ಸಿನಿಮಾವನ್ನು ಸಿನಿಮಾವನ್ನಾಗಿ ಮಾತ್ರ ನೋಡಿ ಅಂತ ಹೇಳುವ ಧೈರ್ಯ ಯಾವ ಸ್ಟಾರ್ ಗೂ ಇಲ್ವಾ?

ಚಿತ್ರರಂಗ ಹಾಳಾಗುತ್ತಿದೆ ಅಂತ ಹಿರಿಯ ನಟ ಜಗ್ಗೇಶ್ ಇನ್ನಾವುದೋ ಘಟನೆಯಲ್ಲಿ ಮಂಗಳವಾರ ಆಕ್ರೋಶ ಹೊರ ಹಾಕಿದ ಬೆನ್ನಲೇ ಒಂದು ಸಮುದಾಯದ ಆಕ್ರೋಶಕ್ಕೆ ‘ ಪೊಗರು’ ಸಿನಿಮಾ ತಂಡ ಮಂಡೆ ಉರಿ ಬಿದ್ದಿದೆ. ವಿಚಿತ್ರ ಅಂದ್ರೆ ತೆರೆ ಮೇಲೆ ‘ ಪೊಗರು ‘ ತೋರಿಸಿದವರೇ ನಿಜ ಜೀವನದಲ್ಲಿ ಒಂದು ಸಮುದಾಯದ ಕೂಗಿಗೆ ವಿಲ ವಿಲ ಒದ್ದಾಡಿದ್ದಾರೆ. ಇವರದ್ದೆಲ್ಲ ಅರಚಾಟ ತೆರೆ ಮೇಲೆ ಮಾತ್ರವೇ ಅಂತ ಜನ ಮಾತನಾಡುತ್ತಿದ್ದಾರೆ. ಒಂಥರ ವಿಚಿತ್ರವಾಗಿದೆ ಈ ವಿದ್ಯಮಾನ.

ಆ ಕತೆ ಇರಲಿ, ಈಗ ಪೊಗರು ವಿವಾದದಲ್ಲಿ ರಾಜಿ ಪಂಚಾಯಿತಿಗಳು ನಡೆದರೂ, ವಿರೋಧದ ಕೂಗು ಜಾಸ್ತಿ ಆಗಿದೆ. ಪರಿಣಾಮ ವಿವಾದಕ್ಕೆ ಕಾರಣವಾದ ದೃಶ್ಯಕ್ಕೆ ಕತ್ತರಿ ಬೀಳುವುದು ಗ್ಯಾರಂಟಿ ಆಗಿದೆ. ಹಾಗಂತ ಚಿತ್ರ ತಂಡ ಒಪ್ಪಿಕೊಂಡಿದೆ ಎನ್ನುವ ಮಾಹಿತಿ ಇದೆ.ಅಲ್ಲಿಗೆ ನಿರ್ದೇಶಕನೊಬ್ಬನ ಅಭಿವ್ಯಕ್ತಿ ಸ್ವಾತಂತ್ರ್ಯ ನೆಗೆದು ಬಿದ್ದಿದೆ. ಸಂಭಾವನೆ ವಿಚಾರದಲ್ಲಿ ನಿರ್ದೇಶಕರನ್ನೇ ಮಣ್ಣು‌ ಮುಕ್ಕಿಸುವ ಸ್ಟಾರ್ ಗಳು ಕೂಡ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಸುಮ್ಮನಿದ್ದಾರೆ. ಮುಂದೆ ಇನ್ನಾವ ಸಿನಿಮಾವೂ ಇಂತಹದೇ ವಿವಾದಕ್ಕೆ ಸಿಲುಕಿ ಕತ್ತರಿ ಪ್ರಯೋಗಕ್ಕೆ ಸಿಲುಕುತ್ತೋ ಗೊತ್ತಿಲ್ಲ.

ಯಾಕಂದ್ರೆ ಸಿನಿಮಾ ನಿರ್ದೇಶಕನೊಬ್ಬನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆ ಆಗುತ್ತಿರುವುದು ಇದೇ ಮೊದಲಲ್ಲ. ಸಾಹಿತಿಗಳು, ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನೇ ದಮನ ಮಾಡಿದ ಹಾಗೆ ಸಿನಿಮಾ ನಿರ್ದೇಶಕನ ಅಭಿವ್ಯಕ್ತಿ ಸ್ವತಂತ್ರ ಆಗಾಗ ಹರಣ ಆಗುತ್ತಲೇ ಬಂದಿದೆ. ಇಷ್ಟಾಗಿಯೂ ಚಿತ್ರರಂಗವಾಗಲಿ, ಸ್ಟಾರ್ ಗಳಾಗಲಿ ಒಂದಾಗಿ ಧ್ವನಿ ಎತ್ತಿದ್ದು ತೀರಾ ಅಪರೂಪ. ಅದರ ಪರಿಣಾಮವೀಗ ‘ಪೊಗರು’ ಮೇಲೂ ಬಿದ್ದಿದೆ.

