ಶ್ರೀನಗರ ಕಿಟ್ಟಿ ಈಗ ವಿಲನ್‌ , ಬುದ್ಧಿವಂತನ ಎದುರು ತೊಡೆ ತಟ್ಟಿ ನಿಂತನೆ ಗಾಳಿ ಸೀನ ?

ಇದು ಉಪ್ಪಿ- ಕಿಟ್ಟಿ ಜುಗಲ್ ಬಂದಿ

ನಟ ಶ್ರೀನಗರ ಕಿಟ್ಟಿ ಈಗ ಹೊಸ ಅವತಾರಕ್ಕೆ ರೆಡಿ ಆಗಿದ್ದಾರೆ. ಬೆಳ್ಳಿತೆರೆಯಲ್ಲಿ ಅವರು ಹೀರೋ ಆಗಿ ಮಿಂಚಿದವರು. ಆದರೆ ಈಗ ಆ ಬಾರ್ಡರ್‌ ದಾಟಿಯೂ ವಿಲನ್‌ ಆಗಿ ಅಬ್ಬರಿಸಲು ಮುಂದಾಗಿದ್ದಾರೆ. ಹಾಗಂತ ಇವರಿಗೂ ಅವರೇನು ಹೀರೋ ಲೈನ್‌ ಕ್ರಾಸ್‌ ಮಾಡಿಲ್ಲ ಅಂತಲ್ಲ. ಈಗಾಗಲೇ ʼಬಾಲ್‌ಪೆನ್‌ʼ,ʼ ಸಿಂಪಾಲ್ಲಾಗಿ ಒಂದ್‌ ಲವ್‌ ಸ್ಟೋರಿʼ, ʼಭಜರಂಗಿʼ ಹಾಗೂ ʼನನ್‌ ಲೈಪ್‌ ಅಲ್ಲಿʼ ಎನ್ನುವ ಚಿತ್ರಗಳಲ್ಲಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ನಿಮಗೂ ಗೊತ್ತು. ಅಷ್ಟೇ ಯಾಕೆ, ಈಗ ಶರಣ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ʼಅವತಾರ ಪುರುಷʼ ಹಾಗೂ ʼಗರುಡʼ ಚಿತ್ರಗಳಲ್ಲೂ ಅವರದ್ದು ಗೆಸ್ಟ್‌ ಅಫೀರಿಯನ್ಸ್ ಇದೆ. ಇಷ್ಟಾಗಿಯೂ ಈಗವರು ಹೀರೋಗಿರಿ ಕ್ರಾಸ್‌ ಮಾಡಿ ಬಣ್ಣ ಹಚ್ಚುತ್ತಿರುವುದು ವಿಲನ್‌ ಪಾತ್ರಕ್ಕೆ. ಅದರಲ್ಲೂ ರಿಯಲ್‌ ಸ್ಟಾರ್‌ ಉಪೇಂದ್ರ ಎದುರು. ಹಾಗೆಯೇ ಅವರು ವಿಲನ್‌ ಆಗಿರುವುದು ಫಸ್ಟ್‌ ಟೈಮ್.‌

ಯಾವುದು ಆ ಚಿತ್ರ?

