ಏ ತುಕಾಲಿ ನೀನ್‌ ಮಾಸ್‌ ಆದ್ರೆ, ನಾನು ಆ ಮಾಸ್‌ಗೆ… ಹೀಗಂತ ದರ್ಶನ್‌ ಟಾಂಗ್‌ ಕೊಟ್ಟಿದ್ದು ಯಾರಿಗೆ? ವೈರಲ್‌ ಆಯ್ತು ರಾಬರ್ಟ್‌‌ ಅಫಿಶಿಯಲ್ ಟ್ರೇಲರ್

 

“ಏ ತುಕಾಲಿ ನೀನ್‌ ಮಾಸ್‌ ಆದ್ರೆ, ನಾನು ಆ ಮಾಸ್‌ಗೆ…
– ಇದು ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಅವರ ಖದರ್‌ ಡೈಲಾಗ್.‌ ಇಂಥದ್ದೊಂದು ಸಖತ್‌ ಡೈಲಾಗ್‌ ಇರೋದು. “ರಾಬರ್ಟ್‌” ಟ್ರೇಲರ್‌ನಲ್ಲಿ. ಹೌದು, ಫೆಬ್ರವರಿ 16ರಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಹುಟ್ಟುಹಬ್ಬ. ಅವರ ಬರ್ತ್‌ಡೇಗೆ “ರಾಬರ್ಟ್‌” ಚಿತ್ರತಂಡ ಅದ್ಧೂರಿಯಾಗಿರುವ ಒಂದು ಟ್ರೇಲರ್‌ ಬಿಡುಗಡೆ ಮಾಡಿದೆ. ನಿಜಕ್ಕೂ ಅದೊಂದು ಅದ್ಭುತವಾಗಿ ರೂಪುಗೊಂಡಿರುವ ಟ್ರೇಲರ್.‌ ಆ ಟ್ರೇಲರ್‌ ನೋಡಿದ ಪ್ರತಿಯೊಬ್ಬ ದರ್ಶನ್‌ ಅಭಿಮಾನಿಗಳು ಖುಷ್.‌

ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಟ್ರೇಲರ್‌ನಲ್ಲಿ ಭರ್ಜರಿ ಮಾಸ್‌ ಡೈಲಾಗ್‌ಗಳಿವೆ. ಅದರಲ್ಲೂ, ಮೇಕಿಂಗ್‌ ಬಗ್ಗೆ ಹೇಳುವಂತೆಯೇ ಇಲ್ಲ. ಟ್ರೇಲರ್‌ ನೋಡಿದವರಿಗೆ “ರಾಬರ್ಟ್‌” ದರ್ಶನ ಮಾಡಲೇಬೇಕು ಎಂಬಷ್ಟರ ಮಟ್ಟಿಗೆ ನಿರ್ದೇಶಕ ತರುಣ್‌ ಸುಧೀರ್‌ ಅವರು ಟ್ರೇಲರ್‌ ಕಟ್‌ ಮಾಡಿಸಿದ್ದಾರೆ. ಆ ಟ್ರೇಲರ್‌ ನೋಡಿದವರಿಗೆ ಸಿನಿಮಾದ ಕ್ವಾಲಿಟಿ ಮತ್ತು ಅದ್ಧೂರಿತನ ಗೊತ್ತಾಗುತ್ತೆ. ದರ್ಶನ್ ಅವರ ಹೊಸ ಲುಕ್ ಇಲ್ಲಿ ಸ್ಪೆಷಲ್ ಎನಿಸುತ್ತೆ. ಸಾಕಷ್ಟು ಪವರ್‌ ಕೂಡ ಇದೆ. ಇನ್ನು, ಇಡೀ ಟ್ರೇಲರ್‌ನಲ್ಲಿ ಅಬ್ಬರದ ಡೈಲಾಗ್‌ಗಳೇ ತುಂಬಿವೆ.


