ನಂದಲ್ಲಪ್ಪಾ ವಾಯ್ಸು ಅಂದ್ರು ಜಗ್ಗೇಶ್-‌ ಹಾಗಾದ್ರೆ ಜಗ್ಗೇಶ್‌ ಇನ್ನೊಬ್ಬ ಇದ್ದಾನಾ ಅಂತ ಪ್ರಶ್ನಿಸಿದ್ರು ದಚ್ಚು ಫ್ಯಾನ್ಸ್‌

ದರ್ಶನ್‌ ಕುರಿತು ಜಗ್ಗೇಶ್‌ ಮಾತನಾಡಿದ್ದರೆನ್ನಲಾದ ಆಡಿಯೋ ಸೋರಿಕೆ ಭಾರೀ ವಿವಾದ ಸೃಷ್ಟಿಸಿದೆ. ಸೋಮವಾರ ಮೈಸೂರಿನಲ್ಲಿ “ತೋತಾಪುರಿʼ ಚಿತ್ರೀಕರಣದಲ್ಲಿದ್ದಾಗ ದರ್ಶನ್‌ ಅಭಿಮಾನಿಗಳು ನಟ ಜಗ್ಗೇಶ್‌ ಅವರಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗದುಕೊಂಡ ಘಟನೆ ನಡೆದಿದೆ.ಜಗ್ಗೇಶ್‌ ಅವರಿಗೆ ಮುತ್ತಿಗೆ ಹಾಕಿದ್ದ ದರ್ಶನ್‌ ಅಭಿಮಾನಿಗಳು, ದರ್ಶನ್‌ ಅವರ ಬಗ್ಗೆ ಅದ್ಹೆಂಗೆ ಮಾತನಾಡಿದ್ದೀರಿ ನೀವು, ಈಗಲೇ ನೀವು ಕ್ಷಮೆ ಕೇಳಬೇಕು ಅಂತ ಒತ್ತಾಯಿಸಿದ್ದಲ್ಲದೆ, ಜಗ್ಗೇಶ್‌ ಅವರಿಗೆ ಧಿಕ್ಕಾರ ಕೂಗಿದರು. ಜಗ್ಗೇಶ್‌ ಅವರನ್ನು ಸುತ್ತುವರೆದುಕೊಂಡಿದ್ದ ದರ್ಶನ್‌ ಅಭಿಮಾನಿಗಳ ಮಾತುಗಳ ಅಬ್ಬರಕ್ಕೆ ಜಗ್ಗೇಶ್‌ ಕಕ್ಕಬಿಕ್ಕಿಯಾಗಿದ್ದರು. ಅದು ಹಾಗಲ್ಲ, ಹೀಗೆ ಅಂತ ಸ್ಪಷ್ಟನೆ ನೀಡಲು ಯತ್ನಿಸಿದರೂ, ನೀವು ಏನು ಹೇಳೋ ಹಾಗಿಲ್ಲ, ಕ್ಷಮೆ ಕೋರಲೇಬೇಕು ಅಂತ ಪಟ್ಟು ಹಿಡಿದರು.

ಒಂದ್ರೀತಿ ತೀರಾ ಇಕ್ಕಟ್ಟಿಗೆ ಸಿಲುಕಿದ ಜಗ್ಗೇಶ್‌ ಅವರಿಗೆ ಕ್ಞಮೆ ಕೇಳದೆ ಬೇರೆ ದಾರಿಯೇ ಸಿಗಲಿಲ್ಲ. ಅದು ನಂದಲ್ಲಪ್ಪಾ ವಾಯ್ಸು… ಇದಕ್ಕೂ ನಂಗೂ ಸಂಬಂಧ ಇಲ್ಲ. ಯಾರೋ ವಿಡಿಯೋ ಎಡಿಟರ್‌ ಹಾಗೆ ಮಾಡಿದ್ದಾನೆ. ಇಂಡಸ್ಟ್ರಿ ಹಾಳಾಗಿ ಹೋಯ್ತು. ಇಬ್ಬರ ನಡುವೆ ತಂದಿಕ್ಕಿ ಬಿಡುವ ಅಂತ ಇದೆಲ್ಲ ನಡೆದಿದೆ. ಇದರಲ್ಲಿ ರಾಜಕಾರಣ ನಡೆದಿದೆʼ ಅಂತ ಸ್ಪಷ್ಟನೆ ನೀಡಲು ಯತ್ನಿಸಿದಾಗ ದರ್ಶನ್‌ ಅಭಿಮಾನಿಗಳು ಕೂಗುತ್ತಲೇ ಇದ್ದರು.ದರ್ಶನ್‌ ಅಭಿಮಾನಿಗಳನ್ನೆಲಾದ ಆ ವ್ಯಕ್ತಿಗಳು ಮಾತ್ರ ಸಮಾಧಾನ ಆಗಲಿಲ್ಲ. ಇಲ್ಲ, ಅದು ನಿಮ್ದೆ ವಾಯ್ಸು…. ಹೆಂಗೇ ಹೇಳದ್ರಿ ಆ ರೀತಿ… ಅಮ್ಮನ್‌ ಅಂತೀರಾ..ಅಂತ ರೇಗಿದರು. ಆಯ್ತು ಬಿಡಪ್ಪಾ… ಅದು ನಂದೇ ವಾಯ್ಸು… ತಪ್ಪಾಯ್ತು ಅಂತ ಹೇಳಿದರು. ಆಗ ದರ್ಶನ್‌ ಅಭಿಮಾನಿಗಳೆನ್ನೆಲಾದ ಆ ಸುಮ್ಮನಾದರು. ಹೇಗೋ ತಪ್ಪಿಸಿಕೊಂಡ್ರೆ ಸಾಕು ಎನ್ನುವ ಹಾಗೆ ಜಗ್ಗೇಶ್‌ ಅಲ್ಲಿಂದ ಕಾಲ್ಕಿತ್ತರು.

Related Posts

error: Content is protected !!