ಉಪೇಂದ್ರ ನಾಯಕರಾಗಿ ಅಭಿನಯಿಸಿರುವ ಚಿತ್ರಗಳ ಪೈಕಿ ಈಗ ಹೆಚ್ಚು ಸುದ್ದಿಯಲ್ಲಿರುವ ಚಿತ್ರಗಳಂದ್ರೆ ʼಕಬ್ಜʼ ಹಾಗೂʼ ಬುದ್ಧಿವಂತ 2ʼ. ಇವೆರೆಡು ಚಿತ್ರಗಳ ಪೈಕಿ ʼಬುದ್ಧಿವಂತ 2′ ಹಲವು ಕಾರಣಕ್ಕೆ ಕುತೂಹಲ ಮೂಡಿಸಿದ ಚಿತ್ರ. ʼಬುದ್ಧಿವಂತʼ ಉಪೇಂದ್ರ ಅವರ ಸಿನಿ ಜರ್ನಿಯ ಸ್ಪೆಷಲ್ ಚಿತ್ರ. ಕನ್ನಡದ ಬ್ಲಾಕ್‌ ಬಸ್ಟರ್‌ ಚಿತ್ರವೂ ಹೌದು. ಕತೆ, ಚಿತ್ರಕತೆ ಎನ್ನುವುದಕ್ಕಿಂತ ಅವರ ವಿಶಿಷ್ಟ ಮ್ಯಾನರಿಸಂ ಹಾಗೂ ಕಿಕ್‌ ನೀಡುವ ಡೈಲಾಗ್‌ ಮೂಲಕವೇ ಸಖತ್‌ ಹಿಟ್‌ ಆಗಿದ್ದು ಇತಿಹಾಸ. ಅದರ ‘ ಪಾರ್ಟ್‌ 2’ ಈಗ ʼಬುದ್ಧಿವಂತ 2ʼ ಹೆಸರಲ್ಲಿ ಬರುತ್ತಿರುವುದು ಹಳೇ ಸುದ್ದಿ.

ಕಿಟ್ಟಿ ಕರೆತಂದರು ಜಯರಾಂ..

ಕ್ರೆಸ್ಟಲ್‌ ಪಾರ್ಕ್‌ ಪ್ರೊಡಕ್ಷನ್ ಮೂಲಕ ನಿರ್ಮಾಪಕ ಟಿ.ಆರ್‌.ಚಂದ್ರಶೇಖರ್‌ ನಿರ್ಮಾಣ ಮಾಡುತ್ತಿರುವ ಚಿತ್ರ ಇದು. ಇದಕ್ಕೆ ಆಕ್ಷನ್‌ ಕಟ್‌ ಹೇಳುತ್ತಿರುವವರು ಕ್ರಿಯೇಟಿವ್ ಯಂಗ್ ಡೈರೆಕ್ಟರ್ ಜಯರಾಂ ಭದ್ರಾವತಿ.ಇವರಿಗಿದು ಎರಡನೇ ಚಿತ್ರ. ಅದಕ್ಕೂ ಮೊದಲು ʼಚೆರಿʼ ಹೆಸರಿನ ಚಿತ್ರ ನಿರ್ದೇಶಿಸಿದ್ದರು. ಅದಕ್ಕಿಂತ ಹೆಚ್ಚಾಗಿ ನಿರ್ದೇಶಕ ಆರ್.‌ ಚಂದ್ರು ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಉಪೇಂದ್ರ ಅಭಿನಯದ ‘ಬ್ರಹ್ಮ’ ಚಿತ್ರಕ್ಕೂ ಜಯರಾಂ ಸಹಾಯಕ ನಿರ್ದೇಶಕರಾಗಿದ್ದರು. ಅದೇ ನಂಟಿನ ಮೂಲಕ ‘ಬುದ್ಧಿವಂತ 2’ ನಲ್ಲಿ ಉಪ್ಪಿಗೆ ಜೋಡಿಯಾಗಿರುವ ಜಯರಾಂ ಈಗ ಚಿತ್ರದಲ್ಲಿನ ಪ್ರಮುಖ ಪಾತ್ರವೊಂದಕ್ಕೆ ಕನ್ನಡದ ಮತ್ತೊಬ್ಬ ಸ್ಟಾರ್ ಅನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅವರೇ ಶ್ರೀನಗರ ಕಿಟ್ಟಿ.ಅವರಿಲ್ಲಿ ವಿಲನ್!

ವಿಲನ್ ಅನ್ನೋದು ನಿಜ,ಆದರೆ…?

