ಸಿನಿಮಾ ಮಂದಿಗೆ ಮಹಿಳಾ ಸಂಗೀತ ನಿರ್ದೇಶಕರು ಕಾಣಲ್ವಾ?

ನಮಗೂ ಅವಕಾಶ ಕೊಡಿ ಅಂದ್ರು ಗಾಯಕಿ ಇಂದು ವಿಶ್ವನಾಥ್‌


ಕನ್ನಡದ ಹೆಸರಾಂತ ಗಾಯಕಿ ಇಂದು ವಿಶ್ವನಾಥ್‌ ಮಹಿಳಾ ಸಂಗೀತ ನಿರ್ದೇಶಕರ ಪರ ಧ್ವನಿ ಎತ್ತಿದ್ದಾರೆ. ” ಅದ್ಯಾಕೋ ಕನ್ನಡದ ಸಿನಿಮಾ ಮಂದಿಗೆ ಮಹಿಳಾ ಸಂಗೀತ ನಿರ್ದೇಶಕರು ಕಾಣುತ್ತಿಲ್ಲ. ಅವಕಾಶ ಕೊಟ್ಟರೆ ನಾವು ಕೂಡ ಸಿನಿಮಾ ಸಂಗೀತ ಮಾಡಿ ತೋರಿಸುತ್ತಿವೆ. ಅದೆಲ್ಲಕ್ಕಿಂತ ಮುಖ್ಯವಾಗಿ ನಮಗೂ ಕೆಲಸ ಸಿಕ್ಕಂತಾಗುತ್ತದೆʼ ಅಂತ ಇಂದು ವಿಶ್ವನಾಥ್‌ ತುಂಬಿದ ಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡರು.
ಹಾಗಂತ ಅವರಲ್ಲಿಗೆ ಅವಕಾಶ ಕೇಳಿಕೊಂಡು ಬಂದಿರಲಿಲ್ಲ. ಬದಲಿಗೆ ಅದು ಪ್ರತಿಷ್ಠಿತ” ಶ್ರೀ ರಾಘವೇಂದ್ರ ಚಿತ್ರವಾಣಿʼ ಪ್ರಶಸ್ತಿ ಪ್ರಧಾನ ಸಮಾರಂಭ. ಅವರು ಕೂಡ ಅಲ್ಲಿ ಪ್ರಶಸ್ತಿ ಪುರಸ್ಕೃತರು. ಶ್ರೀ ರಾಘವೇಂದ್ರ ಚಿತ್ರವಾಣಿಯ ಪ್ರತಿಷ್ಟಿತ ಡಾ. ರಾಜ್‌ ಕುಮಾರ್‌ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಮಹಿಳಾ ಸಂಗೀತ ನಿರ್ದೇಶಕರು ಎದುರಿಸುತ್ತಿರುವ ಸವಾಲು ಹೇಳಿಕೊಂಡರು.
” ಅನೇಕ ಮಂದಿ ಪುರುಷ ಸಂಗೀತ ನಿರ್ದೇಶಕರ ಹಾಗೆ, ನಾವು ಕೂಡ ಸಿನಿಮಾ ಸಂಗೀತ ಮಾಡಲು ಆಸಕ್ತಿ ಹೊಂದಿದ್ದೇವೆ. ಆದರೆ ಅವಕಾಶ ಸಿಗುತ್ತಿಲ್ಲ. ಅದ್ಯಾಕೋ ಸಿನಿಮಾ ಮಂದಿ ಮಹಿಳಾ ಸಂಗೀತ ನಿರ್ದೇಶಕರತ್ತ ಗಮನ ಹರಿಸುತ್ತಿಲ್ಲ. ಇನ್ನಾದರೂ, ಸಿನಿಮಾ ನಿರ್ಮಾಪಕರು ಮಹಿಳಾ ಸಂಗೀತ ನಿರ್ದೇಶಕರಿಗೆ ಅವಕಾಶ ನೀಡಲಿʼ ಎಂದು ವಿನಂತಿಸಿಕೊಂಡರು. ಗಾಯಕಿ ಇಂದು ವಿಶ್ವನಾಥ್‌ ಅವರ ಮಾತಿಗೆ ವೇದಿಕೆಯಲ್ಲಿದ್ದ ಹಿರಿಯ ನಟಿ ತಾರಾ ಪ್ರತಿಕ್ರಿಯಿಸಿ, ಇಲ್ಲಿ ಅಂತಹದ್ದೇನು ತಾರಾತಮ್ಯ ಇಲ್ಲ. ಈಗ ಎಲ್ಲರೂ ಎಲ್ಲಾ ಕ್ಷೇತ್ರದಲ್ಲಿದ್ದಾರೆ. ಅವಕಾಶಗಳು ಸಿಗಬೇಕಿದೆ ಎಂದು ಹೇಳಿದರು.

Related Posts

error: Content is protected !!