ʼಕಾನೂನಿನ ಮೇಲೆ ನನಗೆ ಗೌರವವಿದೆ, ದೇವರ ದಯೆಯಿಂದ ಕೆಟ್ಟದ್ದನ್ನು ಒಳ್ಳೆಯದರಿಂದ ಜಯಿಸುವೆʼ

ಕುಟುಂಬ ಸಮೇತ ದೇವರ ದರ್ಶನ ಪಡೆದ ನಟಿ ರಾಗಿಣಿ ತಮ್ಮ ಮೇಲಿನ ಆರೋಪಕ್ಕೆ ರಿಯಾಕ್ಷನ್‌ ಕೊಟ್ಟಿದ್ದೇನು….?

ಗ್ಲಾಮರಸ್‌ ನಟಿ ರಾಗಿಣಿ ಮತ್ತೆ ಬಂದಿದ್ದಾರೆ. ಆಗಿದ್ದಾಯ್ತು, ಮುಂದೇ ಹೋಗೋಣ ಎನ್ನುವಂತೆ ಅವರೀಗ ಹೊಸ ಉತ್ಸಾಹ ತುಂಬಿಕೊಂಡು ಮತ್ತೆ ನಟಿಯಾಗಿ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.


ಸದ್ಯಕ್ಕೆ ಅವರ ಮೊದಲು ಯಾವ ಸಿನಿಮಾ ಟೀಮ್‌ ಮೂಲಕ ಕ್ಯಾಮೆರಾ ಎದುರಿಸಲಿದ್ದಾರೆನ್ನುವುದು ಸಿನಿಮಾ ಪ್ರೇಕ್ಷಕರಲ್ಲಿರುವ ಕುತೂಹಲ. ಅವರು ನಾಯಕಿ ಆಗಿರುವ “ಗಾಂಧಿಗಿರಿʼ ಈಗ ತೆರೆ ಬರಬೇಕಿದೆ. ಇನ್ನೇರೆಡು ಪ್ರಾಜೆಕ್ಟ್‌ ಒಪ್ಪಿಕೊಂಡಿದ್ದಾಗಿಯೂ ಈ ಮುಂಚೆ ಹೇಳಿಕೊಂಡಿದ್ದರು. ಅವೆಲ್ಲವುಗಳ ಕತೆ ಏನೋ ಗೊತ್ತಿಲ್ಲ. ಆದರೆ ಈಗ ಅವರನ್ನೇ ಹಾಕಿಕೊಂಡು ಒಂದು ತಂಡ ಸಿನಿಮಾ ಮಾಡಲು ಹೊರಟಿದೆ.

ಆ ವಿಚಾರ ಇಷ್ಟರಲ್ಲಿಯೇ ಬಹಿರಂಗವಾಗುವುದು ಕೂಡ ಗ್ಯಾರಂಟಿ ಇದೆ. ಈ ನಡುವೆಯೇ ಈಗ ರಾಗಿಣಿ, ಶನಿವಾರ ಕುಟುಂಬದೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸದ್ಯ ಕುಟುಂಬದವರ ಜತೆಗೆ ಒಂದಷ್ಟು ದಿನ ಕಾಲ ಕಳೆಯಬೇಕಿದೆ ಅಂತಲೂ ಹೇಳಿಕೊಂಡಿದ್ದಾರೆ. ಉಳಿದಂತೆ ಸೋಷಲ್‌ ಮೀಡಿಯಾದಲ್ಲಿ ಅವರು ಒಂದಷ್ಟು ವಿಚಾರವನ್ನು ಮನ ಬಿಚ್ಚಿ ಹೇಳಿಕೊಂಡಿರುವುದು ವಿಶೇಷ . ಸರ್ವ ಶಕ್ತನಾದ ದೇವರ ಆಶೀರ್ವಾದಿಂದ ನಾನು ಕೆಟ್ಟದ್ದನ್ನು ಒಳ್ಳೆಯವರಿಂದ ಜಯಸುವೆ. ಅದರ ಮೇಲೆ ನನಗೆ ನಂಬಿಕೆಯಿದೆ ಎಂದು ರಾಗಿಣಿ ಹೇಳಿಕೊಂಡಿದ್ದಾರೆ.

ಅವರಿಲ್ಲಿ ಹೇಳಿಕೊಂಡಿರುವುದಿಷ್ಟು…” ಹೊಸ ವರ್ಷ ಜಗತ್ತಿಗೆ ಅದ್ಭುತವಾದ ಮೈಲುಗಲ್ಲು ಸ್ಥಾಪಿಸಲಿ. ಕಾನೂನು ಮತ್ತು ಕಾನೂನು ವ್ಯವಸ್ಥೆಯ ಮೇಲೆ ನನಗೆ ಬಲವಾದ ನಂಬಿಕೆ ಇದೆ. ಪ್ರತಿಯೊಬ್ಬ ನಾಗರಿಕರಂತೆ ನಾನು ಕೂಡ ನನ್ನ ಹಕ್ಕುಗಳನ್ನು ಯಾವಾಗಲೂ ಗೌರವಿಸುತ್ತೇನೆ. ಭಾರತದ ಸಂವಿಧಾನದ ಅಡಿಯಲ್ಲಿಯೇ ನಮ್ಮ ಹಕ್ಕುಗಳ ರಕ್ಷಣೆ ಇದೆ. ಅದು ನನಗೆ ಖಚಿತವಿದೆ. ಸರ್ವಶಕ್ತನಾದ ದೇವರ ಆಶೀರ್ವಾದಿಂದ ನಾನು ಕೆಟ್ಟದ್ದನ್ನು ಒಳ್ಳೆಯದರಿಂದ ಜಯಸುತ್ತೇನೆ. ನನ್ನ ಶಕ್ತಿ ನನ್ನ ಕುಟುಂಬ. ಹಾಗೆಯೇ ನನ್ನ ಅಭಿಮಾನಿಗಳು ಮತ್ತು ಬೆಂಬಲಿಗರು. ಇದು ನನ್ನ ಎಲ್ಲ ಪ್ರಯತ್ನಗಳಲ್ಲಿ ವಿಜಯಶಾಲಿಯಾಗಿ ಹೊರಬರಲು ಸಹಾಯ ನೀಡುತ್ತದೆʼ ಎಂದಿದ್ದಾರೆ.ಹಾಗೆಯೇ ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿರುವ ರಾಗಿಣಿ, ಹೊಸ ವರ್ಷ ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿ ತರಲಿ ಎಂದಿದ್ದಾರೆ.

Related Posts

error: Content is protected !!