ಒಂದೂ ಚಿತ್ರ ತೆರೆ ಕಂಡಿಲ್ಲ, ಆದರೂ ಈ ನಟಿಗೆ ಕೈ ತುಂಬಾ ಆಫರ್ !‌ ‌

ಈಗಷ್ಟೇ ಚಂದನವನಕ್ಕೆ ಪ್ರವೇಶ ಪಡೆದ ನಟಿ ಇವರು.“ ಪದವಿ ಪೂರ್ವʼ ಚಿತ್ರಕ್ಕೆ ನಿರ್ದೇಶಕ ಯೋಗರಾಜ್‌ ಭಟ್‌ ಶೋಧಿಸಿ ತಂದ ಚೆಲುವೆ. ಆದ ಚಿತ್ರ ಇನ್ನು ಚಿತ್ರೀಕರಣದಲ್ಲಿರುವಾಗಲೇ ಶಿವರಾಜ್‌ ಕುಮಾರ್‌ ಅಭಿನಯದ “ಶಿವಪ್ಪʼ ಚಿತ್ರದಲ್ಲೂ ಅಭಿನಯಿಸುವ ಅವಕಾಶ ಸಿಕ್ಕಿದೆ. ಅಲ್ಲಿಂದೀಗ “ ಬಹದ್ದೂರ್‌ ಗಂಡುʼ ಹೆಸರಿನ ಮತ್ತೊಂದು ಚಿತ್ರಕ್ಕೂ ನಾಯಕಿ ಆಗಿದ್ದಾರೆ. ಅಂದ ಹಾಗೆ, ಆ ನಟಿ ಬೇರಾರು ಅಲ್ಲ ಬೆಂಗಳೂರು ಬೆಡಗಿ ಯಶ್ ಶಿವಕುಮಾರ್.‌

ಚಿತ್ರೋದ್ಯಮ ಈಗ ಹಿಂದಿನಂತಿಲ್ಲ. ಹೊಸಬರಿಗೆ ಇಲ್ಲಿ ಅವಕಾಶ ಸಿಗುವುದು ಅಷ್ಟು ಸುಲಭ ಇಲ್ಲ. ನಟಿಯರ ವಿಚಾರದಲ್ಲಂತೂ ಇದು ಸಂಕಷ್ಟದ ಕಾಲ. ಸೌಂದರ್ಯದ ಜತೆಗೆ ಪ್ರತಿಭೆ ಇದ್ದವರೂ ಕೂಡ ಈಗ ಹೊಸ ಹೊಸ ಅವಕಾಶಗಳಿಗೆ ಪರದಾಡುವ ಪರಿಸ್ಥಿತಿ ಮಾಮೂಲು ಆಗಿದೆ. ಇದರ ನಡುವೆಯೂ ಸ್ಯಾಂಡಲ್‌ ವುಡ್‌ ಗೆ ಈಗಷ್ಟೇ ಎಂಟ್ರಿಯಾದ ಯಶ್‌ ಶಿವಕುಮಾರ್‌ಗೆ ಕೈ ತುಂಬಾ ಅವಕಾಶ ಎನ್ನುವುದು ವಿಶೇಷಗಳಲ್ಲೇ ವಿಶೇಷ.

ಇದು ಹೆಸರಿನಲ್ಲೇ ʼಯಶ” ಸ್ಸು ಇದಿದ್ದರ ರಹಸ್ಯವೋ, ಅದೃಷ್ಟವೋ?

ಬೆಂಗಳೂರು ಬೆಡಗಿ ಯಶ್‌ ಕುಮಾರ್‌ ಇಂಜಿನಿಯರ್‌  ಪದವೀಧರೆ. ಮಂಗಳೂರಿನ ಆಳ್ವಾಸ್‌ ಕಾಲೇಜು ವಿದ್ಯಾರ್ಥಿನಿ. ಆಲ್ಲೇ ಒದುತ್ತಿದ್ದಾಗಲೇ ಫ್ಯಾಷನ್‌ ಎಬಿಸಿಡಿ ಸ್ಪರ್ಧೆಯಲ್ಲಿ ಭಾಗವಹಿಸಿ, ಮಿಸ್‌ ಕರ್ನಾಟಕ ಕಿರೀಟ್ ಮುಡಿಗೇರಿಸಿಕೊಂಡಿದ್ದರು. ಆದಾದ ಮೇಲೆಯೇ ʼಪದವಿ ಪೂರ್ವʼ ಚಿತ್ರಕ್ಕೆ ಆಡಿಷನ್‌ ಮುಗಿಸಿದ್ದರಂತೆ. ಆದಾಗಿ ಒಂದು ವರ್ಷಕ್ಕೆ ಆ ಚಿತ್ರಕ್ಕೆ ಆಯ್ಕೆಯಾಗಿದ್ದು. ಅದೃಷ್ಟ ಅಂದ್ರೆ, ಈ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ ನಂತರ ಅವರಿಗೆ ಮತ್ತೊಂದು ಆಫರ್‌ ಬಂತು, ಅದುವೇ ಶಿವರಾಜ್‌ ಕುಮಾರ್‌ ಅಭಿನಯದ ʼಶಿವಪ್ಪ ʼಚಿತ್ರ.

ಕಲಾವಿದರಿಗೆ ಅದೃಷ್ಟ ಖುಲಾಯಿಸುವುದು ಹೀಗೆಯೇ. ಕೆಲವರು ಒಂದು ಸಿನಿಮಾ ಮಾಡಿ, ಮತ್ತೊಂದು ಚಿತ್ರಕ್ಕೆ ಪರದಾಡಿದ ಉದಾಹರಣೆಗಳು ಸಾಕಷ್ಟಿವೆ. ಅದು ಕೂಡ ಸಕ್ಸಸ್‌ ಸಿನಿಮಾ ಮಾಡಿಯೂ ಹೊಸಬರು ಮತ್ತೊಂದು ಚಿತ್ರಕ್ಕೆ ಹೆಣಗಾಡಿದ್ದೂ ಇದೆ. ಅಂತಹ ಉದಾಹರಣೆಗಳ ನಡುವೆ ಯಶ್‌, ಅದೃಷ್ಟವಂತೆ ಎಂದೆನಿಸುವುದು ಇದೇ ಕಾರಣಕ್ಕೆ. ʼಶಿವಪ್ಪʼ ನಂತರವೀಗ ಕಿರುತೆರೆಯ ಜನಪ್ರಿಯ ನಟ ಕಿರಣ್‌ ರಾಜ್‌ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವʼಬಹದ್ದೂರ್‌ ಗಂಡುʼ ಚಿತ್ರಕ್ಕೆ ಈಗಷ್ಟೇ ನಾಯಕಿ ಆಗಿದ್ದಾರೆ. ಅವರ ಮಟ್ಟಿಗೆ ಇದು ಅದೃಷ್ಟವೇ? ನಿಜವೂ ಹೌದು ಎನ್ನುತ್ತಾರೆ ನಟಿ ಯಶ್‌ ಶಿವಕುಮಾರ್.

Related Posts

error: Content is protected !!