ನಟ ಚೇತನ್‌ , ಆ 100 ಕೋಟಿ ರೂ. ಹಿಂದೆ ಬಿದ್ದಿದಾದರೂ ಯಾಕೆ? ಕುತೂಹಲಕಾರಿ ಆಗಿದೆ ಹಂಡ್ರೆಡ್‌ ಕ್ರೋರ್ಸ್ ಕತೆ !

ನಟ ಚೇತನ್‌ ಅಹಿಂಸಾ ಬದಲಾಗಿದ್ದಾರೆ. ಸಾಮಾಜಿಕ ಹೋರಾಟಗಳ ಜತೆಗೆಯೇ ಈಗವರು ನಟನಾಗಿಯೂ ಬ್ಯುಸಿ ಆಗುತ್ತಿದ್ದಾರೆ. ಹಾಗೆಯೇ ವಿಶೇಷ ಕಥಾಹಂದರದ ಚಿತ್ರಗಳಿಗೂ ಬಣ್ಣ ಹಚ್ಚುತ್ತಿದ್ದಾರೆ. ಅಂತಹದೇ ಒಂದು ವಿಭಿನ್ನ ಕಥಾ ಹಂದರದ ” 100 ಕ್ರೋರ್ಸ್‌ ʼ ಹೆಸರಿನ ಚಿತ್ರವೀಗ ಫಸ್ಟ್‌ ಲುಕ್‌ ಲಾಂಚ್‌ ಮೂಲಕ ಸೌಂಡ್‌ ಮಾಡಿದೆ. ಡಿಫೆರೆಂಟ್‌ ಟೈಟಲ್‌ ಹೊಂದಿರುವ ʼ100 ಕ್ರೋರ್ಸ್‌ʼ ಚಿತ್ರ ಜನವರಿಯಲ್ಲೇ ಸುದ್ದಿ ಆಗಿತ್ತು. ಈಗ ಹೈದ್ರಾಬಾದ್‌, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಚಿತ್ರ ತಂಡವು ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಲಾಂಚ್‌ ಮಾಡಿದೆ.


ಹರೀಶ್‌ ಶಂಕರ್‌ ನಿರ್ದೇಶನದ ಈ ಚಿತ್ರದಲ್ಲಿ ಚೇತನ್‌ ಅವರದ್ದು ಪೊಲೀಸ್‌ ಅಧಿಕಾರಿ ಪಾತ್ರ. ಹಾಗೆಯೇ ರಗಡ್‌ ಲುಕ್.‌ ಅದೇ ಈಗ ಫಸ್ಟ್‌ ಲುಕ್‌ ಪೋಸ್ಟರ್‌ ನಲ್ಲಿ ಅನಾವರಣಗೊಂಡಿದೆ. ʼಆ ದಿನಗಳುʼ, ʼಮೈನಾʼ ಸೇರಿದಂತೆ ಈಗಾಗಲೇ ಹಲವು ಚಿತ್ರಗಳಲ್ಲಿ ಕಾಣಸಿಕೊಂಡಿರುವ ನಟ ಚೇತನ್‌, ಇದುವರೆಗೂ ಪೊಲೀಸ್‌ ಗೆಟಪ್‌ ನಲ್ಲಿ ಕಾಣಿಸಿಕೊಂಡಿರಲಿಲ್ಲ. ಫಸ್ಟ್‌ ಟೈಮ್‌ ಈಗ ಪೊಲೀಸ್‌ ಅಧಿಕಾರಿಯಾಗಿಯೂ ತೆರೆ ಮೇಲೆ ಬರುತ್ತಿದ್ದಾರೆ. ಕನ್ನಡದ ಜತೆಗೆ ಈ ಚಿತ್ರ ತೆಲುಗಿನಲ್ಲೂ ನಿರ್ಮಾಣವಾಗಿದೆ. ಎರಡು ಕಡೆ ಚೇತನ್‌ ಅವರೇ ಹೀರೋ ಎನ್ನುವುದು ಈ ಚಿತ್ರದ ಮತ್ತೊಂದು ವಿಶೇಷ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಹಣದ ಹಿಂದಿನ ಕತೆ. ನೂರು ಕೋಟಿಯ ಹಿಂದೆ ಹೋಗುವ ಪೊಲೀಸ್‌ ಆಧಿಕಾರಿಯ ಕಲರ್‌ ಫುಲ್‌ ಕತೆ ಎನ್ನುವುದು ಚಿತ್ರ ತಂಡ ಮಾತು.