“ಏ ತುಕಾಲಿ ನೀನ್‌ ಮಾಸ್‌ ಆದ್ರೆ, ನಾನು ಆ ಮಾಸ್‌ಗೆ..” ಎಂಬ ಡೈಲಾಗ್‌ ಕೇಳಿದವರಿಗೆ ದರ್ಶನ್‌ ಅವರು ಯಾರಿಗೆ ಈ ಡೈಲಾಗ್‌ ಮೂಲಕ ಟಾಂಗ್‌ ಕೊಟ್ಟಿದ್ದಾರೆ ಎಂಬ ಪ್ರಶ್ನೆಗಳೂ ಗಿರಕಿ ಹೊಡೆಯುತ್ತವೆ. ಅಷ್ಟೇ ಅಲ್ಲ, ಅವರ ಇನ್ನೊಂದು ಡೈಲಾಗ್‌ ಕೂಡ ಅಂಥದ್ದೊಂದು ಪ್ರಶ್ನೆಗೂ ಕಾರಣವಾಗುತ್ತೆ. “ಒಬ್ಬರ ಲೈಫಲ್ಲಿ ನಾವ್‌ ಹೀರೋ ಆಗಬೇಕೆಂದರೆ, ಇನ್ನೊಬ್ಬರ ಲೈಫಲ್ಲಿ ನಾವ್‌ ವಿಲನ್‌ ಆಗಲೇಬೇಕು…” ಎಂಬ ಡೈಲಾಗ್‌ ಕೇಳಿದವರಿಗೆ ಇಲ್ಲಿ ದರ್ಶನ್‌ ಯಾರ ಲೈಫ್‌ಗೆ ವಿಲನ್‌ ಆಗಿದ್ದಾರೆ? ಅವರು ಯಾರ ಕುರಿತಾಗಿ ಈ ಡೈಲಾಗ್‌ ಹೇಳಿದ್ದಾರೆ ಅನ್ನೋ ಪ್ರಶ್ನೆ ಕೂಡ ಸಹಜವಾಗಿಯೇ ಮೂಡುತ್ತೆ. ಮತ್ತೊಂದು ಡೈಲಾಗ್‌ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲೂ ಒಂದು ಟಾಂಗ್‌ ಇದೆ. “ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು. ರಾವಣ ಮುಂದೆ ಗೆಲ್ಲೋದು ಗೊತ್ತು…” ಈ ಕೌಂಟ್‌ ಡೌನ್‌ ಸ್ಟಾರ್ಟ್ಸ್ಸ್‌ʼ ಎಂದು ಬರುವ ಡೈಲಾಗ್‌ ಕೂಡ ಸಖತ್‌ ಮಾಸ್‌ ಆಗಿದೆ.


ಅದೆಲ್ಲಾ ಏನೇ ಇದ್ದರೂ, “ರಾಬರ್ಟ್‌” ಚಿತ್ರ ನೋಡಿದಾಗಲೇ, ದರ್ಶನ್‌ ಅವರ ಈ ಡೈಲಾಗ್‌ ಅಲ್ಲಿರುವ ವಿಲನ್‌ಗಾಗಿಯೇ ಹೇಳಿದ್ದು ಅಂತ ಗೊತ್ತಾಗುತ್ತೆ. ಒಂದಂತೂ ನಿಜ, “ರಾಬರ್ಟ್‌” ಚಿತ್ರ ನೋಡೋಕೆ ಅವರ ಅಭಿಮಾನಿಗಳು ತುದಿಗಾಲ ಮೇಲೆ ನಿಂತಿದ್ದಾರೆ. ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ಭಾಷೆಯಲ್ಲೂ “ರಾಬರ್ಟ್‌” ಚಿತ್ರ ತೆರೆಗೆ ಬರುತ್ತಿದೆ.
ಟ್ರೇಲರ್‌ನಲ್ಲಿ ಸಾಕಷ್ಟು ವಿಶೇಷತೆಗಳಿವೆ. ದೊಡ್ಡ ತಾರಾಬಳಗವೇ ಇದೆ. ಜಗಪತಿ ಬಾಬು, ದೇವರಾಜ್‌ ಸೇರಿದಂತೆ ದೊಡ್ಡ ಕಲಾವಿದರ ದಂಡೇ ತುಂಬಿದೆ. ಇನ್ನು, ಬಾಲ ಶ್ರೀರಾಮನನ್ನು ತನ್ನ ಹೆಗಲ ಮೇಲೆ ಹೊತ್ತ ಆಂಜನೇಯ ಪಾತ್ರದಲ್ಲಿ ದರ್ಶನ್‌ ಇಲ್ಲಿ ಕಾಣಿಸಿಕೊಂಡಿದ್ದಾರೆ.

ಆ ಪಾತ್ರ ಯಾಕೆ ಅನ್ನೋದನ್ನೂ ಸಿನಿಮಾದಲ್ಲೇ ನೋಡಬೇಕು. ಒಟ್ನಲ್ಲಿ, ನಿರ್ದೇಶಕ ತರುಣ್‌ ಸುಧೀರ್‌ ಅವರು, ಕುತೂಹಲ ಕೆರಳಿಸುವಂತಹ ಸಿನಿಮಾ ಮಾಡಿದ್ದಾರೆ ಎಂಬುದಂತೂ ಸತ್ಯ. ಟ್ರೇಲರ್‌ನಲ್ಲೇ ಅಂಥದ್ದೊಂದು ಥ್ರಿಲ್‌ ಕಟ್ಟಿಕೊಟ್ಟಿರುವ ನಿರ್ದೇಶಕರು ಭರವಸೆ ಮೂಡಿಸಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಅವರು ಅದ್ಧೂರಿಯಾಗಿಯೇ ತಯಾರಿಸಿದ್ದಾರೆ. ಆಶಾಭಟ್‌ ದರ್ಶನ್‌ಗೆ ಜೋಡಿಯಾಗಿದ್ದಾರೆ. ಅಂದಹಾಗೆ, ಟ್ರೇಲರ್‌ ಬಂದು ಕೇವಲ 42 ನಿಮಿಷಕ್ಕೆ ಹತ್ತು ಲಕ್ಷ ಜನ ವೀಕ್ಷಿಸಿ, ಮೆಚ್ಚುಗೆ ಸೂಚಿಸಿದ್ದು ವಿಶೇಷ.

 

Related Posts

error: Content is protected !!