ಇಳಯರಾಜಾ ಸ್ಟುಡಿಯೋ ಕಂಡು ಸೂಪರ್‌ ಸ್ಟಾರ್‌ ದಿಲ್‌ ಖುಷ್‌ !

ಭಾರತದ ಜನಪ್ರಿಯ ಸಂಗೀತ ಸಂಯೋಜಕ ಇಳಯರಾಜಾ ಅವರು ದಶಕಗಳ ಕಾಲ ಪ್ರಸಾದ್ ಸ್ಟುಡಿಯೋ ಜೊತೆ ಒಡನಾಟ ಹೊಂದಿದ್ದರು. ಅದು ತಮಗೆ ಅದೃಷ್ಟದ ಸ್ಟುಡಿಯೋ ಎಂದೇ ಅವರು ಭಾವಿಸಿದ್ದರು. ಇತ್ತೀಚೆಗೆ ಪ್ರಸಾದ್ ಸ್ಟುಡಿಯೋದ ಮಾಲೀಕತ್ವ ಬದಲಾಗಿ, ಅಲ್ಲಿ ಇಳಯರಾಜಾ ಅವರಿಗೆ ಕಾನೂನಿನ ತೊಡಕು ಎದುರಾಗಿತ್ತು. ಇದರಿಂದ ಚೆನ್ನೈನ ಕೋಡಂಬಾಕಂನಲ್ಲಿ ಇಳಯರಾಜಾ ತಮ್ಮದೇ ಸ್ವಂತ ಸುಸಜ್ಜಿತ ಸ್ಟುಡಿಯೋ ರೂಪಿಸಿದ್ದಾರೆ.

ಸೂಪರ್‌ಸ್ಟಾರ್ ರಜನೀಕಾಂತ್‌ ಅವರು ಮೊನ್ನೆ ಇಳಯರಾಜಾ ಸ್ಟುಡಿಯೋಗೆ ಭೇಟಿ ಮಾಡಿ ಶುಭ ಹಾರೈಸಿದ್ದಾರೆ. ‘ದಳಪತಿ’, ‘ವೀರಾ’ ಸೇರಿದಂತೆ ರಜನೀಕಾಂತ್‌ರ ಕೆಲವು ಚಿತ್ರಗಳಿಗೆ ಇಳಯರಾಜಾ ಸಂಗೀತ ಸಂಯೋಜನೆಯಿದೆ.

ಹೊಸ ಸ್ಟುಡಿಯೋದಲ್ಲಿ ಕೆಲಸಮಯ ಕಾಲ ಕಳೆದ ರಜನೀಕಾಂತ್‌ ತಮ್ಮ ಹೊಸ ಚಿತ್ರದ ಬಗ್ಗೆ ಚರ್ಚಿಸಿದ್ದಾರೆ. 70ರ ದಶಕದಿಂದಲೂ ಇಳಯರಾಜ ಅವರು ಪ್ರಸಾದ್ ಸ್ಟುಡಿಯೋದಲ್ಲಿ ಸಂಗೀತ ಸಂಯೋಜಿಸುತ್ತಿದ್ದರು. ಆಸ್ತಿ ವಾಜ್ಯದಿಂದಾಗಿ ಅವರು ಹೊರಬರಬೇಕಾಯ್ತು. ಅಲ್ಲಿನ ತಮ್ಮ ಸಂಗೀತ ಪರಿಕರಣಗಳಿಗೆ ಹಾನಿ ಮಾಡಿದ್ದಾರೆ ಎಂದು ಇಳಯರಾಜಾ ದೂರು ದಾಖಲಿಸಿದ್ದಾರೆ.

Related Posts

error: Content is protected !!