ನಾನು ಅನುಭವಿಸಿದ ನೋವು, ಅವಮಾನ ಯಾರಿಗೂ ಬೇಡ

ನನ್ನ ಹಾಗೆ ನೀವೂ ಕಷ್ಟ ಪಟ್ಟಿದ್ದೀರಿ, ಗೆಲ್ತೀರಿ, ಮುನ್ನುಗ್ಗಿ ಅಂದ್ರು ವಿನೋದ್‌ಪ್ರಭಾಕರ್

“ನಾನು ಅನುಭವಿಸಿದ ನೋವು, ಅವಮಾನದ ಮುಂದೆ ನಿಮ್ಮದೇನೂ ಅಲ್ಲ. ಸಾಕಪ್ಪ ಸಾಕು, ಈ ಬಣ್ಣದ ಬದುಕು ಅಂದಾಗ ಜನರು ಆಶೀರ್ವಾದ ನೀಡಿದ್ರು. ನಿಮ್ಗೆ ಇದೆಲ್ಲ ಅನುಭವ ಆಗಿಲ್ಲ. ಆದ್ರೂ ನನ್ನ ಹಾಗೆಯೇ ನೀವೂ ಕೂಡ ಕಷ್ಟಪಟ್ಟಿದ್ದೀರಿ, ಅದೇ ನಿಮ್ಗೆ ಗೆಲುವು ತಂದುಕೊಡುತ್ತದೆ. ಇಂದಲ್ಲ ನಾಳೆ ಗೆಲುವು ನಿಮ್ಮದೇ, ಮುನ್ನುಗ್ಗಿ…” ನಟ ವಿನೋದ್‌ಪ್ರಭಾಕರ್‌ಸ್ಟಾರ್‌ಆದ ಹಿಂದಿನ ತಮ್ಮ ಕಠಿಣ ಪರಿಶ್ರಮದ ಅನುಭವವನ್ನು “ಸಿನಿಲಹರಿ” ಮುಂದೆ ಹೀಗೆ ತೆರೆದಿಟ್ಟು, ನೀವು ಗೆದ್ದೇ ಗೆಲ್ತೀರಿ ಅಂತ ಹರಿಸಿದರು.

ಅವರು ಈ ಪ್ರೀತಿಯ ಮಾತುಗಳನ್ನು ಹೇಳಿದ್ದು, “ಸಿನಿ ಲಹರಿ” ಕಚೇರಿಗೆ ಭೇಟೀ ನೀಡಿದ ಸಂದರ್ಭ. ವಿನೋದ್‌ಪ್ರಭಾಕರ್‌ಈಗ ಚಂದನವನದ ಬಹು ಬೇಡಿಕೆಯ ಸ್ಟಾರ್‌ನಟ. “ಮರಿ ಟೈಗರ್‌‌” ಅಂತಾನೇ ಜನಪ್ರಿಯತೆ ಪಡೆದ ನಟ. ಫೆ.೫ ರಂದು ತೆರೆ ಕಾಣುತ್ತಿರುವ “ಶ್ಯಾಡೋ” ಸೇರಿದಂತೆ ಸಾಲು ಸಾಲು ಸಿನಿಮಾಗಳಿಗೆ ಅವರು ಹೀರೋ. ಹಾಗೆಯೇ ಈಗವರು, ದೊಡ್ಡದೊಂದು ಬ್ರೇಕಿಂಗ್‌ಸುದ್ದಿ ಕೊಡುವುದಕ್ಕೂ ರೆಡಿ ಆಗಿದ್ದಾರೆ. ಒಂದು ಮೂಲದ ಪ್ರಕಾರ, ಮುಂಬೈನ ದೊಡ್ಡ ಪ್ರೊಡಕ್ಷನ್‌ಹೌಸ್‌ನಿರ್ಮಾಣ ಮಾಡುತ್ತಿರುವ ಅದ್ದೂರಿ ವೆಚ್ಚದ ಪ್ಯಾನ್‌ಇಂಡಿಯಾ ಸಿನಿಮಾಕ್ಕೆ ವಿನೋದ್‌ಪ್ರಭಾಕರ್‌ಹೀರೋ ಅಂತೆ. ಇದಿನ್ನೂ ಕನ್ಫರ್ಮ್‌ಆಗಿಲ್ಲ. ಆದರೆ, ಆ ನಿಟ್ಟಿನಲ್ಲಿ ಮಾತುಕತೆ ನಡೆದಿದೆ ಎನ್ನುವ ಸುದ್ದಿಯಂತೂ ಖಾತರಿ.

