ವಾಲ್ಮೀಕಿ ರತ್ನ ಪ್ರಶಸ್ತಿಗೆ ಪಾತ್ರವಾದ ಕಿಚ್ಚ ಸುದೀಪ್

ನಟ ಕಿಚ್ಚ ಸುದೀಪ್‌ ಅವರಿಗೆ ಮೊನ್ನೆಯಷ್ಟೇ ದುಬೈನಲ್ಲಿ ʼಕನ್ನಡ ಕುಲತಿಲಕʼ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈಗ ದಾವಣಗೆರೆ ಸಮೀಪದ ರಾಜನಹಳ್ಳಿ ವಾಲ್ಮೀಕಿ ಗುರುಪೀಠವೂ ಈ ಬಾರಿಯʼ ವಾಲ್ಮೀಕಿ ರತ್ನʼ ಪ್ರಶಸ್ತಿ ನೀಡಿದೆ. ಫೆ. 9  ರಂದು ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ ನಡೆಯಲಿದ್ದು,  ಅಲ್ಲಿ ನಟ ಸುದೀಪ್‌ ಅವರಿಗೆ ವಾಲ್ಮೀಕಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಜಾತ್ರೆಗೆ ಸುಮಾರು 3  ಲಕ್ಷ ಜನ ಭಕ್ತರು ಸೇರುವ ನಿರೀಕ್ಷೆ ಇದ್ದು, ಅಷ್ಟು ಜನರ ಸಮ್ಮುಖದಲ್ಲಿಯೇ ನಟ ಸುದೀಪ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

 

Related Posts

error: Content is protected !!