ಹೋಮ ನೆಡೆಸಲು ಕುಳಿತ ವ್ಯಕ್ತಿಯ ಹೆಗಲ ಮೇಲೆ ಚಿತ್ರದ ನಾಯಕ ಕಾಲಿಟ್ಟಿದ್ದ ಎನ್ನುವುದೇ ‘ ಪೊಗರು’ ಸುತ್ತ ವಿವಾದ ಹುಟ್ಟಲು ಕಾರಣ. ಅಲ್ಲಿ ಹೋಮಕ್ಕೆ ಕುಳಿತವನು ಇಂತಹದೇ ಸಮುದಾಯಕ್ಕೆ ಸೇರಿದವನು ಅಂತ ಎಲ್ಲೂ ಹೇಳಿಲ್ಲ. ಹಾಗೆಯೇ ಒಂದು ಜಾತಿ ಸೂಚಕವಾಗಿಯೂ ಅದನ್ನು ತೋರಿಸಿಲ್ಲ. ಅಷ್ಟಾಗಿಯೂ ಆತ ತಮ್ಮವನೇ, ಹಾಗಾಗಿ ತಮ್ಮೀಡಿ ಸಮುದಾಯಕ್ಕೆ ಅವಮಾನ ಆಗಿದೆ ಅಂತ ಒಂದು ಸಮುದಾಯ ಧ್ವನಿ ಎತ್ತಿದೆ.ಮಂಗಳವಾರ ದಿನವೀಡಿ ರಾಜಿ ಸರ್ಕಸ್ ನಡೆದರೂ, ಅವರದೇ ಕೂಗು ಹೆಚ್ಚಾಗಿ, ಅನಿವಾರ್ಯ ವಾಗಿ ಚಿತ್ರದೊಳಗಿನ ದೃಶ್ಯಕ್ಕೆ ಕತ್ತರಿ ಬೀಳುತ್ತಿದೆ.

ಪ್ರಶ್ನೆ ಇರುವುದು ಸಿನಿಮಾವನ್ನು ಸಿನಿಮಾವನ್ನಾಗಿ ಮಾತ್ರ ನೋಡಿ ಅಂತ ಚಿತ್ರೋದ್ಯಮ ಯಾಕೆ ಅವರಿಗೆ ಹೇಳಿಲ್ಲ ಅಂತ. ಸದ್ಯಕ್ಕೀಗ ‘ಪೊಗರು’ . ಮುಂದ್ಯಾವುದು ಚಿತ್ರವೋ ಗೊತ್ತಿಲ್ಲ. ಅದರಲಿ, ಸಮಾಜ ಒಂದು ಸಿನಿಮಾದ ದೃಶ್ಯವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾ ಅಂತ. ಹಾಗೊಂದು ವೇಳೆ ಅದು ಹೌದು ಎನ್ನುವುದಾ ಗಿದ್ದರೆ ಒಂದು ಸಮುದಾಯ ತಲೆಮಾರು ಗಳಿಂದ ಶೋಷಿಸುತ್ತಲೇ ಬಂದ ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಎಷ್ಟೇಲ್ಲ ಚಿತ್ರ ಬಂದರೂ, ಅದನ್ಯಾಕೆ ಅವರು ಅಷ್ಟು ಗಂಭೀರವಾಗಿ ತೆಗೆದುಕೊಂಡಿಲ್ಲ? ಅಸ್ಫಶ್ಯತೆ ಆಚರಣೆ ತಪ್ಪು ಅಂತ ತೋರಿಸಿದರು, ಅದನ್ನಾಕೆ ನಿಲ್ಲಿಸಿಲ್ಲ? ತಾವು ಬಲಿಷ್ಟರು, ತಾವು ಮಾಡಿದ್ದೇ ಸರಿ ಎನ್ನುವ ಅಹಂ ನಿಂದಲೇ ತಾನೇ ಒಂದು ಸಮುದಾಯ ಪೊಗರು ಮೇಲೆ ಎಗರಿ ಬಿದ್ದಿದ್ದು? ಮುಂದೆ ಇದೇ ಸಮುದಾಯ ತಾವು ಹೇಳುವುದನ್ನೆ ಸಿನಿಮಾ ಮಾಡಿ ಅಂತ ಚಿತ್ರರಂಗಕ್ಕೆ ಸೂಚನೆ ಕೊಟ್ಟರು ಅಚ್ಚರಿ ಇಲ್ಲ. ಹಾಗೆಯೇ ಅದು ಜಾರಿಗೆ ಬಂದರೂ ಅಚ್ವರಿ ಪಡಬೇಕಿಲ್ಲ. ಕಾರಣ, ಅವರೇ ಅಲ್ಲವೇ ಚಿತ್ರೋದ್ಯಮವನ್ನು ನಿಯಂತ್ರಿಸುವವರು?

Related Posts

error: Content is protected !!