ಸ್ಯಾಂಡಲ್‌ವುಡ್‌ಗೆ ಇದಂತೂ ಸೆನ್ಸೇಷನ್‌ಸುದ್ದಿ. ಸದ್ಯಕ್ಕೆ ಹೀಗೆಲ್ಲ ಬ್ಯುಸಿ ಆಗಿರುವ ನಟ ವಿನೋದ್‌ಪ್ರಭಾಕರ್‌, ಇತ್ತೀಚೆಗೆ ಪತ್ನಿ ಸಮೇತ “ಸಿನಿ ಲಹರಿ” ಕಚೇರಿಗೆ ಬಂದಿದ್ದರು. ಇದೊಂದು ಔಪಚಾರಿಕ ಭೇಟಿ ಮಾತ್ರ. ನಮ್ಮ ಮೇಲಿನ ಪ್ರೀತಿ, ಅಭಿಮಾನದ ಮೇರೆಗೆ ತಮ್ಮ ಬ್ಯುಸಿ ಶೆಡ್ಯೂಲ್‌ನಡುವೆಯೂ ಕಚೇರಿಗೆ ಬಂದು ಸುಮಾರು ಅರ್ಧ ತಾಸು ಕಚೇರಿಯಲ್ಲಿದ್ದು ಒಂದಷ್ಟು ಹರಟಿದರು. “ಸಿನಿ ಲಹರಿ” ವೆಬ್‌ಸೈಟ್‌ವೀಕ್ಷಿಸಿ, ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. “ಸಿನಿಲಹರಿ”ಯಲ್ಲಿರುವ ಬರಹಗಳೇ ಅದ್ಭುತವಾಗಿವೆ. ಇಂತಹ ಗುಣಮಟ್ಟ ಮತ್ತು ನಿಖರವಾದ ವರದಿ, ಸುದ್ದಿಗಳು ಚಿತ್ರರಂಗಕ್ಕೆ ಬೇಕು” ಎಂದು ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆ ನಂತರ ಸಜ್ಜುಗೊಳ್ಳುತ್ತಿರುವ “ಸಿನಿಲಹರಿ” ಸ್ಟುಡಿಯೋ ವೀಕ್ಷಿಸಿ, ಖುಷಿಯ ಜೊತೆಗೆ ಅಚ್ಚರಿ ಪಟ್ಟರು. “ಏನೋ ಸಣ್ಣದಾಗಿ ಕಚೇರಿ ಮಾಡಿಕೊಂಡಿದ್ದೀರಿ ಅನ್ಕೊಂಡ್ರೆ, ತುಂಬಾನೆ ಕಷ್ಟಪಟ್ಟು ದೊಡ್ಡ ಸ್ಟುಡಿಯೋವನ್ನೇ ಮಾಡಿದ್ದೀರಿ. ತುಂಬಾ ವರ್ಷಗಳ ಕಾಲ ಪ್ರಾಮಾಣಿಕ ಪತ್ರಿಕೋದ್ಯಮವನ್ನೇ ನಂಬಿಕೊಂಡ ಬಂದ ನೀವು, ಇವತ್ತು ಅಷ್ಟೇ ಶ್ರದ್ದೆ ಮತ್ತು ನಂಬಿಕೆಯಿಂದ ಇಷ್ಟೇಲ್ಲ ಮಾಡಿದ್ದೀರಿ ಅಂತಂದ್ರೆ ಗೆದ್ದೇ ಗೆಲ್ಲುತ್ತೀರಿ, ಒಳ್ಳೆಯದಾಗಲಿʼ ಅಂತ ಹರಸಿದರು. ಕೆಲಸ ಕಳೆದುಕೊಂಡು ನಾವು ಅನುಭವಿಸಿದ ಕ್ಷಣಗಳು, ಆನಂತರ ನಮ್ಮದೇ ಬದುಕು ಕಟ್ಟಿಕೊಳ್ಳಬೇಕೆಂದು ಆರಂಭಿಸಿದ “ಸಿನಿ ಲಹರಿʼಯ ಶುರುವಿನ ದಿನಗಳು, ಆ ನಂತರದ ಜರ್ನಿಯ ಕ್ಷಣಗಳನ್ನು ತಾಳ್ಮೆಯಿಂದ ಕೇಳಿದ ವಿನೋದ್‌ಪ್ರಭಾಕರ್‌, ನಾನು ಅನುಭವಿಸಿದ ನೋವು, ಅವಮಾನ, ನಿಂದನೆಗಳ ಮುಂದೆ ನಿಮ್ದೇನು ಅಲ್ಲ ಅಂತೆನಿಸುತ್ತೆ. ನಟ ಪ್ರಭಾಕರ್‌ಅವರ ಮಗ ಎನ್ನುವ ಪರಿಚಯ ನನಗಿದ್ದರೂ, ಅದೆಲ್ಲ ಉದ್ಯಮದ ಮುಂದೆ ವರ್ಕೌಟ್‌ಆಗಲಿಲ್ಲ. ಅದರ ಪರಿಣಾಮ ಸೋಲು, ನೋವು ನನ್ನನ್ನೇ ಹೈರಾಣಾಗಿಸಿತುʼ ಅಂತ ಒಂದು ಕ್ಷಣ ಭಾವುಕರಾದರು ವಿನೋದ್‌ಪ್ರಭಾಕರ್.‌

