ಬಾಲಿವುಡ್ ನಟ ಸಂದೀಪ್ ನಹರ್‌ ಆತ್ಮಹತ್ಯೆ

ಅಕ್ಷಯ್ ಕುಮಾರ್ ನಟನೆಯ ‘ಕೇಸರಿ’, ‘ಧೋನಿ’ ಬಯೋಪಿಕ್‌ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ನಟ ಸಂದೀಪ್ ನಹರ್ ನಿನ್ನೆ ಮುಂಬೈನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ‘ಕೆಹ್ನೆ ಕೋ ಹಮ್‌ಸಫರ್ ಹೈ’ ಸೇರಿದಂತೆ ಕೆಲವು ಹಿಂದಿ ಸರಣಿಗಳ ನಟನಾಗಿಯೂ ಅವರು ಚಿರಪರಿಚಿತರು. ಆತ್ಮಹತ್ಯೆಗೂ ಮುನ್ನ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಅವರು ಸೂಸೈಡ್ ನೋಟ್ ಬರೆದಿದ್ದು, ತಮ್ಮ ನಿರ್ಧಾರಕ್ಕೆ ಪತ್ನಿ ಮತ್ತು ಅತ್ತೆಯ ಕಿರುಕುಳ ಕಾರಣ ಎಂದಿದ್ದಾರೆ.

ಸಂಗೀಪ್ ನಹರ್ ಎರಡು ವರ್ಷಗಳ ಹಿಂದೆ ಕಂಚನ್ ಅವರನ್ನು ವರಿಸಿದ್ದರು. ಇವರ ದಾಂಪತ್ಯದಲ್ಲಿ ವಿರಸ ತಲೆದೋರಿದ್ದು, ದಂಪತಿ ಮಧ್ಯೆ ಮನಸ್ತಾಪವಿತ್ತು ಎನ್ನಲಾಗಿದೆ. “ಆತ್ಮಹತ್ಯೆ ನಿರ್ಧಾರದ ಬಗ್ಗೆ ನನಗೆ ಖೇದವಿದೆ. ಇಂಥದ್ದೊಂದು ಕೆಟ್ಟ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಾನು ದಾಂಪತ್ಯ ಬದುಕು ಸರಿಪಡಿಸಿಕೊಳ್ಳಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಕೊನೆಗೂ ನನಗೆ ಒಳಿತಾಗಲಿಲ್ಲ. ಜೀವನದಲ್ಲಿ ನಾನು ನರಕವನ್ನೇ ನೋಡಿದ್ದೇನೆ. ಹಾಗಾಗಿ ಸಂತೋಷದಿಂದ ಆತ್ಮಹತ್ಯೆ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ” ಎಂದು ಸೂಯಿಸೈಡ್‌ ನೋಟ್‌ ಅಲ್ಲಿ ಬರೆದುಕೊಂಡಿದ್ದಾರೆ ಸಂದೀಪ್‌.

ವೈಯಕ್ತಿ ಕಾರಣಗಳಲ್ಲದೆ ಬಾಲಿವುಡ್‌ನಲ್ಲಿ ರಾಜಕೀಯದ ಬಗ್ಗೆಯೂ ಅವರು ನೋಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ನಟನಾಗಿ ಅಲ್ಲಿ ತಾವು ಹೇಗೆ ಕಿರುಕುಳ ಅನುಭವಿಸಬೇಕಾಯ್ತು ಎನ್ನುವ ವಿವರಣೆ ಅಲ್ಲಿದೆ. “ಚಿಕ್ಕ ನಟರಿಗೆ ಬಾಲಿವುಡ್‌ನಲ್ಲಿ ತುಂಬಾ ಕಷ್ಟವಿದೆ. ಕೊನೆಯ ಹಂತದಲ್ಲಿ ನಮ್ಮ ಅವಕಾಶಗಳನ್ನು ಬೇರೆಯವರು ಕಸಿದುಬಿಡುತ್ತಾರೆ. ಇದು ಕಲಾವಿದರನ್ನು ಹತಾಶೆಗೆ ದೂಡುತ್ತದೆ” ಎಂದು ಬರೆದಿದ್ದಾರೆ ಸಂದೀಪ್‌.

Related Posts

error: Content is protected !!