ಚಿತ್ರದಲ್ಲಿ ನಟ ಶ್ರೀನಗರ ಕಿಟ್ಟಿಅವರದ್ದು ವಿಲನ್‌ ಪಾತ್ರ.
ಸದ್ಯಕ್ಕೆ‌ಇದಿಷ್ಟೇ ಗೊತ್ತಾಗಿರುವ ವಿಚಾರ. ಉಳಿದಂತೆ ಆ ಪಾತ್ರದ ವಿವರ ಇನ್ನು ಬಹಿರಂಗವಾಗಿಲ್ಲ. ಆದರೆ ಫಸ್ಟ್ ಲುಕ್ ಹೊರ ಬಿದಿದ್ದೆ. ಸಖತ್ ಗಡ್ಡ ದಾರಿಯಾಗಿರುವ ಕಿಟ್ಟಿ, ದೊಡ್ಡ ಗ್ಯಾಂಗ್ ಸ್ಟರ್ ಅಂತೆ.ಈ ಬಗ್ಗೆ ನಿರ್ದೇಶಕ ಜಯರಾಂ ಹೇಳುವುದಿಷ್ಟು ; ಅವರದ್ದು ಇಲ್ಲಿ ಒಂದು ವಿಲನ್ ಲುಕ್. ಅವರ ಕರಿಯರ್ ನಲ್ಲೇ ಒಂದು ಪ್ರಮುಖ ಪಾತ್ರ. ಸದ್ಯಕ್ಕೆ ಆ ಪಾತ್ರದ ಡಿಟೈಲ್ಸ್ ಬೇಡ. ಮುಂದೆ ಅವರೇ ಎಲ್ಲವನ್ನು ರಿವೀಲ್ ಮಾಡಲಿದ್ದಾರೆ. ಆದರೆ ಇಲ್ಲಿ ಉಪ್ಪೇಂದ್ರ ಹಾಗೂ ಶ್ರೀನಗರ ಕಿಟ್ಟಿ ಅವರ ಜುಗಲ್ ಬಂಧಿಯೇ ಅದ್ಬುತವಾಗಿದೆ. ಇಬ್ಬರ ಫ್ಯಾನ್ಸ್ ಗೂ ಹಬ್ಬವೇ’

ಇನ್ನೇರಡು ದಿನಗಳ ಶೂಟ್ ಬಾಕಿ…

‘ಬುದ್ಧಿವಂತ 2’ ಶುರುವಾಗಿದ್ದೇ 2020 ಕ್ಕೂ ಮೊದಲು. ಅಲ್ಲಿಂದ‌ 2020 ಮಾರ್ಚ್ ಹೊತ್ತಿಗೆ ಒಂದಷ್ಟು ಚಿತ್ರೀಕರಣ ಕೂಡ ಪೂರೈಸಿತ್ತು. ಶಿವಮೊಗ್ಗ ಜೈಲಿನಲ್ಲಿ ಅದ್ಭುತವಾದ ಸನ್ನಿವೇಶಗಳಿಗೆ ಶೂಟಿಂಗ್ ಮುಗಿಸಿಕೊಂಡು ಬಂದಿತ್ತು ಚಿತ್ರ ತಂ‌ಡ. ಅಲ್ಲಿಂದ ಕೊರೋನಾ ಬಂತು, ಚಿತ್ರೀಕರಣವನ್ನು ಸ್ಥಗಿತಗೊಂಡಿತ್ತು.‌ಮತ್ತೆ ಚಿತ್ರೀಕರಣ ಶುರು ಮಾಡಿ, ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಇದರಲ್ಲಿ ಶ್ರೀನಗರ ಕಿಟ್ಟಿ ಕೂಡ ಬಹುತೇಕ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರಂತೆ. ಇನ್ನೇರೆಡು ದಿನ ಮಾತ್ರ ಶೂಟಿಂಗ್ ಬಾಕಿ ಇದೆಯಂತೆ. ಇಷ್ಟರಲ್ಲಿಯೇ ಅದು ಕೂಡ ಕಂಪ್ಲೀಟ್ ಆಗಲಿದೆಯಂತೆ. ಅಲ್ಲಿಂದ ಎಲ್ಲವೂ ಅಂದುಕೊಂಡಂತದರೆ, ಶೀಘ್ರವೇ ಚಿತ್ರ ತೆರೆಗೆ ಬರಲಿದೆಯಂತೆ.

Related Posts

error: Content is protected !!