ಮರಿ ಟೈಗರ್‌ವಿನೋದ್‌ಪ್ರಭಾಕರ್‌ಮಾತು ಮುಂದುವರೆಸಿದರು. ” ನಮ್ಮ-ನಿಮ್ಮಂತವರಿಗೆ ಸಕ್ಸಸ್‌ಸುಮ್ಮನೆ ಸಿಗೋದಿಲ್ಲ. ಕಷ್ಟಪಟ್ಟ ಮೇಲೆಯೇ ಗೆಲುವು. ನನಗೂ ಕೂಡ. ಸಾಕಪ್ಪ ಸಾಕು, ಈ ಸೋನು, ನೋವು ಅಂದಾಗ ಜನ ಕೈ ಹಿಡಿದರು. ಕೊನೆಗೂ ಸಕ್ಸಸ್‌ಕಂಡೆ. ಅಲ್ಲಿಂದ ನನ್ನದೇ ಒಂದು ಸೂತ್ರ ಇಟ್ಕೊಂಡು ಸಿನಿಮಾ ಮಾಡುತ್ತಾ ಬರುತ್ತಿದ್ದೇನೆ. ನಾನು ಯಾರನ್ನೂ ಮೋಸ ಮಾಡಲಾರೆ. ಯಾರಿಗೂ ಅನಗತ್ಯ ಬಂಡವಾಳ ಹಾಕುವಂತೆ ಹೇಳಲಾರೆ. ನನ್ನ ಸಿನಿಮಾದ ಬಜೆಟ್‌ಇಷ್ಟು, ಅದರಿಂದ ಬರುವ ಆದಾಯ ಇಷ್ಟು, ಬೇಕಾದ್ರೆ ಸಿನಿಮಾ ಮಾಡಿ, ಇಲ್ಲ ಅಂದ್ರೆ ಬೇರೆ ಯಾರನ್ನಾದರೂ ನೋಡಿಕೊಳ್ಳಿ ಅಂತ ಹೇಳಿ ಬಿಡುತ್ತೇನೆ. ಇಷ್ಟು ನಿಷ್ಟುರತೆಯಿಂದ ಯಾರು ಹೇಳುತ್ತಾರೋ ಗೊತ್ತಿಲ್ಲ. ಇದು ನನ್ನ ಪಾಲಿಸಿʼ ಎಂದು ಹೇಳುತ್ತಾ ಸಿನಿ ಲಹರಿಗೆ ಆಲ್‌ದಿ ಬೆಸ್ಟ್‌ಹೇಳಿ, ಶೂಟಿಂಗ್‌ಬ್ಯುಸಿ ಅಂತ ಕಾರು ಹತ್ತಿದರು.

Related Posts

error: Content is protected !!