ನಾವು ಭಾಷಾಭಿಮಾನಿಗಳಲ್ಲ, ಯಾವುದೇ ಭಾಷಿಗರು ಸಿಕ್ಕರೂ ಅವರ ಭಾಷೆ ಮಾತನಾಡುವ ಜನ ನಾವು – ನಟ ದರ್ಶನ್‌ ಹೀಗೆಲ್ಲ ಸಿಟ್ಟಾಗಿದ್ದು ಯಾಕೆ ?

ʼರಾಬರ್ಟ್ʼ‌  ಚಿತ್ರದ ರಿಲೀಸ್‌ ವಿಚಾರದಲ್ಲಿ ಗರಂ ಆದ ದರ್ಶನ್‌
 

ನಟ ದರ್ಶನ್‌ ಸಿಟ್ಟಾಗಿದ್ದಾರೆ. ಅದರಲ್ಲೂ ಕನ್ನಡಿಗರ ಭಾಷಾಭಿಮಾನದ ಕುರಿತು ಖಾರವಾಗಿ ಮಾತನಾಡಿದ್ದಾರೆ. ” ನಾವು ಭಾಷಾಭಿಮಾನಿಗಳಲ್ಲ, ಯಾವುದೇ ಭಾಷಿಗರು ಸಿಕ್ಕರೂ, ಅವರ ಭಾಷೆಯಲ್ಲಿ ಮಾತನಾಡುವ ಜನ ನಾವುʼ ಅಂತ ಕಿಡಿಕಾರಿದ್ದಾರೆ. ಅವರ ಈ ಸಿಟ್ಟಿಗೆ ಕಾರಣ” ರಾಬರ್ಟ್‌ʼ ಚಿತ್ರದ ಬಿಡುಗಡೆಗೆ ತೆಲುಗು ಚಿತ್ರರಂಗ ಅಡ್ಡಿಯಾಗಿದ್ದು. ಈ ಸಂಬಂಧ ಶುಕ್ರವಾರ ಬೆಳಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡಿಗರು ನಿಜ ಭಾಷಾಭಿಮಾನ ಹೊಂದಿದ್ದರೆ ಇದೆಲ್ಲ ಆಗುತ್ತಿರಲಿಲ್ಲ. ಅದರಿಂದಲೇ ಇದೆಲ್ಲ ಸಮಸ್ಯೆ ಆಗುತ್ತಿದೆ ಅನ್ನೋದು ಅವರ ವಾದ.
ಹಾಗಂತ ಇದು ಅವರ “ರಾಬರ್ಟ್‌ʼ ಚಿತ್ರಕ್ಕೆ ಮಾತ್ರ ಸಂಬಂಧಿಸಿದ್ದೇ ? ” ಖಂಡಿತಾ ಹಾಗಲ್ಲ, ನಾನು ಕೇವಲ ನನ್ನ ಸಿನಿಮಾದ ವಿಚಾರಕ್ಕೆ ಮಾತ್ರ ಮಾತನಾಡುತ್ತಿಲ್ಲ. ಇಲ್ಲಿ ಸಾಕಷ್ಟು ಮಂದಿ ಹೊಸಬರು ಬಂದು ಸಿನಿಮಾ ಮಾಡುತ್ತಿದ್ದಾರೆ. ಅವರು ಒಂದು ಸಿನಿಮಾ ಮಾಡುವಾಗ ಸಾಕಷ್ಟು ಕಷ್ಟಗಳಿವೆ. ಅದನ್ನೆಲ್ಲ ಕಷ್ಟಪಟ್ಟು ಎದುರಿಸಿ, ಅವರು ಒಂದು ಸಿನಿಮಾ ಮಾಡಿ ಹೊರ ತರುವಾಗ ಇಂತಹ ಸಮಸ್ಯೆಗಳಾದರೆ ಅವರ ಗತಿಯೇನು ಎನ್ನುವುದೇ ನನ್ನ ಪ್ರಶ್ನೆ ಎನ್ನುವ ಉತ್ತರ ದರ್ಶನ್‌ ಅವರದ್ದು.

ಇನ್ನು ದರ್ಶನ್‌ ಅವರೇ ಈ ಸ್ವ ಇಚ್ಚೆಯಿಂದ ಈ ವಿಚಾರ ಪ್ರಸ್ತಾಪಿಸಿದರಾ ಅಥವಾ ಚಿತ್ರತಂಡದ ಪರವಾಗಿ ಮತನಾಡಿದರಾ ಎನ್ನುವ ಮಾಧ್ಯಮದ ಪ್ರಶ್ನೆಗೂ ಅವರು ನೀಡಿದ್ದು ಖಡಕ್‌ ಉತ್ತರವೇ. ರಾಬರ್ಟ್‌ ಕುರಿತು ನಾನಿಲ್ಲಿ ಮಾತನಾಡುತ್ತೇನೆಂದರೆ, ಚಿತ್ರ ತಂಡದಲಿದ್ದೇ ಅಲ್ವಾ? ನಿರ್ಮಾಪಕರು ಅನ್ನದಾತರು. ಅವರ ಪರವಾಗಿ ನಾನು ಕೊನೆವರೆಗೂ ನಿಲ್ಲಬೇಕು. ಅದೇ ಕಾರಣಕ್ಕೆ ನಾನಿಲ್ಲಿ ಮಾತನಾಡುತ್ತಿದ್ದೇನೆ ಅಂತ ಉತ್ತರಿಸಿದರು ದರ್ಶನ್.‌

 

Related Posts

error: Content is protected !!