ಎಸ್​ಎಸ್​ ಸ್ಟುಡಿಯೋಸ್ ಮತ್ತು ವಿಷನ್​ ಸಿನಿಮಾಸ್​ ಬ್ಯಾನರ್​ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ನಿರ್ದೇಶನಕ ಸಿಂಪಲ್‌ ಸುನಿ ಬಿಡುಗಡೆ ಮಾಡಿದರು. ಟಾಲಿವುಡ್‌ ನಲ್ಲಿ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಸಾಯಿ ಕಾರ್ತಿಕ್ ಈ ಚಿತ್ರಕ್ಕೆ ಸಂಗೀತ ನೀಡುವುದರ ಜತೆಗೆ ನಿರ್ಮಾಪಕರಾಗಿಯೂ ಬಂಡವಾಳ ಹೂಡಿದ್ದಾರೆ. ವಿರಾಟ್‌ ಚಕ್ರವರ್ತಿ ಈ ಚಿತ್ರದ ನಿರ್ದೇಶಕ. ಅವರ ಪ್ರಕಾರ ಇದೊಂದು ಪಕ್ಕಾ ಆಕ್ಷನ್‌ ಕಮ್‌ ಲವ್‌ ಆಧರಿಸಿದ ಸಿನಿಮಾ. ಚೇತನ್‌ ಅವರ ಪಾತ್ರವೇ ತುಂಬಾ ಡಿಫೆರೆಂಟ್‌ ಅಂತೆ.

ಈ ಪಾತ್ರದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡ ನಟ ಚೇತನ್‌, ದುಡ್ಡಿಗೋಸ್ಕರ ಏನು ಬೇಕಾದ್ರೂ ಮಾಡುವ ಪಾತ್ರ ನನ್ನದು. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಏಕಕಾಲದಲ್ಲಿ ಎರಡೂ ಅವತರಣಿಕೆಯ ಶೂಟಿಂಗ್​ ಮಾಡಿದ್ದೇವೆ. ಕನ್ನಡದ ಜತೆಗೆ ತೆಲುಗು ಕಲಾವಿದರೂ ಈ ಸಿನಿಮಾದಲ್ಲಿದ್ದಾರೆ. ಒಂದೊಳ್ಳೆ ಹೊಸ ಅನುಭವ. ಅಷ್ಟೇ ಸಾಹಸ ದೃಶ್ಯಗಳೂ ಸಿನಿಮಾದ ಹೈಲೈಟ್ ಎಂದರು.

ಚಿತ್ರದಲ್ಲಿ ಎರಡೇ ಹಾಡುಗಳಿವೆಯಂತೆ. ಕರ್ನಾಟಕ ಸೇರಿ ಹೈದರಾಬಾದ್​ನಲ್ಲಿ ಚಿತ್ರದ ಶೂಟಿಂಗ್​ ನಡೆದಿದೆ. ಚೇತನ್ ಮತ್ತು ʼಹ್ಯಾಪಿಡೇಸ್ʼ ಸಿನಿಮಾ ಖ್ಯಾತಿಯ ಟೈಸನ್ ರಾಹುಲ್ ಮುಖ್ಯಭೂಮಿಕೆಯಲ್ಲಿದ್ದರೆ, ಸಾಕ್ಷಿ ಚೌಧರಿ, ಎಮಿ ಎಲಿ ಮತ್ತು ಐಶ್ವರ್ಯಾ ರಾಜ್​ ಈ ಚಿತ್ರದ ನಾಯಕಿಯರು. ಉಳಿದಂತೆ ಇಂತುರಿ ವಾಸು, ಶರತ್ ಲೋಹಿತಾಶ್ವ, ಶೇಕಿಂಗ್ ಶೇಷು, ಭದ್ರಂ, ಅನ್ನಪೂರ್ಣಮ್ಮ, ಸಮೀರ್ ಪೋಷಕ ಪಾತ್ರದಲ್ಲಿದ್ದಾರೆ. ನಾಗಂ ತಿರುಪತಿ ರೆಡ್ಡಿ ಈ ಚಿತ್ರಕ್ಕೆ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಶ್ರೀಕಾಂತ್ ದೀಪಾಲ್ ಸಹ ನಿರ್ಮಾಪಕರಾಗಿದ್ದಾರೆ. ಏಪ್ರಿಲ್‌ ತಿಂಗಳಿನಲ್ಲಿ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Related Posts

error: Content is protected !!