಸಿಕ್ಕ ಅತೀ ದೊಡ್ಡ ಅವಕಾಶ‌. ದೇವರ ದಯೆ, ಹಾಗೆಯೇ ಚಿತ್ರ ತಂಡದ ಆಶೀರ್ವಾದ ದ ಫಲವಾಗಿ ಇದು ಒದಗಿ ಬಂತು. ಅತ್ಯಂತ ಖುಷಿ ಯಾಗುತ್ತಿದೆ ಎಂದರು.

Related Posts

error: Content is protected !!