ಟಾಲಿವುಡ್ ನಲ್ಲಿ ರಾಬರ್ಟ್‌ ರಿಲೀಸ್‌ ಗೆ ವಿರೋಧ , ದರ್ಶನ್‌ ಆಕ್ರೋಶಕ್ಕೆ ಫಿಲ್ಮ್‌ ಚೇಂಬರ್‌ ತತ್ತರ

ಭಾನುವಾರವೇ ಸೌತ್‌ ಸಿನಿಮಾ ಇಂಡಸ್ಟ್ರಿ ವಾಣಿಜ್ಯ ಮಂಡಳಿ ಸಭೆ – ಅಧ್ಯಕ್ಷ ಜೈರಾಜ್‌ ಭರವಸೆ


ಬಹುನಿರೀಕ್ಷಿತ ” ರಾಬರ್ಟ್‌ʼ ಚಿತ್ರದ ಬಿಡುಗಡೆಗೆ ತೆಲಗು ಚಿತ್ರರಂಗ ಅಡ್ಡಿಯಾಗಿರುವ ವಿಚಾರ ಈಗ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ತೆಲುಗು ಚಿತ್ರರಂಗದ ಹೊಸ ನೀತಿ ವಿರುದ್ಧ ದರ್ಶನ್‌ ಗುಟುರು ಹಾಕಿದ್ದು, ಸೌತ್‌ ಸಿನಿಮಾ ಇಂಡಸ್ಟ್ರಿಯಲ್ಲೇ ತಲ್ಲಣ ಹುಟ್ಟಿದೆ. ಇದೀಗ ಕರ್ನಾಟಕ ವಾಣಿಜ್ಯ ಮಂಡಳಿ ಕೂಡ ಎಚ್ಚೆತ್ತುಕೊಂಡಿದೆ. ಭಾನುವಾರ ಈ ಸಂಬಂಧ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಸೇರುವುದು ಗ್ಯಾರಂಟಿ ಆಗಿದೆ. ಅಲ್ಲಿಯೇ “ರಾಬರ್ಟ್‌‌ʼ ಚಿತ್ರದ ಬಿಡುಗಡೆ ಬಿಕ್ಕಟ್ಟು ಬಗೆಹರಿಸುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಧ್ಯಕ್ಷ ಜೈ ರಾಜ್‌ ಭರವಸೆ ಕೊಟ್ಟಿದ್ದಾರೆ.

ʼರಾಬರ್ಟ್‌ʼ ಚಿತ್ರದ ಬಿಡುಗಡೆಗೆ ತೆಲುಗು ಚಿತ್ರರಂಗ ಅಡ್ಡಿಯಾಗಿದ್ದರ ವಿರುದ್ಧ ಶುಕ್ರವಾರ ಬೆಳಗ್ಗೆ ನಟ ದರ್ಶನ್‌ , ಕರ್ನಾಟಕ ವಾಣಿಜ್ಯ ಮಂಡಳಿ ಭೇಟಿ ನೀಡಿ ದೂರು ಸಲ್ಲಿಸಿದರು. ಆ ನಂತರ ವಾಣಿಜ್ಯ ಮಂಡಳಿ ಆಧ್ಯಕ್ಷ ಜೈರಾಜ್‌ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ರಾಬರ್ಟ್‌ ಚಿತ್ರದ ಬಿಡುಗಡೆ ತೆಲುಗಿನಲ್ಲಿ ವಿರೋಧ ಅಗಿಲ್ಲ. ಆದರೆ ಮಾರ್ಚ್‌ 11 ರಂದೇ ತೆಲುಗಿನಲ್ಲೂ ಒಂದುಅದ್ದೂರಿ ವೆಚ್ಚದ ಚಿತ್ರ ತೆರೆ ಕಾಣುತ್ತಿದೆ. ಹಾಗಾಗಿ ಒಂದಷ್ಟು ಗೊಂದಲ ನಿರ್ಮಾಣವಾಗಿದೆ. ಭಾನುವಾರವೇ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಕರೆಯುವಂತೆ ಕೋರಲಾಗುವುದು. ಅಲ್ಲಿಯೇ ಈ ಸಮಸ್ಯೆ ಬಗೆಹರಿಸುವುದಾಗಿ ‘ರಾಬರ್ಟ್’‌ ಚಿತ್ರ ತಂಡಕ್ಕೆ ಭರವಸೆ ಕೊಟ್ಟರು.

ತೆಲುಗು ಚಿತ್ರರಂಗದವರ ಸ್ವಪಕ್ಷಪಾತ ನೀತಿ ಬಗ್ಗೆ ಗರಂ ಆಗಿದ್ದ ನಟ, ಇದೆಲ್ಲ ನಡೆಯೋದಿಲ್ಲ. ಅವರ ಸಿನಿಮಾಗಳಿಗೆ ಮುಂದೆ ಕನ್ನಡದಲ್ಲಿ ಸಮಸ್ಯೆಯಾಲಿದೆ ಅಂತ ಗುಟುರು ಹಾಕಿದ್ದರು. ಅಷ್ಟೇ ಅಲ್ಲ, ಶುಕ್ರವಾರ ಬೆಳಗ್ಗೆ ತೆಲುಗು ಚಿತ್ರರಂಗದ ಈ ಇಬ್ಬಗೆ ನೀತಿ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದರು. ಕರ್ನಾಟಕದಲ್ಲಿ ತೆಲುಗು ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳು ಬಿಡುಗಡೆ ಆಗಲು ಯಾವುದೇ ನಿಯಮಗಳು, ತಕರಾರುಗಳು ಇಲ್ಲ. ಆದರೆ ಕನ್ನಡ ಸಿನಿಮಾಗಳು ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಕೆಲವು ಅಲಿಖಿತ ನಿಯಮಗಳನ್ನು ವಿಧಿಸಿರುವುದು ಎಷ್ಟು ಸರಿ ಎಂಬುದು ದರ್ಶನ್ ಅಸಮಾಧಾನ ಹೊರ ಹಾಕಿದ್ದರು.

Related Posts

error: Content is protected !!