ರೈತರ ಪ್ರತಿಭಟನೆ : ಕನ್ನಡದ ಸ್ಟಾರ್ಸ್ ಮೌನವೇಕೆ?

ಸದಾ ನಾಡು -ನುಡಿಯ ಪರವಾಗಿ ನಿಂತ ಸ್ಟಾರ್‌ಗಳು ಈಗಲೂ…

ರೈತರ ಪ್ರತಿಭಟನೆಯ ಬಿಸಿ ಈಗ ಸಿನಿಮಾ ತಾರೆಯರಿಗೂ ತಟ್ಟಿದೆ. ಬಾಲಿವುಡ್‌ನಲ್ಲಿ ಈಗ ನಟ-ನಟಿಯರು ಈಗ ಬಗ್ಗೆ ಮಾತನಾಡಲೇಬೇಕಾದ ಅನಿವಾರ್ಯತೆ ಸೃಷ್ಟಿ ಆಗಿದೆ. ಕಲಾವಿದರು ತಮ್ಮ ನಿಲವು ಸ್ಪಷ್ಟ ಪಡಿಸಬೇಕೆಂದು ಅಲ್ಲಿ ಅಭಿಮಾನಿಗಳ ಕಡೆಯಿಂದಲೇ ಒತ್ತಡ ಹೆಚ್ಚಿದೆ. ಸದ್ಯಕ್ಕೆ ಈ ಪರಿಸ್ಥಿತಿ ಸ್ಯಾಂಡಲ್‌ ವುಡ್‌ನಲ್ಲಿ ಇಲ್ಲ ಎನ್ನುವಂತಿದ್ದರೂ, ಕಲಾವಿದರು ತಮ್ಮ ಬದ್ಧತೆ ತೋರಬೇಕೆನ್ನುವ ಮಾತುಗಳು ಕೇಳಿಬರುತ್ತಿವೆ.

ಪರ-ವಿರೋಧ ಎನ್ನುವುದಕ್ಕಿಂತ ರೈತರ ಪ್ರತಿಭಟನೆ ವಿಚಾರದಲ್ಲಿ ಕಲಾವಿದರು ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು ಸೋಷಲ್‌ ಮೀಡಿಯಾದಲ್ಲಿ ಕೆಲವರು ಒತ್ತಾಯಿಸಿದ್ದಾರೆ. ಈ ಮಧ್ಯೆಯೇ ಶುಕ್ರವಾರ ಬಹುಭಾಷೆ ನಟಿ ಪ್ರಣೀತಾ, ಟ್ವೀಟ್‌ ಮೂಲಕ ರೈತರ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿರುವುದು ಪರ-ವಿರೋಧ ಅಭಿಪ್ರಾಯಕ್ಕೆ ಕಾರಣವಾಗಿದೆ.

” ಕಾನೂನು ಉಲ್ಲಂಘಿಸಿ ಸಮಾಜದ ಸುವ್ಯವಸ್ಥೆಗೆ ಧಕ್ಕೆ ತರುವ ಸಂಘಟಿತ ಪ್ರಯತ್ನಗಳು ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಈಗಲೂ ಮಾತುಕತೆಗೆ ಸಿದ್ಧವಿದೆ. ಕಾಯ್ದೆಗಳು ಉತ್ತಮವಾಗಿದೆ. ಇತ್ತೀಚೆಗೆ ಮಂಡನೆಯಾದ ಬಜೆಟ್‌ ಭಾರತವು ದಶಕಗಳಲ್ಲಿ ಕಂಡ ಅತ್ಯಂತ ಸುಧಾರಿತ ಬಜೆಟ್‌ ಇದಾಗಿದೆ ʼ ಎಂಬುದು ನಟಿ ಪ್ರಣೀತಾ ಅವರ ಟ್ವೀಟ್‌ ನ ಸಾರಾಂಶ.

ಉಳಿದಂತೆ ಕುತೂಹಲ ಇರೋದು ದರ್ಶನ್‌, ಸುದೀಪ್‌, ಶಿವರಾಜ್‌ ಕುಮಾರ್‌, ಯಶ್‌, ಪುನೀತ್‌ ರಾಜ್‌ ಕುಮಾರ್‌ ಸೇರಿದಂತೆ ಇತರೆ ನಟ-ನಟಯರ ಹೇಳಿಕೆಗಳ ಬಗ್ಗೆ. ಹಾಗಂತ ಇವರೆಲ್ಲ ರೈತರ ಪರವಾಗಿ ಮಾತನಾಡಿಲ್ಲ, ಬೀದಿಗಿಳಿದಿಲ್ಲ ಅಂತಲ್ಲ. ಅವರೇನು ಅಂತ ಕನ್ನಡದ ಪ್ರೇಕ್ಷಕರಿಗೆ ಗೊತ್ತು. ಕನ್ನಡ ಭಾಷೆ ಸೇರಿದಂತೆ ನೆಲ-ಜಲದ ಪ್ರಶ್ನೆ ಬಂದಾಗ ಬರೀ ಹೇಳಿಕೆಗಳು ಮಾತ್ರವಲ್ಲ ಅಷ್ಟು ನಟರೂ ಬೀದಿಗಿಳಿದು ಹೋರಾಟ ದಾಖಲಿಸಿದ್ದಾರೆ. ಅಷ್ಟಾಗಿಯೂ ಈಗ ದೇಶಾದ್ಯಂತ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿರುವ ಸಂದರ್ಭದಲ್ಲಿ ಅವರ ನಿಲುವೇನು ಅನ್ನೋದು ಜನ ಸಾಮಾನ್ಯರಲ್ಲಿರುವ ಕುತೂಹಲದ ಪ್ರಶ್ನೆ.

Related Posts

error: Content is protected !!